• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಟಾಲೆಂಟ್‌ ಹಂಟ್‌

ಮಗನ ಪರೀಕ್ಷೆಗಾಗಿ 105 ಕಿ.ಮಿ ಸೈಕಲ್ ತುಳಿದ ಅಪ್ಪ

padma by padma
in ಟಾಲೆಂಟ್‌ ಹಂಟ್‌, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಸಾಧಕರು
ಮಗನ ಪರೀಕ್ಷೆಗಾಗಿ 105 ಕಿ.ಮಿ ಸೈಕಲ್ ತುಳಿದ ಅಪ್ಪ
0
SHARES
0
VIEWS
Share on FacebookShare on Twitter


ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತನ್ನ ಮಗನ 10 ನೇ ತರಗತಿ ಪೂರಕ ಪರೀಕ್ಷೆಗಾಗಿ ಬರೋಬ್ಬರಿ 105 ಕಿ.ಮಿ ಸೈಕಲ್ ತುಳಿದುಕೊಂಡು ಮಗನನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಧಾರ್ ಜಿಲ್ಲೆಯ ಶೋಭಾರಾಮ್ ಮಂಗಳವಾರದಂದು ನಡೆಯಬೇಕಾಗಿದ್ದ ತನ್ನ ಮಗ ಆಶೀಶ್ ನ ಗಣಿತ ಪರೀಕ್ಷೆಗಾಗಿ ಸೋಮವಾರವೇ ತಮ್ಮ ಊರಿಂದ ಹೊರಟು ರಾತ್ರೀಯೇ ಪರೀಕ್ಷಾ ಕೇಂದ್ರದ ಬಳಿ ತಲುಪಿದ್ದಾರೆ. ಇನ್ನು ಪರೀಕ್ಷೆಗೆ ಕೆಲ ನಿಮಿಷಗಳ ಕಾಲ ಇದ್ದಾಗ ಕೇಂದ್ರವನ್ನು ತಲುಪಿದ್ದಾರೆ.

अपने बेटे को परीक्षा दिलवाने ये पिता साइकिल से 3 दिनों का सफर तय करके धार पहुंचे, शुभकामनाएं अब बारी बेटे की है! @ChouhanShivraj @OfficeOfKNath @UmangSinghar @ndtvindia @ndtv #ExamResults pic.twitter.com/QHg6rEqJGr

— Anurag Dwary (@Anurag_Dwary) August 19, 2020


ಈ ಬಗ್ಗೆ ಮಾತನಾಡಿದ ಶೋಭಾರಾಮ್ ನಾನು ದಿನಗೂಲಿ ಮಾಡಿ ಬದುಕುತ್ತಿದ್ದರೂ ನನ್ನ ಮಗ ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದೇನೆ. ಲಾಕ್ಡೌನ್ ಕಾರಣದಿಂದ ನಮ್ಮ ಊರಿಂದ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ. ನನ್ನ ಬಳಿ ಮೋಟರ್ ಸೈಕಲ್ ಇಲ್ಲದ ಕಾರಣ ಇಷ್ಟು ದೂರ ಸೈಕಲ್ ತುಳಿದೇ ಬರಬೇಕಾಯಿತು. ಮಗನ ಪರೀಕ್ಷೆಗೆಂದು ನಾನು ದಿನಗೂಲಿ ಮಾಡಿ ಸಂಪಾದಿಸಿದ ಹಣವನ್ನು ಸಂಗ್ರಹಿಸಿದ್ದೆ. ನಾನೊಬ್ಬ ರೈತನಾದರೂ ಸಹ ದಿನಗೂಲಿ ಮಾಡೀಯೇ ಮನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಧಾರ್ ನಲ್ಲಿ ಊಟಕ್ಕೆ ತೊಂದರೆಯಿದೆ ಎಂದು ಮನೆಯಿಂದಲೇ 3 ದಿನಕ್ಕೆ ಊಟ ಕೂಡ ತಂದುಕೊಂಡಿದ್ದೇವೆ ಎಂದು ಶೋಭಾರಾಮ್ ಹೇಳಿದ್ದಾರೆ. ‘ತಂದೆ ನನ್ನ ಪರೀಕ್ಷೆಗೆ ಸಾಕಷ್ಟು ಪ್ರೋತ್ಸಾಹಿಸಿದ್ದಾರೆ. ಬಸ್ ವ್ಯವಸ್ಥೆ ಇಲ್ಲದ ಕಾರಣ ಸೈಕಲ್ ನಲ್ಲಿ ಬಂದಿದ್ದೇವೆ. ನನ್ನ ತಂದೆಗೆ ಸಹಾಯವಾಗಬೇಕೆಂದು ನಾನು ಕೂಡ ಕೆಲ ಸಮಯ ಸೈಕಲ್ ತುಳಿದುಕೊಂಡು ಪರೀಕ್ಷಾ ಕೇಂದ್ರವನ್ನು ತಲುಪಿದ್ದೇವೆ. ನಾನು ಮುಂದೆ ಚೆನ್ನಾಗಿ ಓದಿ ದೊಡ್ಡ ಅಧಿಕಾರಿ ಆಗಬೇಕೆಂದು ಬಯಸುತ್ತೇನೆ’ ಎಂದು ಆಶೀಶ್ ತಿಳಿಸಿದ್ದಾರೆ..


ಈ ಕುರಿತು ಪ್ರತಿಕ್ರಿಯೆ ನೀಡಿದ ಧಾರ್ ನ ಬುಡಕಟ್ಟು ಜನಾಂಗದ ಸಹಾಯಕ ಆಯುಕ್ತರು, ಈ ತಂದೆ ಮಗನ ಬಗ್ಗೆ ತಿಳಿದು ಬಹಳ ಸ್ಪೂರ್ತಿ ಎನಿಸಿತು. ಇನ್ನು ಆಗಸ್ಟ್ 24 ರವರೆಗೂ ಪರೀಕ್ಷೆ ನಡೆಯುವುದರಿಂದ ತಂದೆ-ಮಗ ಅಲ್ಲೇ ಉಳಿದು ಕೊಳ್ಳುವುದಕ್ಕೆ ಹಾಗೂ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

Related News

ಈಶಾನ್ಯ, ಉತ್ತರ ಭಾರತದಲ್ಲಿ ಸರಣಿ ಭೂಕಂಪ – ಆತಂಕದಲ್ಲಿ ಜನತೆ..!
ದೇಶ-ವಿದೇಶ

ಈಶಾನ್ಯ, ಉತ್ತರ ಭಾರತದಲ್ಲಿ ಸರಣಿ ಭೂಕಂಪ – ಆತಂಕದಲ್ಲಿ ಜನತೆ..!

October 3, 2023
ಹುಬ್ಬಳ್ಳಿಯಲ್ಲಿ ಮೂವರು ಉಗ್ರರ ಬಂಧನ, ಕರ್ನಾಟಕವನ್ನು ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡಲು ದೊಡ್ಡ ಪ್ಲಾನ್
ದೇಶ-ವಿದೇಶ

ಹುಬ್ಬಳ್ಳಿಯಲ್ಲಿ ಮೂವರು ಉಗ್ರರ ಬಂಧನ, ಕರ್ನಾಟಕವನ್ನು ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡಲು ದೊಡ್ಡ ಪ್ಲಾನ್

October 3, 2023
ಜಾತಿ ಗಣತಿ ಜಟಾಪಟಿ: ಬಿಹಾರ ಬಳಿಕ ಕರ್ನಾಟಕ ಸರದಿ, ಜಾತಿ ಗಣತಿ ಮಾಡುವುದರಿಂದ ಲಾಭ ಏನು?
ದೇಶ-ವಿದೇಶ

ಜಾತಿ ಗಣತಿ ಜಟಾಪಟಿ: ಬಿಹಾರ ಬಳಿಕ ಕರ್ನಾಟಕ ಸರದಿ, ಜಾತಿ ಗಣತಿ ಮಾಡುವುದರಿಂದ ಲಾಭ ಏನು?

October 3, 2023
2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!
ಪ್ರಮುಖ ಸುದ್ದಿ

2022ರ ಹುಬ್ಬಳ್ಳಿ ಗಲಭೆ ಪ್ರಕರಣ ಕೈಬಿಡಲು ಗೃಹ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ..!

October 3, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.