- ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ
- ಕಳೆದ 7 ತಿಂಗಳಿನಿಂದ ಬಿಟ್ಟು ಬಿಡದೆ ಕೇರಳವನ್ನು ಕಾಡುತ್ತಿರುವ ಸೋಂಕು
- ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ಅನಿಶ್ಚಿತತೆ (A brain-eating monster enters Kerala)
Kerala: ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್(Amebic meningoencephalitis) ಎನ್ನುವ ಮೆದುಳು ತಿನ್ನುವ ಅಮೀಬಾ ಮಾರಕ ಸೋಂಕು(deadly infection) ದೇವರ ನಾಡು ಕೇರಳ ರಾಜ್ಯಕ್ಕೆ ತಲೆನೋವಾಗಿ ಪರಿಣಮಿಸಿದ್ದು,
ಕಳೆದ 7 ತಿಂಗಳಿನಲ್ಲಿ ಒಟ್ಟು 17 ಮಂದಿಯನ್ನು ಬಲಿಪಡೆದುಕೊಂಡಿದೆ. ಈ ತಿಂಗಳಿನಲ್ಲಿಯೇ ಒಟ್ಟು ಏಳು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.
ಕೇರಳಕ್ಕೆ ಈ ಅಮೀಬಾ ಎಂಬ ಮಾರಕ ಸೋಂಕು ತಲೆನೋವಾಗಿ ಪರಿಣಮಿಸಿದ್ದು ಭೀತಿ ಸೃಷ್ಟಿಸಿದೆ.
ಇದು ಅತೀ ಅಪರೂಪದಲ್ಲಿ ಅಪರೂಪದ ಅಪಾಯಕಾರಿ ಮೆದುಳಿನ ಸೋಂಕು(Dangerous brain infection). ಈ ಹೊಸ ಪ್ರಕರಣ ವೈರಸ್ ಮೊದಲು ಪತ್ತೆಯಾಗಿದ್ದು ತಿರುವನಂತಪುರಂನಲ್ಲಿ,
ಮೊದಲಿಗೆ 17 ವರ್ಷದ ಬಾಲಕನಲ್ಲಿ ಈ ಸೋಂಕು ಪತ್ತೆಯಾಗಿದೆ, ನಂತರ ಇಲ್ಲಿಯವರೆಗೆ 17 ಜನ ಸಾವನ್ನಪ್ಪಿದ್ರೆ ಒಟ್ಟು 67 ಜನ ಮೆದುಳು ತಿನ್ನುವ ಅಮೀಬಾ ಸೋಂಕಿಗೆ(amoeba infection) ಒಳಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ(Department of Health) ದೃಢಪಡಿಸಿದೆ.

ಆರಂಭದಲ್ಲಿ ಆರೋಗ್ಯ ತಜ್ಞರು(Health experts) ನೀರಿನ ಕೊಳ, ಕೆರೆ ಅಥವಾ ಈಜುಕೊಳಗಳಲ್ಲಿ ಇಳಿದವರಲ್ಲಿ ಸೋಂಕು ತಗುಲುತ್ತಿದೆ ಎಂದುಕೊಂಡಿದ್ದರು.
ಕಲುಷಿತ ನೀರು ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳು ತಲುಪುತ್ತಿದೆ ಎನ್ನಲಾಗುತ್ತಿತ್ತು. ಆದರೆ, ಇತ್ತೀಚೆಗೆ ಪತ್ತೆಯಾಗ ಕೆಲ ಪ್ರಕರಣಗಳು ಆರೋಗ್ಯ ತಜ್ಞರ ಕಳವಳಗಳನ್ನು ಹೆಚ್ಚಿಸಿದೆ.
ಕೊಳ, ಕೆರೆ, ಈಜುಕೊಳದ ಸಂಪರ್ಕಕ್ಕೆ ಬಾರದ ಮೂರು ತಿಂಗಳ ಮಗುವಿನಲ್ಲಿ ಹಾಗೂ ಇತರರಲ್ಲಿಯೂ ಈ ಮಾರಕ ಸೋಂಕು ಕಾಣಿಸಿಕೊಂಡಿದ್ದು ಆರೋಗ್ಯ ತಜ್ಞರ ಊಹೆಗಳ ಕುರಿತು ಪ್ರಶ್ನೆಗಳು ಶುರುವಾಗುವಂತೆ ಮಾಡಿದೆ.
ಈ ಅಪರೂಪದ ಅಪಾಯಕಾರಿ ಮೆದುಳಿನ ಸೋಂಕು ಕಲುಷಿತ ನೀರು ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳು ತಲುಪುತ್ತಿದೆ, ಸೆಪ್ಟೆಂಬರ್ 12ರಂದು 2 ಹೊಸ ಕೇಸ್ಗಳು ದಾಖಲಾಗಿದ್ದು,
ಈ ತಿಂಗಳಿನಲ್ಲಿಯೇ ಒಟ್ಟು 19 ಪ್ರಕರಣಳು ಜೊತೆಗೆ 7 ಮಂದಿ ಸಾವು ಸಂಭವಿಸಿದೆ. ವರದಿಯ ಪ್ರಕಾರ ಸೋಂಕಿತ ಬಾಲಕ ಹಿಂದಿನ ದಿನ ಸ್ನೇಹಿತರೊಂದಿಗೆ ಈಜುಕೊಳದಲ್ಲಿ ಸ್ನಾನಮಾಡಿದ್ದನಂತೆ, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಈಜುಕೊಳ ಮುಚ್ಚಿ ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಸಂಗ್ರಹಿಸಿದೆ. ಹಸು-ಎಮ್ಮೆ ಸ್ನಾನ ಮಾಡುವ ಜಲಮೂಲ,
ಕಲುಷಿತ ನೀರಲ್ಲಿ ಸ್ನಾನ ಬೇಡ ಹಾಗು ಮನೆಗಳ ನೀರಿನ ಸಂಗ್ರಹಣಾ ಸೌಲಭ್ಯಗಳನ್ನು ಸ್ವಚ್ಛವಾಗಿಡಬೇಕು ಮತ್ತು ನೀರು ನಿಮ್ಮ ಮೂಗಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ಕೇರಳ ಸರ್ಕಾರದ ಆರೋಗ್ಯ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್(Veena George) ನೀರಿನ ಸುರಕ್ಷತೆ, ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ.
ಸೋಂಕುಗಳ ಸಂಖ್ಯೆ ಹೆಚ್ಚಾಗಿದ್ದರೂ ಕೇರಳದಲ್ಲಿ ಸೋಂಕಿನಿಂದ ಮರಣ ಪ್ರಮಾಣವು ಜಾಗತಿಕ ಅಂಕಿ ಅಂಶಕ್ಕಿಂತ ಗಮನಾರ್ಹವಾಗಿ ಕಡಿಮೆ ಇದೆ.
ಇದನ್ನು ಓದಿ : ಕೆಟ್ಟ ಜೀವನಶೈಲಿ ಮಾತ್ರವಲ್ಲ ಹೃದಯಾಘಾತಕ್ಕೆ ಸೋಂಕು ಕೂಡ ಕಾರಣವಾಗಬಹುದು
ಈ ನಡುವೆಯೂ ರೋಗ ತಡೆಯುವುದು ಅಥವಾ ಗುಣಪಡಿಸುವ ಮಾರ್ಗಗಳ ಬಗ್ಗೆ ಸ್ಪಷ್ಟತೆ ಸಿಗದ ಕಾರಣ ಕೇರಳದಲ್ಲಿ ಆತಂಕ ಮನೆಮಾಡಿದೆ. (A brain-eating monster enters Kerala)