• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಗುಡ್ ನ್ಯೂಸ್

  ಹ್ಯಾಪಿ ಫಾದರ್ಸ್ ಡೇ- ಅಪ್ಪನಿಗೆ ಸರಿಸಾಟಿ ಯಾರು ಇಲ್ಲ ..!

Kiran K by Kiran K
in ಗುಡ್ ನ್ಯೂಸ್, ಪ್ರಮುಖ ಸುದ್ದಿ
         ಹ್ಯಾಪಿ ಫಾದರ್ಸ್ ಡೇ- ಅಪ್ಪನಿಗೆ ಸರಿಸಾಟಿ ಯಾರು ಇಲ್ಲ ..!
0
SHARES
0
VIEWS
Share on FacebookShare on Twitter

ಅಪ್ಪ ಎಂದರೆ ನಮ್ಮ ಜೀವನದ ಬುನಾದಿ ನಮಗೆ ಉಸಿರು ನೀಡಿದ ಮಹಾತ್ಮ ಜೀವನದಲ್ಲಿ ಅಪ್ಪನ ಪಾತ್ರ ಮುಗಿಯಲಾರದ ಅಳಿಸಲಾಗದ ನಮ್ಮ ಉಸಿರು ಇರುವವರೆಗೂ ಜೀವದಲ್ಲಿ ಹಸಿರಾಗಿರುವ ಉಸಿರು ಅಪ್ಪ ಇದು ಅಪ್ಪ ನೀಡಿದ ಉಸಿರು.

ಜೀವನದ ಪ್ರತೀ ಹಂತದಲ್ಲಿಯೂ ಮಕ್ಕಳ ತಪ್ಪುಗಳನ್ನು ತಿದ್ದಿ, ಸರಿ ದಾರಿಗೆ ಕಳಿಸುವ ಸಲಹೆಗಾರ,ನ್ಯಾಯ ನೀತಿಗಳನ್ನು ಕಲಿಸಿ ಆದರ್ಶ ಮಾರ್ಗಗಳನ್ನು ತೋರಿಸಿದ ಗುರು ಅಪ್ಪ ಮಕ್ಕಳ ಬೇಕು ಬೇಡಗಳನ್ನು ತಿಳಿದು,ವರ ಅವರ ಕಷ್ಟಗಳನ್ನು ತೋರ್ಪಡಿಸದೆ ಮಡದಿ ಮಕ್ಕಳನ್ನು ಸಲಹುವ ಸಾಹುಕಾರನೇ ಅಪ್ಪ. ಅಪ್ಪನ ಸಮಾನ ಪ್ರೀತಿಯನ್ನು ಅಮ್ಮ ತೋರಿಸಿದರೂ ಕುಟುಂಬವನ್ನು ನಿಬಾಯಿಸುವ  ಒಡೆಯ ಅಪ್ಪ.  ಸಂಸಾರದ ದೋಣಿಯನ್ನು ಎಲ್ಲಿಯೂ ಎಡವದಂತೆ, ಎಡವಿದರೂ ಎತ್ತಿ ಮುನ್ನಡೆಸುವ  ಬಾಳ ನಾವಿಕನೇ ಅಪ್ಪ.  ಜೀವನದ ಉದ್ದಕ್ಕೂ ತನಗೆ ಏನನ್ನೂ ಬಯಸದೆ  ತನ್ನಾಸೆಗಳನ್ನೂ ಎಲ್ಲೂ ತೋರಿಸಿಕೊಳ್ಳದೆ  ಮಕ್ಕಳ ಖುಷಿಯನ್ನೇ ನೋಡಿ  ತಾನು ಖುಷಿ ಪಡುವ ನಿಸ್ವಾರ್ಥ ಜೀವಿ ಅದು ಅಪ್ಪ.

ಇವತ್ತು ಅಪ್ಪಂದಿರ ದಿನ ಈ ದಿನ ಎಲ್ಲರೂ ಅಪ್ಪಂದಿರಿಗೊಂದು ದೊಡ್ಡ ಸಲಾಂ ಹೇಳಬೇಕಾದ ದಿನ.  ಈ ದಿನ ಸಿನೆಮಾ ರಂಗದಲ್ಲೂ ನಟ ನಟಿಯರೂ  ಅಪ್ಪನ ಬಗ್ಗೆ ಹೇಳಿಕೊಂಡು ಶುಭಾಷಯ ಗಳನ್ನು ಹೇಳಿಕೊಳ್ಳುತ್ತಾರೆ.  ಅಪ್ಪನ ಬಗ್ಗೆ ಅರ್ಜುನ್ ಜನ್ಯಾರವರು ಬರೆದ ಹಾಡಂತೂ  ಸಖತ್ ಹಿಟ್ಟಾಗಿದೆ.  ಅಪ್ಪನ ಬಗ್ಗೆ ಎಷ್ಟು ಹೇಳೀದರೂ ಮುಗಿಯದ ಕತೆಗಳಿವೆ.

ತಪ್ಪು ಮಾಡಿದಾಗ ಸಿಡಿಲಂತೆ ಗುಡುಗಿದರೂ ಹೊಡೆದು ಬೈದರೂ ಅಲ್ಲಿ ಮಕ್ಕಳನ್ನು ತಿದ್ದುವ ಹಾಗೂ ಸರಿದಾರಿಗೆ ತರುವ ಅಗಾಧ ಪ್ರೀತಿ ಇರುತ್ತದೆ ಎಂದು ಅಪ್ಪ ಹೊಡೆದಲ್ಲಿನ ನೋವಿಗೆ ಎಣ್ಣೆ ಹಚ್ಚಿ ತಲೆ ಸವರಿ ತಬ್ಬಿಕೊಂಡಾಗ ಮತ್ತು ತನ್ನ ತಟ್ಟೆಯಿಂದ ತುತ್ತು ತಿನ್ನಿಸುವಾಗ ಅವರಲ್ಲಿರುವ ಅನಂತ ಪ್ರೀತಿಯ ಅರಿವು ನಮಗಾಗುತ್ತದೆ. ಸಂಜೆ ಮಕ್ಕಳು ಮನೆಗೆ ಬರುವುದನ್ನೇ ಕಾಯುತ್ತಾ ಮನೆಗೆ ತಡವಾಗಿ ಬಂದಾಗ ಅಂಗಳದಲ್ಲೇ ನಿಲ್ಲಿಸಿ ತಡವಾದ ಕಾರಣವನ್ನು ತಿಳಿದು ಮುಂದೆ ಸರಿಯಾದ ಸಮಯದಲ್ಲೇ ಮನೆಗೆ ಬರಬೇಕು ಎಂಬ ಕಟ್ಟಪ್ಪಣೆಯೊಂದಿಗೆ ಒಳಗೆ ಕರೆಸಿಕೊಂಡು  ತಲೆಸವರಿ ಊಟ ಬಡಿಸಲು ಅಮ್ಮನಿಗೆ ಆದೇಶಿಸುವ  ಅಪರಿಮಿತ ಪ್ರೀತಿಯ ಒಡೆಯನೇ ಅಪ್ಪ.

ದುಡಿದು ಬಳಲಿದರೂ ಬೇಸರಿಸದೆ ಕಾಯಿಲೆ ಬಿದ್ದರೂ ತೋರಿಸದೆ, ಹರಿದ ಬಟ್ಟೆಯನ್ನೂ ಗಮನಿಸದೆ,ಹೆಂಡತಿ ಮಕ್ಕಳಿಗಾಗಿ ಜೀವ ತೇದ ಮಹಾನುಭಾವ ಅಪ್ಪ. ಮಕ್ಕಳು ಬೆಳೆದು ನಿಂತಾಗ ನೋಡಿ ಸಂತೋಷ ಪಡಲು ಅಪ್ಪ ಇರಬೇಕು. ಅವರು ಕಲಿಸಿದ ಆದರ್ಷಗಳನ್ನು ನಮ್ಮ ಜೀವನದಲ್ಲಿ ಪಾಲಿಸಿಕೊಂಡು ಬದುಕಬೇಕು ಇದು ಅಪ್ಪಂದಿರ ದಿನ ಅವರಿಗೆ ನಾವು ಕೊಡುವ ಗೌರವ. ಅಪ್ಪಂದಿರ ದಿನದ ಈ ಶುಭ ದಿನದಲ್ಲಿ ಎಲ್ಲಾರಿಗೂ ಹ್ರಯಯಪೂರ್ವಕ ಶುಭಾಷಯಗಳು,,,

 

Related News

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು
ದೇಶ-ವಿದೇಶ

ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ಮಾಡಬೇಡಿ ಎಚ್ಚರ! ಕಲ್ಲು ಹೊಡೆದ್ರೆ 5 ವರ್ಷ ಜೈಲು

March 30, 2023
ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.