• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಧೋನಿಗೆ ವಿದಾಯ ಪಂದ್ಯ ಆಯೋಜಿಸಲು ಬಿಸಿಸಿಐ ಚಿಂತನೆ

Kiran K by Kiran K
in Sports, ವಿಜಯ ಟೈಮ್ಸ್‌
ಧೋನಿಗೆ ವಿದಾಯ ಪಂದ್ಯ ಆಯೋಜಿಸಲು ಬಿಸಿಸಿಐ ಚಿಂತನೆ
0
SHARES
0
VIEWS
Share on FacebookShare on Twitter

ವಿಶ್ವ ಕ್ರಿಕೆಟ್‍ನ ಸರ್ವಕಾಲಿಕ ಶ್ರೇಷ್ಠ ಆಟಗಾರ, ಟೀಮ್ ಇಂಡಿಯಾ ಮಾಜಿ ನಾಯಕನ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಇತ್ತೀಚೆಗಷ್ಟೇ ವಿದಾಯ ಹೇಳಿದ್ದಾರೆ. ಆದರೆ 16 ವರ್ಷಗಳ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಕೋಟ್ಯಾಂತರ ಪ್ರೇಕ್ಷಕರ ಮನಗೆದ್ದಿದ್ದ ಧೋನಿಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಬೇಕಿತ್ತು ಎಂಬುದು ಅಪಾರ ಅಭಿಮಾನಿಗಳ ಬಯಕೆಯಾಗಿತ್ತು.

ಇದೇ ಕಾರಣದಿಂದ ದಿಢೀರನೇ ವಿದಾಯ ಹೇಳಿದ ಧೋನಿಗೆ ಬೀಳ್ಕೊಡುಗೆ ಪಂದ್ಯ ಆಯೋಜಿಸಬೇಕೆಂಬ ಮಾತುಗಳು ಕೇಳಿ ಬಂದಿವೆ. ಕೇವಲ ಅಭಿಮಾನಿಗಳು ಮಾತ್ರವಲ್ಲದೇ, ಕ್ರಿಕೆಟಿಗರು ಸಹ ಇದೇ ಮಾತುಗಳನ್ನಾಡಿದ್ದಾರೆ. ಹೀಗಾಗಿಯೇ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಳ ಈ ಕನಸು ಈಡೇರುವ ಎಲ್ಲಾ ಸೂಚನೆಗಳು ಸಿಕ್ಕಂತಾಗಿದೆ.

ಭಾರತ ಕ್ರಿಕೆಟ್‍ ತಂಡದ ಯಶಸ್ಸಿಗೆ ಕಾರಣರಾಗುವ ಜತೆಗೆ ಭಾರತೀಯ ಕ್ರಿಕೆಟ್‍ನಲ್ಲಿ ಹೊಸ ಆಂದೋಲನವನ್ನೇ ಸೃಷ್ಟಿಸಿದ ಧೋನಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡು ಒಂದು ವರ್ಷವೇ ಕಳೆದಿದೆ. ಈ ಎಲ್ಲಾ ಅಂಶಗಳನ್ನು ಮನಗಂಡ ಬಿಸಿಸಿಐ, ಕೂಲ್ ಕ್ಯಾಪ್ಟನ್‍ಗಾಗಿ ಅಂತಿಮ ಪಂದ್ಯವೊಂದನ್ನು ನಡೆಸಲು ಚಿಂತನೆ ನಡೆಸಿದೆ. ಆದರೆ ಇದಕ್ಕೆ ವೇದಿಕೆ ಸಿದ್ದಪಡಿಸಲು ಪ್ರಸಕ್ತ ಸಾಲಿನ ಐಪಿಎಲ್ ಮುಗಿಯಬೇಕಿದೆ.

ಈ ಕುರಿತು ಮಾತನಾಡಿದ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಬೀಳ್ಕೊಡುಗೆ ಪಂದ್ಯದ ಕುರಿತು ಬಿಸಿಸಿಐ ಮಹೇಂದ್ರ ಸಿಂಗ್ ಧೋನಿ ಜೊತೆ ಮಾತನಾಡಲಿದ್ದು, ಆ ಬಳಿಕ ಪಂದ್ಯದ ರೂಪುರೇಷೆ ಸಿದ್ದಪಡಿಸಲಿದೆ. ಸದ್ಯ ಯಾವುದೇ ಅಂತಾರಾಷ್ಟ್ರೀಯ ಸರಣಿಗಳು ನಡೆಯುತ್ತಿಲ್ಲ. ಆದ್ದರಿಂದ ಐಪಿಎಲ್ ನಂತರ ಬೀಳ್ಕೊಡುಗೆ ಪಂದ್ಯದ ಬಗ್ಗೆ ತೀರ್ಮಾನಿಸಲಿದ್ದೇವೆ. ಭಾರತ ತಂಡಕ್ಕಾಗಿ ಧೋನಿ ತುಂಬಾ ಶ್ರಮವಹಿಸಿದ್ದು, ಅವರು ಎಲ್ಲಾ ರೀತಿಯ ಗೌರವಗಳಿಗೂ ಅರ್ಹರು. ಹೀಗಾಗಿ ಖಂಡಿತವಾಗಿ ಬೀಳ್ಕೊಡುಗೆ ಪಂದ್ಯ ಆಯೋಜಿಸಬೇಕೆಂಬ ನಿರ್ಧಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.  ಹೀಗಾಗಿ ಟೀಮ್ ಇಂಡಿಯಾದ ಯಶಸ್ವಿ ನಾಯಕನಿಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಬೇಕು ಎಂಬ ಅಪಾರ ಅಭಿಮಾನಿಗಳ ಕನಸು ಈಡೇರುವ ಸೂಚನೆಗಳು ಸಿಕ್ಕಂತಾಗಿದೆ. ಆದರೆ ಇದೆಲ್ಲವೂ ಧೋನಿಯ ನಿರ್ಧಾರ ಮೇಲೆ ಅವಲಂಬಿಸಿದೆ.

Related News

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.
ಆರೋಗ್ಯ

ಮುಖದ ಸೌಂದರ್ಯ ಇನ್ನಷ್ಟು ಕಾಂತಿಯುತವಾಗಬೇಕೇ ಹರಳೆಣ್ಣೆ ಬಳಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.

October 2, 2023
ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು
ದೇಶ-ವಿದೇಶ

ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು

October 2, 2023
ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ
ಪ್ರಮುಖ ಸುದ್ದಿ

ಬಿಯರ್ ಬೇಡ ನೀರು ಬೇಕು: ಹೊಸ ಸಾರಾಯಿ ಅಂಗಡಿ ತೆರೆಯುವುದಕ್ಕೆ ರಾಜ್ಯಾದ್ಯಂತ ಮಹಿಳೆಯರ ಪ್ರತಿಭಟನೆ

October 2, 2023
ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್
ಡಿಜಿಟಲ್ ಜ್ಞಾನ

ಸ್ಮಾರ್ಟ್‌ಫೋನನ್ನು EMI ನಲ್ಲಿ ಖರೀದಿಸುವ ಮುನ್ನ ಎಚ್ಚರಿಕೆ: ಇದೊಂದು ಟ್ರ್ಯಾಪ್

October 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.