• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಮೆಟ್ರೋ ಸೇತುವೆಯಡಿ ಶಾಲೆ ನಡೆಸುತ್ತಿರುವ ದಿನಸಿ ಅಂಗಡಿ ಮಾಲಿಕ..

Kiran K by Kiran K
in ದೇಶ-ವಿದೇಶ
ಮೆಟ್ರೋ ಸೇತುವೆಯಡಿ ಶಾಲೆ ನಡೆಸುತ್ತಿರುವ ದಿನಸಿ ಅಂಗಡಿ ಮಾಲಿಕ..
0
SHARES
0
VIEWS
Share on FacebookShare on Twitter

ನವದೆಹಲಿ,ಸೆ.26: ದಿನಸಿಯಂಗಡಿ ನಡೆಸಿಕೊಂಡು ಹೋಗುವ ನಡುವೆ ಬಿಡುವು ಮಾಡಿಕೊಂಡು ಮೆಟ್ರೋ ಸೇತುವೆಯ ಬಳಿಯಿರುವ 300ಕ್ಕೂ ಹೆಚ್ಚು ಬಡ ಮಕ್ಕಳಿಗೆ ತನ್ನ ಕೈಲಾದ ಮಟ್ಟಿಗೆ ಶಿಕ್ಷಣ ಕೊಡೋದು..13 ವರ್ಷಗಳಿಂದ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳ ನೆರವಿಲ್ಲದೆ ಎಲ್ಲರಿಗೆ ಮಾದರಿಯಾಗೋದು ಸುಲಭದ ವಿಚಾರವಲ್ಲ..ಇಂತಹ ವಿಭಿನ್ನ ಸಾಧನೆ ಮಾಡಿರುವವರು ಉತ್ತರ ಪ್ರದೇಶ ಮೂಲದ ರಾಜೇಶ್ ಎಂಬವರು..

ದೆಹಲಿಯಲ್ಲಿ ದಿನಸಿ ಅಂಗಡಿಯಿಟ್ಟು ವ್ಯಾಪಾರ ನಡೆಸುತ್ತಿರುವ ರಾಜೇಶ್, ಯಮುನಾ ನದಿ ತಟದಲ್ಲಿರುವ ಮೆಟ್ರೋ ಬಳಿ ಜೋಪಡಿಯಲ್ಲಿ ಜೀವನ ಕಂಡುಕೊಂಡಿರುವ ಬಡ ಕುಟುಂಬದ ಮಕ್ಕಳಿಗೆ ಮೆಟ್ರೋ ಸೇತುವೆಯಡಿಯ ಓಪನ್ ಹೌಸ್ ಸ್ಕೂಲ್ ಮಾಡಿ, ಬೆಳಗ್ಗೆ ಹಾಗೂ ಮಧ್ಯಾಹ್ನ ಸೇರಿ 2 ಪಾಳಯದಲ್ಲಿ ವಿದ್ಯಾದಾನ ಮಾಡುತ್ತಿದ್ದಾರೆ.. ಬೆಳಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 2 ರಿಂದ 4.30 ರವರೆಗೆ ಎರಡು ಪಾಳಿಯಲ್ಲಿ ಮಕ್ಕಳಿಗೆ ರಾಜೇಶ್ ಅವರು ಪಾಠ ಹೇಳಿಕೊಡುತ್ತಾರೆ. ಇವರ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಅಕ್ಕ-ಪಕ್ಕದಲ್ಲಿ ವಾಸವಾಗಿರೋ ಏಳು ಮಂದಿ ಶಿಕ್ಷಕರು ತಮ್ಮ ಬಿಡುವಿನ ವೇಳೆಯಲ್ಲಿ ಈ ಶಾಲೆಗೆ ಬಂದು ಪಾಠ ಹೇಳಿಕೊಡುತ್ತಿದ್ದಾರೆ.

ಅಲ್ಲದೆ ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಹೆಚ್ಚಿಗೆ ಓದುವ ಆಸೆ ಇದ್ದರೆ, ಅವರನ್ನು ರಾಜೇಶ್ ಅವರು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಾರೆ. ಇಂತಹ ಮಹತ್ಕಾರ್ಯವನ್ನು ಅವರು 2006ರಿಂದ ನಡೆಸುತ್ತಾ ಬಂದಿದ್ದು, ನೆರವು ನೀಡಲು ಬರುವ ಸಾರ್ವಜನಿಕರು ಹಾಗೂ ಎನ್ ಜಿಓಗಳಿಗೆ ಹಣಕ್ಕಿಂತ ಆಹಾರ, ಪಠ್ಯ ಪುಸ್ತಕಗಳನ್ನು ನೀಡಲು ಸಹಕರಿಸಿ ಎಂಬುದಾಗಿಯೂ ಕೇಳಕೊಂಡಿದ್ದಾರಂತೆ ರಾಜೇಶ್.

ಒಟ್ಟಿಲ್ಲಿ ವಿದ್ಯಾದಾನವನ್ನೂ ಬ್ಯುಸಿನೆಸ್ ಮಾಡಿಕೊಂಡಿರುವ ಇಂದಿನ ಯುಗದಲ್ಲಿ ನಿಷ್ಠೆಯಿಂದ, ಯಾವುದೇ ಫಲಾಪೇಕ್ಷೆಯಿಲ್ಲದೆ ಇಂತಹ ಉತ್ತಮ ಕೆಲಸವನ್ನು ಮಾಡುವ ಮೂಲಕ ಸಮಾಜಸೇವೆ ಮಾಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Related News

ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು
ದೇಶ-ವಿದೇಶ

ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು

December 9, 2023
ಕಾಂಗ್ರೆಸ್ ಗ್ಯಾರಂಟಿ: ಇಂದಿನಿಂದ ತೆಲಂಗಾಣದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ
ದೇಶ-ವಿದೇಶ

ಕಾಂಗ್ರೆಸ್ ಗ್ಯಾರಂಟಿ: ಇಂದಿನಿಂದ ತೆಲಂಗಾಣದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ

December 9, 2023
ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ
ದೇಶ-ವಿದೇಶ

ದಲಿತ ದೌರ್ಜನ್ಯ ಪ್ರಕರಣಗಳ ಹೆಚ್ಚಳ: ಎನ್.ಸಿ.ಆರ್.ಬಿ ವರದಿ ಪ್ರಕಾರ ನಂ.1 ಸ್ಥಾನದಲ್ಲಿರುವ ಉತ್ತರ ಪ್ರದೇಶ

December 9, 2023
ಶಾಲೆಗೆ ಹೋಗದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.7ನೇ ಸ್ಥಾನದಲ್ಲಿದೆ.
ದೇಶ-ವಿದೇಶ

ಶಾಲೆಗೆ ಹೋಗದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.7ನೇ ಸ್ಥಾನದಲ್ಲಿದೆ.

December 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.