• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಸಾಧಕರು

ಸಾಧನೆಯ ಹಾದಿಯಲ್ಲಿ ಇಂದಿರಾ ಟೀಚರ್

Sharadhi by Sharadhi
in ವಿಜಯ ಸಾಧಕರು
Featured Video Play Icon
0
SHARES
0
VIEWS
Share on FacebookShare on Twitter

 ಹೆಣ್ಣು ಮನಸ್ಸು ಮಾಡಿದ್ರೆ ಸಮಾಜವನ್ನೇ ಬದಲಾಯಿಸಬಹುದು ಅನ್ನೋದಕ್ಕೆ ಬೆಂಗಳೂರಿನ ಇಂದಿರಾ ಟೀಚರೇ ಸಾಕ್ಷಿ. ಇಂದಿರಾ ಟೀಚರ್‌ ಬೆಂಗಳೂರು ದಕ್ಷಿಣ ತಾಲೂಕಿನ ಓ.ಬಿ. ಚೂಡನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ. ಇವರು ಈ ಶಾಲೆಗೆ ಕಾಲಿಟ್ಟ ದಿನದಿಂದ ಈ ಶಾಲೆ ಅಭಿವೃದ್ಧಿಯನ್ನೇ ಕಾಣುತ್ತಿದೆ. ರಾಜ್ಯ ಅಲ್ಲ ರಾಷ್ಟ್ರಮಟ್ಟದಲ್ಲೂ ಮಿಂಚುತ್ತಿದೆ.

 ಈ ಶಾಲೆ ಸುಮಾರು ವರ್ಷಗಳ ಹಿಂದೆ, ಬಿದ್ದು ಹೋಗುವ ಪರಿಸ್ಥಿತಿಯಲ್ಲಿತ್ತು. ಯಾವುದೇ ಸೌಕರ್ಯಗಳಿರದ ತೀರಾ ಕೆಳಮಟ್ಟದಲ್ಲಿತ್ತು. ಗೇಟಿನಿಂದ ಹಿಡಿದು ಶಾಲೆಯೊಳಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳಿಲ್ಲದೆ ಮೂಲೆಗುಂಪಾಗಿತ್ತು. ವಿದ್ಯಾರ್ಥಿಗಳು ಇಲ್ಲದೆ ಮುಚ್ಚುವ ಹಂತ ತಲುಪಿತ್ತು.ಇಂತಹ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯಾಗಿ ಇಂದಿರಾ ಅವರು ಶಾಲೆಗೆ ಬಂದು ಅದ್ಭುತವನ್ನೇ ಸಾಧಿಸಿದ್ರು.

ಮುಖ್ಯೋಪಾದ್ಯಾಯಿನಿಯಾಗಿ ಇಂದಿರಾರವರು ಬಂದ ನಂತರ ಗ್ರಾಮ ಪಂಚಾಯತ್ ನ ಬೆಂಬಲದಿಂದ  ಹಂತ ಹಂತವಾಗಿ ಶಾಲೆಯ ರೂಪು ರೇಷೆಗಳನ್ನು ಬದಲಾಯಿಸಿ ಬಿಟ್ಟಿದ್ದಾರೆ. ಪೋಷಕರು, ಗ್ರಾಮಸ್ಥರು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪಂಚಾಯತ್ ಮುಖ್ಯಸ್ಥರು ಜನಪ್ರತಿನಿಧಿಗಳು ಮುಂತಾದವರೊಂದಿಗೆ ಮಾತಾಡಿ ಶಾಲೆಗೆ ನೀರಿನ ವ್ಯವಸ್ಥೆ, ಮತ್ತು ಕಂಪ್ಯೂಟರ್ ಕಟ್ಟಡಕ್ಕಾಗಿ ಪಂಚಾಯತಿಯಿಂದ 7 ಲಕ್ಷ ರೂ ಅನುದಾನವನ್ನು ಸತತ ಪ್ರಯತ್ನದಿಂದ ಪಡೆದುಕೊಂಡರು. ಅಂಗನವಾಡಿ ಕೇಂದ್ರ, ಶಾಲೆಗೆ ಪೈಂಟಿಂಗ್, ಗೇಟ್ , ಶೌಚಾಲಯ  ಮುಂತಾದ ಸೌಲಭ್ಯಗಳೊಂದಿಗೆ ಖಾಸಗಿ ಶಾಲೆಗಳಿಗೆ ಯಾವ ರೀತಿಯಲ್ಲೂ ಕಮ್ಮಿಯಿಲ್ಲದಂತೆ ಈ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.

ಪಾಠ ಪ್ರವಚನದ  ಜೊತೆ ಯೋಗ, ಭಗವದ್ಗೀತೆ ಪಠಣ ಮತ್ತು ಹಾಡು ನೃತ್ಯ ಮುಂತಾದ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳಿಂದ ಮಕ್ಕಳ ಜ್ಞಾನಾರ್ಜನೆಗಳನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತಿದ್ದಾರೆ. ಸ್ವಚ್ಚ ಭಾರತದಡಿಯಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಮಹತ್ವ ನೀಡಿದ್ದಾರೆ. ಶಾಲೆಯ ಅಂದಕ್ಕಾಗಿ ಸುರಕ್ಷತೆಗಾಗಿ ಸಣ್ಣ ಬಣ್ಣವನ್ನು ಕೊಟ್ಟು  ಸ್ವಚ್ಛತೆಯಿಂದ ಇರಿಸಿಕೊಂಡಿದ್ದಾರೆ.  

ಶಾಲೆಗೆ ಮೀಸಲಾಗಿದ್ದ ಜಾಗವನ್ನು ಅಕ್ರಮ ಮಾಡಲು ಬಂದವರಿಂದ ಅದನ್ನು ರಕ್ಷಿಸಿ ಶಾಲೆಗೆ ಆ ಜಾಗವನ್ನು ಪಡೆದುಕೊಂಡಿದ್ದಾರೆ.  ಈ ಶಾಲೆಯಲ್ಲಿ ಸುಮಾರು 7 ಜನ ಶಿಕ್ಷಕರಿದ್ದಾರೆ, 160 ಮಕ್ಕಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮಕ್ಕಳು ಶಿಸ್ತಿನಲ್ಲಿ  ಸಮವಸ್ತ್ರವನ್ನು ತಪ್ಪದೆ ಧರಿಸುತ್ತಾರೆ  ಶೈಕ್ಷಣಿಕವಾಗಿ ನಿರಂತರ ಶಿಕ್ಷಣ ಕಾರ್ಯಕ್ರಮವೂ ಇಲ್ಲಿ ನಡೆಯುತ್ತಿದೆ. ಒಟ್ಟಾರೆ ಇವರು ಮಾದರಿ ಶಿಕ್ಷಕಿ ಎನಿಸಿಕೊಂಡಿದ್ದಾರೆ.

ಇಂದಿರಾ ಟೀಚರ್ ಅನೇಕ ಪ್ರಶಸ್ಥಿ ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಮುರಿದು ಬಿದ್ದ ದ್ವಜಸ್ಥಂಭವನ್ನು ಸರಿಪಡಿಸಿದ್ದಾರೆ. ಸೋರುತ್ತಿದ್ದ ಮಾಡಿನ ದುರಸ್ಥಿತಿಯನ್ನು ಮಾಡಿದ್ದಾರೆ. ಇನ್ನೂ ಕೆಲವು ಆಸೆಯನ್ನು ಹೊಂದಿದ್ದಾರೆ. ಸುಸಜ್ಜಿತವಾದ ಲೈಬ್ರೆರಿ ಬೇಕು,  ಸಿಸಿಟಿವಿ ಬೇಕು ಹಾಗೂ ವಿಜ್ಞಾನದ ಉಪಕರಣಗಳನ್ನು ಅಳವಡಿಸಬೇಕು ಎಂಬುದು ಇವರ ಮಹದಾಸೆಯಾಗಿದೆ.

ಹಾಗೂ ಶಾಲಾ ಕೊಠಡಿಗಳಿಗೆ ಬಾಗಿಲುಗಳನ್ನು ಮಾಡಿಸಿದ್ದಾರೆ. ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ರಸ್ತೆಯ ದುರಸ್ಥಿತಿಯನ್ನು ಮಾಡಿದ್ದಾರೆ. ಕೊರೋನಾ ಸಮಯದಲ್ಲೂ ಇವರು ಒಬ್ಬರೇ ಬಂದು ಶಾಲಾಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ ಶಾಲೆಯನ್ನು ಮನೆಯಂತೆ ಪರಿವರ್ತಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.

ತಾವು ನಿವೃತ್ತರಾಗುವ ಮೊದಲು ಶಾಲೆಗೆ ಬೇಕಾದಂತಹ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂಬುದು ಇವರ ಆಶಯವಾಗಿದೆ. ಇಂದಿರಾ ರವರ ಸಾಧನೆಯ ಹಾದಿಯಲ್ಲಿರುವ ಎಲ್ಲಾ ಆಸೆಗಳು ಈಡೇರಲಿ ಇನ್ನಷ್ಟು ಉತ್ತಮ ಕೆಲಸಗಳು ಪ್ರಗತಿಪರ ಕಾರ್ಯಗಳು ಹೀಗೆ ಮುಂದುವರಿಯಲಿ ಇವರ ಸಾಧನೆ ಇತರರಿಗೆ ಮಾರ್ಗದರ್ಶಿಯಾಗಲಿ ಇಂದಿರಾ ಟೀಚರ್ ಗೆ ಒಳ್ಳೆಯದಾಗಲಿ ಎಂಬುದು ವಿಜಯಾಟೈಮ್ಸ್ ಆಶಯವಾಗಿದೆ.

Related News

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ರಾಜಸ್ಥಾನ್ ಮಹಿಳಾ ಬಾಡಿ ಬಿಲ್ಡರ್; ‘ಹೆಣ್ಮಕ್ಕಳೇ ಸ್ಟ್ರಾಂಗು ಗುರು..!’
ವಿಜಯ ಸಾಧಕರು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದ ರಾಜಸ್ಥಾನ್ ಮಹಿಳಾ ಬಾಡಿ ಬಿಲ್ಡರ್; ‘ಹೆಣ್ಮಕ್ಕಳೇ ಸ್ಟ್ರಾಂಗು ಗುರು..!’

December 30, 2022
ಪತ್ರಿಕೋದ್ಯಮ ಬರವಣಿಗೆ ಸಾಹಿತ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಪರಿವರ್ತಿಸಿದೆ : ಕಾದಂಬರಿಕಾರ ಖಾಲಿದ್ ಜಾವೇದ್
ವಿಜಯ ಸಾಧಕರು

ಪತ್ರಿಕೋದ್ಯಮ ಬರವಣಿಗೆ ಸಾಹಿತ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಪರಿವರ್ತಿಸಿದೆ : ಕಾದಂಬರಿಕಾರ ಖಾಲಿದ್ ಜಾವೇದ್

December 27, 2022
Featured Video Play Icon
ವಿಜಯ ಸಾಧಕರು

2.5 ವರ್ಷಕ್ಕೆ ಗಿನ್ನಿಸ್ ದಾಖಲೆ; ಪುಟ್ಟಪೋರನ ವಿಶಿಷ್ಟ ಸಾಧನೆ

January 20, 2021
Featured Video Play Icon
ವಿಜಯ ಸಾಧಕರು

ಬಾಗಲಕೋಟೆಯ ಮಾದರಿ ಸಾಧಕ ಮೆಹಬೂಬ ಸಾಬಾ…

November 17, 2020

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.