ಕೊಚ್ಚಿ, ಅ. 15: ಚಿನ್ನದ ಸ್ಮಗ್ಲಿಂಗ್ ಕೇಸ್ನ ಆಳಕ್ಕೆ ಹೋದಷ್ಟೂ ತನಿಖಾಧಿಕಾರಿಗಳಿಗೆ ಹೊಸಹೊಸ ವಿಷಯಗಳು ಲಭಿಸುತ್ತಿದ್ದು, ಕೇರಳ ಸರ್ಕಾರವನ್ನೇ ಅಲ್ಲಾಡಿಸುವ ಹಂತಕ್ಕೆ ತಲುಪಿದೆ. ಈ ವಿಚಾರಕ್ಕೆ ಸಾಕ್ಷಿಯೆಂಬಂತೆ ಪ್ರಕರಣಕ್ಕೆ ನೇರವಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಂಟಿದೆ ಎಂಬ ಅನುಮಾನವಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಸಂಶಯ ವ್ಯಕ್ತಪಡಿಸಿದೆ.
ಈ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಯು ಚಿನ್ನ ಕಳ್ಳ ಸಾಗಾಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದಂತಾಗಿದೆ ಎಂದು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎನ್ಐಎ, ಈಗಾಗಲೇ ತನಿಖೆ ನಡೆಸುತ್ತಿದ್ದು, ತಾಂಜಾನಿಯಾ ಭೂಗತ ಪಾತಕಿಯ ದಾವೂದ್ ಇಬ್ರಾಹಿಂ ಜತೆಗೆ ನೇರವಾದ ನಂಟನ್ನು ಹೊಂದಿದ್ದು, ಆರೋಪಿಗಳು ಹಲವು ಬಾರಿ ಭೇಟಿ ನೀಡಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.
ಈ ಪ್ರಕರಣದ ಬೆನ್ನಟ್ಟಿ ಹೋಗಿದ್ದ ತನಿಖಾಧಿಕಾರಿಗಳಿಗೆ ನೇರವಾಗಿ ಮುಖ್ಯಮಂತ್ರಿ ಕಾರ್ಯಾಲಯದ ಲಿಂಕ್ ಇರುವುದೂ ತಿಳಿದಿತ್ತು. ನಂತರ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು ಇದರಲ್ಲಿ ಭಾಗಿಯಾಗಿರುವ ವಿಚಾರ ಹೊರಬಿದ್ದಿತ್ತು. ಈ ಗೋಲ್ಡ್ ಮಾಫಿಯಾ ಕೇಸ್ ಇದೀಗ ದಾವೂದ್ ಇಬ್ರಾಹಿಂವರೆಗೆ ಬಂದು ನಿಂತಿದೆ.