Raichur: ರಾಜ್ಯದಲ್ಲಿ ಬಾಣಂತಿಯರ ಸಾವು ಹೆಚ್ಚಾಗುತ್ತಾ ಇದೆ.ಬಳ್ಳಾರಿ, ರಾಯಚೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿನ ಬಾಣಂತಿಯರ ಸಾವಿನ ಸಂಖ್ಯೆ (Death toll of barangays) ಹೆಚ್ಚಾಗುತ್ತಿದೆ.ಗಡಿ ಜಿಲ್ಲೆ ರಾಯಚೂರಿನಲ್ಲಿ (Raichur) ಬಾಣಂತಿಯರ ಸಾವಿಗೆ ಕೊನೆಯೇ ಇಲ್ಲದಂತಾಗಿದೆ.ಕೇವಲ ಮೂರು ತಿಂಗಳಲ್ಲಿ 11 ಬಾಣಂತಿಯರು ಸಾವನ್ನಪ್ಪಿದ್ದಾರೆ.ಇನ್ನು ಮೂರು ಹಸುಕಂದಮ್ಮಗಳು ಕೂಡ ಬಲಿಯಾಗಿವೆ.

ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ (Sindanur Taluk Hospital) ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದು,ರೀಮ್ಸ್ ನಲ್ಲಿ (Reims) ನಾಲ್ವರು ಬಾಣಂತಿಯರು ಕೊನೆಯುಸಿರೆಳೆದಿದ್ದರು.ಇನ್ನು ವೈದ್ಯರ ನಿರ್ಲಕ್ಷದಿಂದ (Doctor’s negligence) ಬಾಣಂತಿಯರು ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಈ ಬಗ್ಗೆ ಯಾವುದೇ ರೀತಿಯ ತನಿಖೆಯು (Investigation) ಸಹ ನಡೆದಿಲ್ಲ.IV ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿನ (IV Ringer’s lactate solution) ಎಂಡೋ ಟಾಕ್ಸಿನ್ (Endo toxin) ಎಂಬ ಅಂಶ ಬಳಕೆಗೆ ಯೋಗ್ಯವಲ್ಲ (ನೆಗೆಟಿವ್) ಅಂತ ಬೆಂಗಳೂರು (Bangalore) ಮತ್ತು ಹೈದರಾಬಾದ್ನ ಲ್ಯಾಬ್ (Hyderabad Lab) ಗಳಿಂದ ವರದಿ ಬಂದಿದ್ದು ಇದರಿಂದ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದರು.
ಬಳ್ಳಾರಿ ಕೇಸ್ಗಳಂತೆ ಇಲ್ಲಿಯೂ ಪಶ್ಚಿಮ ಬಂಗಾಳ ಕಂಪೆನಿಯ (West Bengal Company) ಆರ್ಎಲ್ ಫ್ಲುಯಿಡ್ (RL Fluid) ಅನ್ನು ಬಾಣಂತಿಯರಿಗೆ ನೀಡಲಾಗಿತ್ತು.ಈ ಬಗ್ಗೆ ಜಿಲ್ಲಾಡಳಿತ (District Administration) ಆರ್ಎಲ್ ಫ್ಲುಯಿಡ್ನ ಸ್ಯಾಂಪಲ್ಗಳನ್ನು (Sample of RL fluid) ಪರೀಕ್ಷೆಗೆ ಒಳಪಡಿಸಿದ್ದು, ಬೆಂಗಳೂರು ಹಾಗೂ ಹೈದರಾಬಾದ್ ಲ್ಯಾಬ್ಗಳಿಂದ ವರದಿ ಬಂದಿದೆ.ಆ ವರದಿಯಲ್ಲಿ ಆರ್ಎಲ್ ಫ್ಲುಯಿಡ್ ಕಳಪೆ (RL fluid is poor) ಎಂಬ ವಿಷಯ ಬಹಿರಂಗವಾಗಿದೆ.ಇನ್ನು ಮೃತ ಬಾಣಂತಿಯರ ಕುಟುಂಬಸ್ಥರು ವೈದ್ಯರ ವಿರುದ್ಧ (Against the doctor) ಕ್ರಮ ಕೈಗೊಳ್ಳುವಂತೆ ಹೋರಾಟಕ್ಕೆ ಆಗ್ರಹಿಸಿದ್ದರು.ಆದರೆ ಆರೋಗ್ಯ ಇಲಾಖೆ (Department of Health) ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ.