ಬೆಂಗಳೂರು, ಜು. 19: ಬಿಜೆಪಿ ನಾಯಕಿ, ನಟಿ ಶೃತಿಗೆ ನೀಡಲಾಗಿದ್ದ ಸ್ಥಾನ ಹಿಂಪಡೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆ ಸ್ಥಾನವನ್ನು ತನ್ನ ಆಪ್ತನಿಗೆ ನೀಡಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿದ್ದ ಸಿಎಂ ಯಡಿಯೂರಪ್ಪ, ನಟಿ ಶೃತಿ ಅವರನ್ನ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆಯನ್ನಾಗಿ ನೇಮಿಸಿದ್ದರು.
ಆದರೆ ಇದೀಗ ಶೃತಿ ಅವರಿಗೆ ನೀಡಲಾಗಿದ್ದ ನೇಮಕಾತಿಯನ್ನು ಹಿಂಪಡೆದು, ಆ ಸ್ಥಾನಕ್ಕೆ ತಮ್ಮ ಆಪ್ತ ಕಾ.ಪು. ಸಿದ್ದಲಿಂಗಸ್ವಾಮಿ ಅವರನ್ನು ನೇಮಿಸಿದ್ದಾರೆ.