ಚೆನ್ನೈ, ಜು. 12: ತಮಿಳುನಾಡು ರಾಜಕೀಯಕ್ಕೆ ಎಂಟ್ರಿಕೊಡುವ ಸಲುವಾಗಿ ಭಾರೀ ಕಸರತ್ತು ನಡೆಸಿದ್ದ ಸೂಪರ್ ಸ್ಟಾರ್ ರಜನಿಕಾಂತ್, ಇದೀಗ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ರಾಜಕೀಯ ಪ್ರವೇಶಿಸುವ ಯಾವುದೇ ಯೋಚನೆ ಇಲ್ಲ.
ಆ ಮೂಲಕ ರಾಜಕೀಯ ಪ್ರವೇಶಿಸುವ ಸಂಬಂಧದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಸಂಬಂಧ ಸೋಮವಾರ ಸಭೆ ನಡೆಸಿ ಬಳಿಕ ತಮ್ಮ ನಿರ್ಧಾರವನ್ನು ತಿಳಿಸಿರುವ ಅವರು, ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯಾವುದೇ ಯೋಚನೆ ಮಾಡಿಲ್ಲʼ ಎಂದು
ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆಎಳೆದಿದ್ದಾರೆ.
ರಜನಿ ಮಕ್ಕಳ್ ಮಂದ್ರಮ್ʼ ಅನ್ನು ವಿಸರ್ಜಿಸಲಾಗಿದ್ದು, ಅದನ್ನು ʻರಜನಿಕಾಂತ್ ರಾಸಿಗರ್ ನರ್ಪಾಣಿ ಮಂದ್ರಮ್ʼ ಅಥವಾ ʻರಜನಿಕಾಂತ್ ಅಭಿಮಾನಿಗಳ ಕಲ್ಯಾಣ ವೇದಿಕೆʼ ಎಂದು ಮಾರ್ಪಡಿಸಲಾಗಿದೆ.