• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ತಿಥಿ ನಟಿ ಪೂಜಾಗೆ ನಿರ್ದೇಶಕಿಯಾಗುವ ಕನಸು..!

padma by padma
in ಮನರಂಜನೆ
ತಿಥಿ ನಟಿ ಪೂಜಾಗೆ ನಿರ್ದೇಶಕಿಯಾಗುವ ಕನಸು..!
0
SHARES
7
VIEWS
Share on FacebookShare on Twitter

ತಿಥಿ ನಟಿ ಪೂಜಾಗೆ ನಿರ್ದೇಶಕಿಯಾಗುವ ಕನಸು..!

ಪೂಜಾ ಹೆಸರಿನಲ್ಲಿ ಕನ್ನಡದಲ್ಲೇ ಒಂದಿಬ್ಬರು ನಟಿಯರು ಬಂದು ಹೋಗಿದ್ದಾರೆ. ಅವರಲ್ಲಿ ಪ್ರತಿಯೊಬ್ಬರು ಕೂಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಕಂಡುಕೊಂಡಿದ್ದಾರೆ. ಅದೇ ದಾರಿಯಲ್ಲಿರುವ ತಿಥಿ ಚಿತ್ರದ ಖ್ಯಾತಿಯ ಪೂಜಾ ತಮ್ಮ ಪ್ರಥಮ ಚಿತ್ರದ ನಟನೆಗೆ ಪ್ರಶಸ್ತಿ ಪಡೆದುಕೊಂಡವರು. ಕಮರ್ಷಿಯಲ್ ಚಿತ್ರದ ಪರದೆಯ ಮೇಲಿನ ನಾಯಕಿಗೆ ಬೇಕಾದ ಎಲ್ಲ ಗುಣಗಳೂ ಇರುವವರು. ಹಾಗಾಗಿಯೇ ಒಂದಷ್ಟು ಮಾಸ್ ಚಿತ್ರಗಳ ಮೂಲಕವೂ ಗುರುತಿಸಲು ತಯಾರಾಗುತ್ತಿದ್ದಾರೆ. ಆದರೆ ಅವರ ಕೆಲವು ಕಂಡೀಶನ್ಸ್‌ ಇವೆ. ಅವುಗಳೇನು ಎನ್ನುವುದನ್ನು ವಿಜಯ ಟಾಕೀಸ್ ಜತೆಗೆ ಹಂಚಿಕೊಂಡಿದ್ದಾರೆ

`ತಿಥಿ’ ನಿಮಗೆ ಯಶಸ್ಸು, ಪ್ರಶಸ್ತಿ ತಂದುಕೊಟ್ಟರೂ ಅವಕಾಶಗಳನ್ನು ನೀಡಲಿಲ್ಲ ಎನ್ನಬಹುದೇ?

ಅವಕಾಶಗಳು ಕೂಡ ಬಂದವು. ಆದರೆ ತಿಥಿಯಂಥ ಪಾತ್ರದಲ್ಲಿ ಕಾಣಿಸಿದ ಮೇಲೆ ನನ್ನ ಇತರ ಸಿನಿಮಾಗಳ ಪಾತ್ರದ ಬಗ್ಗೆಯೂ ಪ್ರೇಕ್ಷಕರಿಗೆ ನಿರೀಕ್ಷೆ ಸಹಜ. ನನಗೂ ನಟನೆಗೆ ಅವಕಾಶ ಇರುವ ಅಂಥ ಪಾತ್ರವೇ ಬೇಕಾಗಿತ್ತು. ಆದರೆ ಬಂದ ಅವಕಾಶಗಳಲ್ಲಿ ಹೆಚ್ಚಿನವುಗಳಲ್ಲಿ ನಾಯಕಿಗೆ ನಟನೆಯ ಅವಕಾಶವೇ ಇರಲಿಲ್ಲ. ಹಾಗಾಗಿ ಇರುವುದರಲ್ಲಿ ಉತ್ತಮವಾದವುಗಳನ್ನು ಮಾತ್ರ ಆಯ್ದುಕೊಂಡೆ. ನೀವು `ಯಾನ’ ಸಿನಿಮಾ ನೋಡಿದ್ದರೆ ಖಂಡಿತವಾಗಿ ನನ್ನ ಪಾತ್ರವನ್ನು ನೆನಪಿಸಿಕೊಳ್ಳಬಹುದು. ಜತೆಗೆ ಇನ್ನೊಂದು ವಿಷಯ ಇದೆ. ನಾವು ಪಾತ್ರಗಳನ್ನು ಆಯ್ಕೆ ಮಾಡಬಹುದು. ನಮ್ಮಿಂದಾಗುವ ಮಟ್ಟಕ್ಕೆ ನಟಿಸಬಹುದು. ಅದು ಜನರಿಗೆ ಇಷ್ಟವಾಗುವುದು ಸೇರಿದಂತೆ ಉಳಿದಿದ್ದೆಲ್ಲವೂ ನಮ್ಮ ಕೈಯ್ಯಲ್ಲಿ ಇರುವುದಿಲ್ಲವಲ್ಲ. ಒಟ್ಟಿನಲ್ಲಿ ನನ್ನ ಪ್ರಯತ್ನ ಮಾಡುತ್ತಿರುತ್ತೇನೆ.

ಸದ್ಯಕ್ಕೆ ನೀವು ಯಾವೆಲ್ಲ ಚಿತ್ರಗಳು ಯಾವ ಹಂತದಲ್ಲಿವೆ?

ಒಂದು ಚಿತ್ರ ಈಗಾಗಲೇ ನಟಿಸಿ ಮುಗಿಸಿದ್ದೀನಿ. ದಾರಿ ಯಾವುದಯ್ಯಾ ವೈಕುಂಠಕೆ’ ಎನ್ನುವುದು ಅದರ ಹೆಸರು. ಚಿತ್ರದಲ್ಲಿ ನಾನು ಮಸಣದಲ್ಲಿ ಹೆಣ ಸುಡುವ ಹುಡುಗಿಯ ಪಾತ್ರ ಮಾಡಿದ್ದೇನೆ. ಕಳೆದ ತಿಂಗಳು ಅದರ ಡಬ್ಬಿಂಗ್‌ಗೆ ಬೆಂಗಳೂರಿಗೆ ಬಂದಿದ್ದೆ. ಈಗಯು ಟರ್ನ್ 2′ ಎನ್ನುವ ಚಿತ್ರದ ಶೂಟಿಂಗ್‌ಗಾಗಿ ಬೆಂಗಳೂರಿಗೆ ಬಂದಿದ್ದೇನೆ. ಲಾಕ್ಡೌನ್ ಬಳಿಕ ಇದೇ ಪ್ರಥಮ ಬಾರಿಗೆ ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇದಕ್ಕೂ ಯುಟರ್ನ್ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೆ ಇಲ್ಲಿಯೂ ಹಾರರ್ ಎಲಿಮೆಂಟ್ ಇದೆ. ನನ್ನದು ಚಿತ್ರದಲ್ಲಿ ಡಾಕ್ಟರ್ ಪಾತ್ರ. ಇನ್ನೊಂದು ಚಿತ್ರದ ಹೆಸರು `ಬೀದಿ ದೀಪ’. ಅದು ಶುರುವಾಗಬೇಕಿದೆ. ಅದರಲ್ಲಿ ನನ್ನದು ಬಿಇ ವಿದ್ಯಾರ್ಥಿನಿಯ ಪಾತ್ರ. ನನಗೆ ಸಂಬಂಧಿಸಿದ ಹಾಗೆ ಅದು ತುಂಬ ಆಪ್ತವಾಗುವ ಪಾತ್ರ. ಯಾಕೆಂದರೆ ನಾನು ಕೂಡ ಬಿ ಇ ಮಾಡಿದ್ದೇನೆ. ಉಳಿದಂತೆ ಲವ್, ಎಮೋಶನಲ್ ಎಲ್ಲವೂ ಇದೆ. ಬಡ ಹುಡುಗನನ್ನು ಪ್ರೀತಿಸುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ.

ಲಾಕ್ಡೌನ್ ದಿನಗಳನ್ನು ರಾಣಿಬೆನ್ನೂರಿನಲ್ಲೇ ಕಳೆದಿರಾ?

ಹೌದು. ನಾನು ನನ್ನ ಊರಲ್ಲೇ ಇದ್ದೆ. ನಾನು ಮಲ್ಟಿ ನ್ಯಾಶನಲ್‌ ಸಂಸ್ಥೆಯಲ್ಲಿ ನೆಟ್ವರ್ಕ್ ಎಂಜಿನಿಯರ್‌ ಆಗಿ ವೃತ್ತಿಯಲ್ಲಿದ್ದೇನೆ. ಹಾಗಾಗಿ ವರ್ಕ್ ಫ್ರಮ್ ಹೋಮ್ ಇತ್ತು. ಅದರೊಂದಿಗೆ ಬಿಡುವಿನ ವೇಳೆಯನ್ನು ನನ್ನ ಮೆಚ್ಚಿನ ಹವ್ಯಾಸಗಳಾದ ಚಿತ್ರ ಬಿಡಿಸುವುದರ ಮೂಲಕ ಕಳೆದೆ. ಬಹುಶಃ ಟೆಕ್ನಿಕಲ್ ವಿಭಾಗದಲ್ಲಿ ಕಲಿತಿರುವ ಕಾರಣದಿಂದ ಇರಬಹುದು ನನಗೆ ಸಿನಿಮಾದಲ್ಲಿ ಪರದೆ ಹಿಂದಿನ ತಾಂತ್ರಿಕ ಕೆಲಸಗಳ ಬಗ್ಗೆ ವಿಶೇಷ ಆಸಕ್ತಿ ಇದೆ. ಅದರಲ್ಲಿಯೂ ನಿರ್ದೇಶನ ಮಾಡುವುದು ನನ್ನ ಕನಸು. ವೆಬ್ ಸೀರೀಸ್ ಮೂಲಕ ಮೊದಲ ನಿರ್ದೇಶನದ ಪ್ರಯೋಗ ಮಾಡೋಣ ಎನ್ನುವ ಕನಸು ಕಂಡಿದ್ದೀನಿ. ಹಾಗಂತ ತಯಾರಿಗಳೇನೂ ನಡೆದಿಲ್ಲ. ಎಲ್ಲದಕ್ಕೂ ಸಮಯ ಕೂಡಿ ಬರಬೇಕು ಅಂತಾರಲ್ಲ?

ಶಶಿಕರ ಪಾತೂರು

Related News

ಆನ್‌ಲೈನ್ ಗೇಮಿಂಗ್ ಸಂಸ್ಥೆಗಳಿಗೆ ಶಾಕ್ ನೀಡಿದ ಸುಪ್ರೀಂ : ಶೇ. 28 ಜಿಎಸ್‌ಟಿ ಕಡ್ಡಾಯ; ₹1.5 ಲಕ್ಷ ಕೋಟಿ ಹಳೆ ತೆರಿಗೆ ಬಾಕಿ ಪಾವತಿಗೆ ಆದೇಶ
ಪ್ರಮುಖ ಸುದ್ದಿ

ಆನ್‌ಲೈನ್ ಗೇಮಿಂಗ್ ಸಂಸ್ಥೆಗಳಿಗೆ ಶಾಕ್ ನೀಡಿದ ಸುಪ್ರೀಂ : ಶೇ. 28 ಜಿಎಸ್‌ಟಿ ಕಡ್ಡಾಯ; ₹1.5 ಲಕ್ಷ ಕೋಟಿ ಹಳೆ ತೆರಿಗೆ ಬಾಕಿ ಪಾವತಿಗೆ ಆದೇಶ

May 28, 2026
ಮೇ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮ: ಬಳಕೆದಾರರ ಸುರಕ್ಷತೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು
ಡಿಜಿಟಲ್ ಜ್ಞಾನ

ಮೇ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮ: ಬಳಕೆದಾರರ ಸುರಕ್ಷತೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು

April 23, 2026
ಸ್ಯಾಂಡಲ್‌ವುಡ್ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್‌ಫೇರ್ ವಿರುದ್ಧ ಕನ್ನಡಿಗರ ಆಕ್ರೋಶ
ಪ್ರಮುಖ ಸುದ್ದಿ

ಸ್ಯಾಂಡಲ್‌ವುಡ್ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್‌ಫೇರ್ ವಿರುದ್ಧ ಕನ್ನಡಿಗರ ಆಕ್ರೋಶ

March 27, 2026
ಆಸ್ಕರ್ 2026 ವಿಜೇತರ ಘೋಷಣೆ:‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ
ಪ್ರಮುಖ ಸುದ್ದಿ

ಆಸ್ಕರ್ 2026 ವಿಜೇತರ ಘೋಷಣೆ:‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

March 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.