ಎಲೆಮರೆ ಕಾಯಿಯಂತೆ ದುಡಿದು, ಸಮಾಜಕ್ಕೆ ಸ್ಫೂರ್ತಿಯಾಗಿರುವವರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸವನ್ನು ವಿಜಯಟೈಮ್ಸ್ ಮಾಡಹೊರಟಿದೆ. ರಾಜ್ಯದ ಅಥವಾ ದೇಶದ ಯಾವ ಮೂಲೆಯಲ್ಲೇ ಈ ಸಾಧಕರಿರಲಿ ಅವರ ಯಶೋಗಾಥೆಯನ್ನು ಜನರಿಗೆ ತಿಳಿಸುವ ಕಾರ್ಯಕ್ರಮವೇ ‘ವಿಜಯಸಾಧಕರು’. ಈ ವಿಜಯಸಾಧಕರ ಸಾಧನೆ ಇತರರಿಗೆ ಪ್ರೇರಣೆಯಾಗಲಿ, ಆ ಮೂಲಕ ಇತರರೂ ಈ ಸಮಾಜಕ್ಕೆ ನಿಸ್ವಾರ್ಥ ಕಾಣಿಕೆ ನೀಡುವಂತಾಗಬೇಕು ಅನ್ನೋದೇ ಈ ಕಾರ್ಯಕ್ರಮದ ಉದ್ದೇಶ.