• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಇಂದು ದೇಶದ್ಯಾಂತ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಬ್ರಿಟಿಷ್ ಆಳ್ವಿಕೆಗೆ ತೆರೆ ಬಿದ್ದ ದಿನ

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಇಂದು ದೇಶದ್ಯಾಂತ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ, ಬ್ರಿಟಿಷ್ ಆಳ್ವಿಕೆಗೆ ತೆರೆ ಬಿದ್ದ ದಿನ
0
SHARES
27
VIEWS
Share on FacebookShare on Twitter
  • ಇಂದು ದೇಶಾದ್ಯಂತ 79 ನೇ ಸ್ವಾತಂತ್ರ್ಯ ದಿನಾಚರಣೆ
  • ಇಂದಿಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ 79 ವರ್ಷ ಸಂಪೂರ್ಣ
  • 1947 ಇತಿಹಾಸದಲ್ಲಿ ಅಜರಾಮರವಾದ ದಿನ

ಆಗಸ್ಟ್ 15, ಭಾರತದ ಇತಿಹಾಸದಲ್ಲಿ ಅಕ್ಷರಶಃ ಚಿನ್ನದ ಅಕ್ಷರಗಳಲ್ಲಿ ಬರೆಯಲ್ಪಟ್ಟ ದಿನ. ಜೊತೆಗೆ ಭಾರತದ ಇತಿಹಾಸದಲ್ಲಿ ಅಜರಾಮರವಾದ ದಿನ. 1947ರಲ್ಲಿ ನಾವು ವಿದೇಶಿಗರ(foreigners) ಬಂಧನದಿಂದ ಮುಕ್ತರಾಗಿ, ಹೊಸ ಭವಿಷ್ಯಕ್ಕೆ ಕಾಲಿಟ್ಟ ದಿನ.

ವರ್ಷಗಳ ತ್ಯಾಗ, ಹೋರಾಟ ಮತ್ತು ಅನೇಕ ಪ್ರಾಣತ್ಯಾಗಗಳ ಫಲವಾಗಿ 1947ರಲ್ಲಿ ನಮಗೆ ದೊರೆತ ಸ್ವಾತಂತ್ರ್ಯವನ್ನು(freedom) ನಾವು ಪ್ರತಿ ವರ್ಷ ಈ ದಿನದಂದು ಆಚರಿಸುತ್ತೇವೆ.

2025ರಲ್ಲಿ, ನಾವು 79ನೇ ಸ್ವಾತಂತ್ರ್ಯ ದಿನವನ್ನು(79th Independence Day) ಹೆಮ್ಮೆ ಮತ್ತು ಸಂತೋಷದಿಂದ ಸ್ವಾಗತಿಸುತ್ತಿದ್ದೇವೆ. ಪ್ರತಿ ವರ್ಷ ಆಗಸ್ಟ್ 15 ನಮ್ಮ ರಾಷ್ಟ್ರಕ್ಕೆ(nation) ಅಪಾರ ಹೆಮ್ಮೆ ತರುವ ದಿನ. ಇದು ಕೇವಲ ಒಂದು ದಿನದ ಹಬ್ಬವಲ್ಲ,

ನಮ್ಮ ಸ್ವಾತಂತ್ರ್ಯದ ಮಹತ್ವ , ನಮ್ಮ ವೀರರ ತ್ಯಾಗ ಮತ್ತು ನಮ್ಮ ಕರ್ತವ್ಯಗಳನ್ನು ನೆನಪಿಸುವ ಮಹತ್ವದ ಕ್ಷಣವಾಗಿದೆ. 1947ರ ಆಗಸ್ಟ್ 15ರಂದು, ಶತಮಾನಗಳ ಕಾಲದ ಬ್ರಿಟಿಷ್ ಆಳ್ವಿಕೆಗೆ ತೆರೆ ಬಿದ್ದ ದಿನ.

ಆ ದಿನದಿಂದ ಇಂದಿನ ತನಕ, ಸ್ವಾತಂತ್ರ್ಯ ನಮ್ಮ ಹೆಮ್ಮೆಯ ಚಿಹ್ನೆಯಾಗಿಯೇ ಉಳಿದಿದೆ.

ಸ್ವಾತಂತ್ರ್ಯ ದಿನವಾದ ಇಂದು ನಾವು ಧ್ವಜಾರೋಹಣ(Flag hoisting), ಸಾಂಸ್ಕೃತಿಕ ಕಾರ್ಯಕ್ರಮ, ಪ್ರಧಾನ ಮಂತ್ರಿಗಳ ಭಾಷಣ ಇವುಗಳಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ ಈ ಆಚರಣೆಗಳು ಕೇವಲ ಚಿಹ್ನೆಗಳಷ್ಟೇ.

ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ದಿನವು ನಮ್ಮ ದೇಶದ ಏಕತೆ(Unity of the country), ಸಮಗ್ರತೆ ಮತ್ತು ಪ್ರಗತಿಯನ್ನು ಕಾಯ್ದುಕೊಳ್ಳುವ ಪ್ರತಿಜ್ಞೆಯ ದಿನ. ನಾವು ತ್ರಿವರ್ಣವನ್ನು ಎತ್ತಿ ಹಿಡಿದಾಗ, ಅದರ ಹಿಂದಿರುವ ಹೋರಾಟ, ತ್ಯಾಗ ಮತ್ತು ಬಲಿದಾನವನ್ನು ಮರೆಯಬಾರದು.

ಸ್ವಾತಂತ್ರ್ಯ ಸಿಕ್ಕಿದೆ, ಆದರೆ ನಿಜವಾದ ಸ್ವಾತಂತ್ರ್ಯ ಭ್ರಷ್ಟಾಚಾರ, ಬಡತನ, ಅಸಮಾನತೆಗಳಿಂದ ಮುಕ್ತರಾಗುವಾಗ ಮಾತ್ರ ಸಾರ್ಥಕವಾಗುತ್ತದೆ.

79th Independence Day
ಇಂದಿನ ಭಾರತಕ್ಕೆ ಅಗತ್ಯವಿರುವುದು ಕೇವಲ ಹಬ್ಬದ ಉತ್ಸವವಲ್ಲ, ದೇಶಕ್ಕಾಗಿ ಶ್ರಮಿಸುವ ಮನೋಭಾವ.

ಪ್ರತಿಯೊಬ್ಬ ನಾಗರಿಕನೂ ಪ್ರಗತಿ, ನ್ಯಾಯ, ಶಾಂತಿ ಮತ್ತು ಜವಾಬ್ದಾರಿತನದ ಕಡೆಗೆ ಹೆಜ್ಜೆ ಹಾಕಬೇಕು.

ಸ್ವಾತಂತ್ರ್ಯವನ್ನು ಕಾಪಾಡುವುದು ಸುಲಭದ ಕೆಲಸವಲ್ಲ. ಅದು ಕೇವಲ ಗಡಿಗಳನ್ನು ಕಾಪಾಡುವುದಲ್ಲ, ನಮ್ಮ ಮೌಲ್ಯಗಳು, ಸಂವಿಧಾನ,

ಪ್ರಜಾಸತ್ತಾತ್ಮಕ ಪರಂಪರೆ ಮತ್ತು ಮಾನವೀಯತೆಗಳನ್ನು ಉಳಿಸುವ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ದಿನದಂದು ನಾವು ಈ ನಿಟ್ಟಿನಲ್ಲಿ ನಂಬಿಕೆ ಗಟ್ಟಿಗೊಳಿಸಬೇಕು.

ನಮ್ಮ ದೇಶದ ಹಿತಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ನಿರ್ಧಾರ ಮಾಡಬೇಕು.

ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳು(Prime Minister) ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.

ಈ ಭಾಷಣದಲ್ಲಿ ದೇಶದ ಸಾಧನೆ, ಸವಾಲುಗಳು, ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳುತ್ತಾರೆ.
ಸ್ವಾತಂತ್ರ್ಯ ಪಡೆದು 79 ವರ್ಷ ಆಗುತ್ತಿದೆ. ಆದರೆ ಆದರೆ ನಿಜವಾದ ಸ್ವಾತಂತ್ರ್ಯ ಇನ್ನೂ ಎಲ್ಲರಿಗೂ ಸಮಾನವಾಗಿ ತಲುಪಿಲ್ಲ. ಭ್ರಷ್ಟಾಚಾರ, ಬಡತನ, ಅಸಮಾನತೆ,

ನಿರುದ್ಯೋಗ ಇವು ನಮ್ಮ ಮುಂದಿರುವ ಸವಾಲುಗಳು ಎಂದರೆ ತಪ್ಪಾಗಲಾರದು.

ಈ ದಿನ ನಾವು ಕೇವಲ ಧ್ವಜ ಹಾರಿಸುವುದರಲ್ಲಿ ಮಾತ್ರ ತೃಪ್ತಿಗೊಳ್ಳದೆ, ನಮ್ಮ ದೇಶವನ್ನು ಸುಧಾರಿಸಲು ನಾವು ಏನು ಮಾಡಬಹುದು ಎಂಬುದರ ಮೇಲೆ ಚಿಂತನೆ ನಡೆಸುವುದು ಅತ್ಯಗತ್ಯವಾಗಿದೆ.

ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿ ನಮಗೆ ಈ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅವರ ಕನಸು ಕೇವಲ ಆಳ್ವಿಕೆಯಿಂದ ಮುಕ್ತಿ ಮಾತ್ರವಲ್ಲ

ನ್ಯಾಯ, ಸಮಾನತೆ, ಸೌಹಾರ್ದತೆ ಮತ್ತು ಪ್ರಗತಿ ಹೊಂದಿದ ಭಾರತವಿತ್ತು. ಆ ಕನಸು ನನಸಾಗಿಸಲು ಪ್ರತಿಯೊಬ್ಬ ನಾಗರಿಕನೂ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು.

ತ್ರಿವರ್ಣವನ್ನು ಕೇವಲ ಧ್ವಜದಲ್ಲಿ ಮಾತ್ರವಲ್ಲ, ನಮ್ಮ ನಡವಳಿಕೆಯಲ್ಲಿ, ನಮ್ಮ ಕಾರ್ಯಗಳಲ್ಲಿ ಪ್ರತಿಬಿಂಬಿಸೋಣ. ಆಗಷ್ಟೇ ಈ ಹಬ್ಬಕ್ಕೆ ನಿಜವಾದ ಅರ್ಥ ಬಂದು ಸಾರ್ಥಕವಾಗುತ್ತದೆ.

ಭಾರತದ ಸ್ವಾತಂತ್ರ್ಯದ ಹಾದಿ ಕೇವಲ ಇತಿಹಾಸದ ಅಧ್ಯಾಯವಲ್ಲ. ಅದು ಧೈರ್ಯ, ಏಕತೆ ಮತ್ತು ತ್ಯಾಗದ ಮಹಾಗಾಥೆ.

ಸುಮಾರು ಎರಡು ಶತಮಾನಗಳ ಕಾಲ ಭಾರತವು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗೆ ಒಳಗಾಗಿತ್ತು. ಈ ಅವಧಿಯಲ್ಲಿ ಅನೇಕ ನಾಯಕರು ಮತ್ತು ಲಕ್ಷಾಂತರ ಸಾಮಾನ್ಯ ಜನರು

ತಮ್ಮ ಜೀವನವನ್ನು ತ್ಯಾಗಮಾಡಿದರು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್ ಹಾಗೂ ಇತರ ಅಸಂಖ್ಯಾತ ಹೋರಾಟಗಾರರು ರಾಷ್ಟ್ರದ ಮುಕ್ತಿಗಾಗಿ ಹೋರಾಡಿದರು.

ಅಸಹಕಾರ ಚಳುವಳಿ, ನಾಗರಿಕ ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ – ಈ ಚಳುವಳಿಗಳು ಬ್ರಿಟಿಷರ ದಬ್ಬಾಳಿಕೆಗೆ ತೀವ್ರ ಪ್ರತಿರೋಧ ತಂದುಕೊಟ್ಟವು.

ಲಕ್ಷಾಂತರ ಜನರು ಜೈಲು ಸೇರಿದರು, ಅನೇಕರು ಜೀವತ್ಯಾಗ ಮಾಡಿದರು. ಅವರ ತ್ಯಾಗದಿಂದಲೇ 1947ರ ಆಗಸ್ಟ್ 15ರಂದು ಭಾರತವು ಸ್ವತಂತ್ರವಾಯಿತು.

ಭಾರತದ ಸ್ವಾತಂತ್ರ್ಯದ ಹೋರಾಟದಲ್ಲಿ ಅನೇಕ ನಾಯಕರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದರು. ಅವರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ವಿಶೇಷ.

ಅವರು ಕೇವಲ ಸಾಮಾಜಿಕ ಪರಿವರ್ತನೆಗಾಗಿ ಹೋರಾಡಿದ ನಾಯಕನಷ್ಟೇ ಅಲ್ಲ, ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಪ್ರತಿಪಾದಿಸಿದ ಮಹಾನ್ ಚಿಂತಕ.

ಧ್ವಜವು ಗಾಳಿಯಲ್ಲಿ ಹಾರುತ್ತದೆ; ಅದು ನಮ್ಮ ಹೆಮ್ಮೆಯ ಚಿಹ್ನೆ. ಆದರೆ ರಾಷ್ಟ್ರಪ್ರೇಮವು ಹೃದಯದಲ್ಲಿ ಶಾಶ್ವತವಾಗಿ ನೆಲಸಬೇಕು. ದೇಶಪ್ರೇಮ ಎಂದರೆ ಕೇವಲ ಘೋಷಣೆಗಳಲ್ಲ,

ಅದು ನಮ್ಮ ನಡವಳಿಕೆಯಲ್ಲಿ, ಕರ್ತವ್ಯದಲ್ಲಿ, ಮತ್ತು ಪ್ರಾಮಾಣಿಕತೆಯಲ್ಲಿ ತೋರುವ ಗುಣ. ಭಾರತವನ್ನು ಬದಲಾಯಿಸಲು ಕಾದು ಕುಳಿತುಕೊಳ್ಳಬೇಡಿ. ಬದಲಾವಣೆಯ ಹೊಣೆ ನಮ್ಮದಾಗಿದೆ.

ಇಂದಿನ ಕರ್ತವ್ಯ ಹೋರಾಟಗಾರರ ತ್ಯಾಗವನ್ನು ಗೌರವಿಸುವುದಷ್ಟೇ ಅಲ್ಲ, ಹೊಸ ಭಾರತದ ಕನಸನ್ನು ಸಾಕಾರಗೊಳಿಸುವುದೂ ಹೌದು.

ಸ್ವಾತಂತ್ರ್ಯ ನಮಗೆ ಬಿಟ್ಟುಕೊಟ್ಟ ಪರಂಪರೆ, ಆದರೆ ಅದನ್ನು ಉಳಿಸುವ ಹೊಣೆ ನಮ್ಮದು. ಈ ದಿನವನ್ನು ನಾವು ಕೇವಲ ಹರ್ಷೋತ್ಸವವನ್ನಾಗಿ ಮಾತ್ರ ಮಾಡದೆ,

ಹೊಸ ಭಾರತದ ಕನಸಿಗಾಗಿ ಶ್ರಮಿಸುವ ದಿನವಾಗಿಸೋಣ. ಸ್ವಾತಂತ್ರ್ಯವು ಕೇವಲ ಒಂದು ಹಕ್ಕು ಅಲ್ಲ, ಅದು ಕರ್ತವ್ಯವೂ ಹೌದು. ಧ್ವಜ ಗಾಳಿಯಲ್ಲಿ ಹಾರಲಿ, ಆದರೆ ದೇಶಪ್ರೇಮ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲಸಲಿ.

ಇದನ್ನು ಓದಿ :  79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ : ತ್ಯಾಗದ ನೆನಪು, ಭವಿಷ್ಯದ ಪ್ರತಿಜ್ಞೆ

ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು…!

•ವಿಶ್ವಪ್ರಕಾಶ ಟಿ ಮಲಗೊಂಡ

Tags: 79th Independence dayDelhiFlag hoistingFreedomIndiaPM Modivijaya times

Related News

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ
ದೇಶ-ವಿದೇಶ

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ

July 20, 2026
18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ
ಪ್ರಮುಖ ಸುದ್ದಿ

18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ

July 20, 2026
ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ
ದೇಶ-ವಿದೇಶ

ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ

July 20, 2026
ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ
Sports

ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ

July 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.