- ಕೇಂದ್ರ ಸರ್ಕಾರದ ಕ್ರಮದಿಂದ 70% ವರೆಗೆ ಅನಿಲ ಲಭ್ಯತೆ
- ವಾಣಿಜ್ಯ ಬಳಕೆದಾರರಿಗೆ ಹೆಚ್ಚಿದ ಪೂರೈಕೆ – ಆಹಾರ ವಲಯದಲ್ಲಿ ಮತ್ತೆ ಚಟುವಟಿಕೆ
- ವಲಸೆ ಕಾರ್ಮಿಕರಿಗೂ ಸಿಗಲಿದೆ 5 ಕೆಜಿ ಸಣ್ಣ ಸಿಲಿಂಡರ್ಗಳ ಸೌಲಭ್ಯ (5 kg LPG cylinders now available for migrant workers)
Bengaluru : ಕಳೆದ ಕೆಲವು ದಿನಗಳಿಂದ ತೀವ್ರ ಎಲ್ಪಿಜಿ ಬಿಕ್ಕಟ್ಟನ್ನು(LPG crisis) ಎದುರಿಸುತ್ತಿದ್ದ ಹೋಟೆಲ್ (Hotel) ಮತ್ತು ರೆಸ್ಟೋರೆಂಟ್ಗಳಿಗೆ (For restaurants)ಇದೀಗ ದೊಡ್ಡ ಮಟ್ಟದ ನಿರಾಳತೆ ಸಿಕ್ಕಿದೆ. (5 kg LPG cylinders now available for migrant workers)
ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆದಾರರಿಗೆ ತಮ್ಮ ಎಲ್ಪಿಜಿ ಅವಶ್ಯಕತೆಗಳಲ್ಲಿ ಶೇ.70ರಷ್ಟು ಪೂರೈಕೆಯನ್ನು ಮರುಸ್ಥಾಪಿಸುವುದಾಗಿ ಘೋಷಿಸಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್ ಉದ್ಯಮಕ್ಕೆ ಚೇತರಿಕೆಯ ನಿರೀಕ್ಷೆ ಮೂಡಿದೆ.
ನಗರದಲ್ಲಿ ಅನೇಕ ಹೋಟೆಲ್ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದ ಸ್ಥಿತಿಯಲ್ಲಿ ಈ ನಿರ್ಧಾರವು ಮಹತ್ವ ಪಡೆದಿದೆ.
ಎಲ್ಪಿಜಿ ಕೊರತೆಯಿಂದಾಗಿ ದಿನನಿತ್ಯದ ಆಹಾರ ತಯಾರಿಕೆಯಲ್ಲಿ ವ್ಯತ್ಯಯ ಉಂಟಾಗಿ, ಗ್ರಾಹಕರಿಗೂ ತೊಂದರೆ ಉಂಟಾಗಿತ್ತು.

ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಮಟ್ಟದ ಹೋಟೆಲ್ಗಳು ಹೆಚ್ಚಿನ ನಷ್ಟ ಅನುಭವಿಸಿವೆ.
ಇಂತಹ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಕೈಗೊಂಡ ಈ ಕ್ರಮವು ಉದ್ಯಮಿಗಳಿಗೆ ಮತ್ತೊಮ್ಮೆ ಉತ್ಸಾಹ ತುಂಬುವಂತಾಗಿದೆ.
ನಗರದಲ್ಲಿ ಆಹಾರ ಸೇವಾ ವಲಯ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.
ಈ ಬಿಕ್ಕಟ್ಟು ಉಂಟಾಗಲು ಪ್ರಮುಖ ಕಾರಣವೆಂದರೆ, ಕೇಂದ್ರವು ಮೊದಲು ಗೃಹೋಪಯೋಗಿ (Household appliances) ಎಲ್ಪಿಜಿ ಪೂರೈಕೆಗೆ ಆದ್ಯತೆ ನೀಡಿದ್ದಾಗಿದೆ.
ಇದರಿಂದ ವಾಣಿಜ್ಯ ಮತ್ತು ಕೈಗಾರಿಕಾ (Industrial) ವಲಯಗಳಿಗೆ ಅನಿಲ ಪೂರೈಕೆ ಕಡಿಮೆಯಾಗಿ, ಉತ್ಪಾದನೆ ಮತ್ತು ಸೇವೆಗಳು ಅಸ್ತವ್ಯಸ್ತಗೊಂಡಿದ್ದವು.
ಇದೀಗ ಪೆಟ್ರೋಲಿಯಂ (Petroleum) ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕೈಗಾರಿಕಾ ಘಟಕಗಳಿಗೆ ಸಹ ಪೂರೈಕೆಯನ್ನು ಮರುಾರಂಭಿಸುವ ಮೂಲಕ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲು ಮುಂದಾಗಿದೆ.
ಹೊಸ ನಿರ್ದೇಶನದ ಪ್ರಕಾರ, ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ತಮ್ಮ ಹಿಂದಿನ ಬಳಕೆಯ ಮಟ್ಟದಲ್ಲಿ ಶೇ.70ರವರೆಗೆ ಎಲ್ಪಿಜಿ ಪಡೆಯಲು ಅವಕಾಶ ನೀಡಲಾಗಿದೆ.
ಇದರಿಂದ ಆಹಾರ ಸಂಸ್ಕರಣೆ, ಔಷಧ ತಯಾರಿಕೆ, ಪ್ಯಾಕೇಜಿಂಗ್ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಲಾಭವಾಗಲಿದೆ. (5 kg LPG cylinders now available for migrant workers)
ಇಂಧನ ಕೊರತೆಯಿಂದ ನಿಂತುಹೋಗಿದ್ದ ಹಲವಾರು ಉತ್ಪಾದನಾ ಚಟುವಟಿಕೆಗಳು ಮತ್ತೆ ಚೇತರಿಸಿಕೊಳ್ಳಲಿವೆ.
ಇದರಿಂದ ದೇಶದ ಆರ್ಥಿಕ ಚಟುವಟಿಕೆಗೂ ಒಳ್ಳೆಯ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.
ಇದಲ್ಲದೆ, ವಲಸೆ ಕಾರ್ಮಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು 5 ಕೆಜಿ (5 kg) ಸಣ್ಣ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಇವುಗಳನ್ನು ಸುಲಭವಾಗಿ ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು, ಗುರುತಿನ ಚೀಟಿ ತೋರಿಸಿದರೆ ಸಾಕು ಎಂಬ ಸೂಚನೆ ನೀಡಲಾಗಿದೆ.
ಈ ಕ್ರಮವು ನಗರದಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರಿಗೆ ನೆರವಾಗಲಿದೆ.
ಒಟ್ಟಾರೆ, ಎಲ್ಪಿಜಿ ಪೂರೈಕೆ ಮರುಸ್ಥಾಪನೆಯಿಂದ ಬೆಂಗಳೂರು ನಗರದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳಲಿದ್ದು, ಹೋಟೆಲ್ ಉದ್ಯಮದಲ್ಲಿ ಹೊಸ ಚೈತನ್ಯ ಮೂಡಲಿದೆ.