ಬೆಂಗಳೂರು, ಏ. 07: ರೂರಿಂಗ್ ಸ್ಟಾರ್ ಶ್ರೀಮುರುಳಿಗೆ ಶೂಟಿಂಗ್ ವೇಳೆ ಗಾಯಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಮದಗಜ ಶೂಟಿಂಗ್ ನಡೆಯುತ್ತಿತ್ತು. ಅಯೋಗ್ಯ ಸಿನಿಮಾದಿಂದ ಯಶಸ್ಸು ಗಳಿಸಿರುವ ನಿರ್ದೇಶಕ ಮಹೇಶ್ ‘ಮದಗಜ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜೊತೆಗೆ ತೆಲಗಿನ ಜಗಪತಿ ರಾಜು ಅವರು ಮದಗಜ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಮದಗಜ ಸಿನಿಮಾದ ಫೈಟಿಂಗ್ ಶೂಟಿಂಗ್ ಶ್ರೀಮುರುಳಿಗೆ ಕಾಲಿಗೆ ಗಾಯವಾಗಿದೆ. ಸದ್ಯ ಕಾಲು ನೋವಿನಿಂದ ನರಳುತ್ತಿರುವ ಶ್ರೀಮುರುಳಿಗೆ 15 ದಿನಗಳ ಕಾಲ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಐದಾರು ದಿನ ಆಸ್ಪತ್ರೆಯಲ್ಲೆ ಇದ್ದು, ನಂತರ ಮನೆಗೆ ಹೋಗುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಮದಗಜ ಶೂಟಿಂಗ್ ಸ್ಥಗಿತವಾಗಿದೆ. ಶ್ರೀಮುರುಳಿ ರೆಸ್ಟ್ ತೆಗೆದುಕೊಂಡು ಬಂದ ನಂತರ ಚಿತ್ರೀಕರಣ ಮುಂದುವರೆಸಲು ಟೀಂ ತೀರ್ಮಾನಿಸಿದೆ.