ಹೊಸದಿಲ್ಲಿ, ಅ. 23: ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರನ್ನು ಆಂಜಿಯೊಪ್ಲಾಸ್ಟಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ದೆಹಲಿಯ ಆಸ್ಪತ್ರೆಯ ಮೂಲಗಳು ತಿಳಿಸಿವೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ದಿಗ್ಗಜರಲ್ಲಿ ಕಪಿಲ್ ದೇವ್ ಕೂಡ ಒಬ್ಬರು. ನಾಯಕತ್ವದಲ್ಲಿ 1983ರಲ್ಲಿ ಕ್ರಿಕೆಟ್ನಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಲಭಿಸಿತ್ತು. ಅನೇಕ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಕ್ರಿಕೇಟಿಗರು ಶೀಘ್ರ ಗುಣಮುಖರಾಗಲಿ ಕಪಿಲ್ ದೇವ್ ಎಂದು ಟ್ವೀಟ್ ಮೂಲಕ ಆಶಿಸಿದ್ದಾರೆ.