ಹಾಸನ, ನ. 4: ಕೊರೊನಾದಿಂದಾಗಿ ಅನೇಕ ದೇವಾಲಯಗಳು ಬಹುಕಾಲದ ವೆರೆಗ ಮುಚ್ಚಿದ್ದವು. ಅದೇ ರೀತಿ ಹಾಸನದಲ್ಲಿನ ಪ್ರಸಿದ್ಧ ದೇವಾಲಯವೆಂದರೆ ಹಾಸನಾಂಬ ದೇವಾಲಯ. ಪ್ರತಿಬಾರಿ ಸಾರ್ವಜಿಕರಿಗೆ ಹಾಸನಾಂಬೆಯ ದರ್ಶನಕ್ಕೆ ಮುಕ್ತ ಅವಕಾಶವನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕರಿಗೆ ವರ್ಚುವಲ್ ವೇದಿಕೆಯ ಮುಖಾಂತರ ಹಾಸನಾಂಬಾ ದರ್ಶನಕ್ಕೆ ಲಭ್ಯವಿದ್ದು, ನಾಳೆಯಿಂದ ದೇವಾಲಯ ತೆರೆಯಲು ತೀರ್ಮಾನಿಸಲಾಗಿದೆ. ವಿವಿಐಪಿಗಳಿಗೆ ಮಾತ್ರ ದೇವಿ ದರ್ಶನದ ಅವಕಾಶ ಕಲ್ಪಿಸಲಾಗಿದೆ.
ದೇವಾಲಯಕ್ಕೆ ಆಗಮಿಸುವ ಸಾರ್ವಜನಿಕರು ನಗರದಲ್ಲಿ ವಿವಿಧೆಡೆ ಅಳವಡಿಸಲಾದ ಎಲ್ಇಡಿ ಪರದೆ ಮೇಲೆ ದೇವಿಯ ದರ್ಶನ ಪಡೆಯಬಹುದಾಗಿದೆ. ಇದರ ಜತೆಗೆ ಹಾಸನಾಂಬಾ ಲೈವ್ 20-20 ಮುಖಾಂತರವೂ ದೇವಿಯ ದರ್ಶನ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ದೇವಾಲಯದ ಸುತ್ತಮುತ್ತ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ. ದೇವಾಲಯಕ್ಕೆ ಬರುವ ಭಕ್ತರು ಎಲ್ಇಡಿಗಳಲ್ಲಿ ದೇವಿಯ ದರ್ಶನ ಹಾಗೂ ಆಶಿರ್ವಾದ ಪಡೆಯಬೇಕು. ಅದೇ ರೀತಿ ದೇವಾಲಯಕ್ಕೆ ಆಗಮಿಸಲು ಸಾಧ್ಯವಿಲ್ಲದವರು ನಗರದ ವಿವಿಧೆಡೆ ಅಳವಡಿಸಿರುವ ಎಲ್ಇಡಿ ಪರದೆಗಳ ಮೇಲೆ ದೇವಿ ದರ್ಶನ ಪಡೆಯಬಹುದು.
ನಾಳೆ ಬೆಳಗ್ಗೆ 11 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು. ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ಪ್ರಸಾದ ಲಭ್ಯವಿರುವುದಿಲ್ಲ. 12 ದಿನಗಳ ಕಾಲ ದೇವರ ದರ್ಶನವನ್ನು ಸ್ಕ್ರೀನಿಂಗ್ ಹಾಗೂ ವೆಬ್ಸಯಟ್ನಲ್ಲಿ ವೀಕ್ಷಿಸಬಹುದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ನಾಳೆ ದೇವಾಲಯಕ್ಕೆ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದರು.