• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ದಾವಣಗೆರೆಯ ಬಿಜೆಪಿ ಯುವ ಮೋರ್ಚದಿಂದ ಕ್ಯಾಂಡಲ್ ಪಾರ್ಸ್ಲ್

Kiran K by Kiran K
in ಪ್ರಮುಖ ಸುದ್ದಿ, ರಾಜ್ಯ
0
SHARES
0
VIEWS
Share on FacebookShare on Twitter

ಏ.4: ಜೆಡಿಎಸ್ ಶಾಸಕ ಹೆಚ್. ಡಿ. ರೇವಣ್ಣ ಅವರಿಗೆ ದಾವಣಗೆರೆ ಬಿಜೆಪಿ ಯುವ ಮೋರ್ಚದಿಂದ ಶನಿವಾರ ಕ್ಯಾಂಡಲ್ ಗಳನ್ನು ಕಳುಹಿಸಿಕೊಡಲಾಯಿತು.

ಪ್ರಧಾನಿ ಮೋದಿ ಅವರು ಭಾನುವಾರ ಕ್ಯಾಂಡಲ್ ಬೆಳಗುವಂತೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಹೆಚ್. ಡಿ. ರೇವಣ್ಣ ಲಾಕ್ ಡೌನ್ ಆಗಿದೆ ಎಲ್ಲಿಂದ ಕ್ಯಾಂಡೆಲ್ ಗಳನ್ನು ತಂದು ದೀಪ ಬೆಳಗಬೇಕು ಎಂದು ವ್ಯಂಗ್ಯವಾಡಿದ್ದರು.

ಆದ್ದರಿಂದ, ಬಿಜೆಪಿ ಕಾರ್ಯಕರ್ತರು ಅವರ ಮನೆಗೆ ಕ್ಯಾಂಡಲ್ ಗಳನ್ನು ಪೋಸ್ಟ್ ಮೂಲಕ ಪಾರ್ಸಲ್ ಕಳಿಸಿಕೊಟ್ಟರು.

ಇದೇ ವೇಳೆ ಮಾತನಾಡಿದ ದಕ್ಷಿಣ ಯುವ ಮೋರ್ಚ ಘಟಕದ ಅಧ್ಯಕ್ಷ ಮತ್ತು ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್, ಪ್ರಧಾನಿ ಅವರು ಕರೆ ನೀಡಿರುವ ದೀಪ ಪ್ರಜ್ವಲನ ಕಾರ್ಯಕ್ರಮ ಭಾರತದಂಥಹ ದೇವ ಭೂಮಿಗೆ ಇಂಥಹ ಸಂದಿಗ್ದ ಸಮಯದಲ್ಲಿ ಅಮೃತದ ಸಮಾನವಿದ್ದಂತೆ. ಭಾರತ ದೇವ ಭೂಮಿಯಾಗಿ, ತ್ಯಾಗ ಭೂಮಿಯಾಗಿ, ರಸ ಋಷಿ ದಾರ್ಶನಿಕರು, ಸಂತ ಮಹಾಂತರು ನಡೆದಾಡಿರುವ ಪಾವನ ಭೂಮಿಯಾಗಿ ವಿಶ್ವ ಭೂಪಟದಲ್ಲಿ ಇಗಾಗಲೇ ಗುರುತಿಸಿಕೊಂಡು ವಿಶ್ವ ಗುರುವಾಗಿ ಮೆರೆದಿದೆ. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲು ತಮ್ಮಂಥಹ ದೈವ ಭಕ್ತರ ಸಹಕಾರವೂ ಅತ್ಯಾವಶ್ಯಕ ಎಂದು ರೇವಣ್ಣಗೆ ಕರೆ ನೀಡಿದರು.

ರೇವಣ್ಣ ಅವರ ಅಸಾಹಯಕತೆಯನ್ನು ಮನಗಂಡು ನಾವು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ಆದ್ದರಿಂದ, ಅವರು ಕುಟುಂಬ ಪರಿವಾರ ಸಮೇತರಾಗಿ ನಿರ್ಮಲ ಮತ್ತು ನಿಶ್ಚಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೊಡಿಸಲು ಪ್ರಧಾನಿಯವರು ಕರೆ ನೀಡಿರುವ ಈ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.

ಅದೇ ರೀತಿ ಜೆಡಿಎಸ್ ಪಕ್ಷದ ಯಾವುದಾದರೂ ಶಾಸಕರುಗಳು ಈ ಅಸಹಾಯಕತೆಯ ಅಳಲು ತಮ್ಮ ಮುಂದೆ ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಮೊರ್ಚಾ ಆನಂದ್ ರಾವ್ ಸಿಂಧೆ, ಶ್ರೀಕಾಂತ್ ನಿಲಗುಂದ, ಟಿಂಕರ್ ಮಂಜಣ್ಣ, ಅಭಿಷೇಕ ಪಿ. ಮತ್ತಿತರರು ಉಪಸ್ಥಿತರಿದ್ದರು.

Related News

ಕೋಟ್ಯಾಂತರ ರೂಪಾಯಿ ಸೈಬರ್‌ ವಂಚನೆ: ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 16,300 ಪ್ರಕರಣ
ಪ್ರಮುಖ ಸುದ್ದಿ

ಕೋಟ್ಯಾಂತರ ರೂಪಾಯಿ ಸೈಬರ್‌ ವಂಚನೆ: ಬೆಂಗಳೂರಿನಲ್ಲಿ ಒಂದೇ ವರ್ಷದಲ್ಲಿ 16,300 ಪ್ರಕರಣ

December 11, 2023
ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ
ಪ್ರಮುಖ ಸುದ್ದಿ

ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ

December 11, 2023
ವಾಟ್ಸಾಪ್‌ ಚಾಟ್ ಸೀಕ್ರೆಟ್ ಆಗಿರಬೇಕಾ? ಹಾಗಾದ್ರೆ ಸೀಕ್ರೆಟ್ಆಗಿ ಫೋನಿನಲ್ಲಿ ಈ ಸೆಟ್ಟಿಂಗ್ ಲಾಕ್ ಮಾಡಿ
ಡಿಜಿಟಲ್ ಜ್ಞಾನ

ವಾಟ್ಸಾಪ್‌ ಚಾಟ್ ಸೀಕ್ರೆಟ್ ಆಗಿರಬೇಕಾ? ಹಾಗಾದ್ರೆ ಸೀಕ್ರೆಟ್ಆಗಿ ಫೋನಿನಲ್ಲಿ ಈ ಸೆಟ್ಟಿಂಗ್ ಲಾಕ್ ಮಾಡಿ

December 11, 2023
ಗಾಂಧಿವಾದವನ್ನು ಕಿತ್ತೊಗೆಯಬೇಕು – ನಟ ಚೇತನ್ ಅಹಿಂಸಾ ಆಗ್ರಹ
ಪ್ರಮುಖ ಸುದ್ದಿ

ಗಾಂಧಿವಾದವನ್ನು ಕಿತ್ತೊಗೆಯಬೇಕು – ನಟ ಚೇತನ್ ಅಹಿಂಸಾ ಆಗ್ರಹ

December 11, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.