• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಟೈಮ್ಸ್‌

ಗುಡ್ಡಕ್ಕೆ ಬೆಂಕಿ ಹಚ್ಚುವ ಹುಚ್ಚು ಮನಸ್ಥಿತಿ ಇನ್ನು ನಮ್ಮಲ್ಲಿ ತಪ್ಪಿಲ್ಲ ; ಇದರ ಅನಾಹುತಗಳೇನು ಗೊತ್ತಾ?

Mohan Shetty by Mohan Shetty
in ವಿಜಯ ಟೈಮ್ಸ್‌
fire
0
SHARES
4
VIEWS
Share on FacebookShare on Twitter

ಬೇಸಿಗೆ ಕಾಲ(Summer) ಬಂತೆಂದರೆ ಸಾಕು ಒಣ ಹುಲ್ಲಿಗೆ(Dry Grass) ಬೆಂಕಿ ಹಚ್ಚುವುದು ಸರ್ವೇ ಸಾಮಾನ್ಯ ಚಟವಾಗಿಬಿಟ್ಟಿದೆ. ಹುಲ್ಲು ಸುಡಲ್ಪಟ್ಟರೆ ಮುಂದಿನ ವರ್ಷ ಹುಲ್ಲು ಚೆನ್ನಾಗಿ ಬೆಳೆಯುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ ಬೆಂಕಿಯಲ್ಲಿ ಸುಡದಿದ್ದರು ಹುಲ್ಲು ಹಸಿರಾಗಿ ಚಿಗುರುತ್ತದೆ. ಮಾನವ ಈ ಭೂಮಿಯ ಮೇಲೆ ವಿಕಾಸವಾಗುವ ಮೊದಲಿನಿಂದಲೂ ಕೋಟ್ಯಾಂತರ ವರ್ಷಗಳಿಂದಲೂ ಹುಲ್ಲು ತನ್ನಷ್ಟಕ್ಕೆ ತಾನೇ ಬೆಳೆದು ಬಂದಿದೆ.

nature

ಹುಲ್ಲಿಗೆ ಬೆಂಕಿ ಇಡುವುದರಿಂದ ಮಾನವನ ಜೊತೆಗೆ ಇಡೀ ಜೀವ ಸಂಕುಲಕ್ಕೆ ಅನಾಹುತಗಳು ಎದುರಾಗುತ್ತವೆ. ಗುಡ್ಡದಲ್ಲಿ ಅನೇಕ ಜೀವರಾಶಿಗಳು ಇದ್ದು ಅವು ಪರಿಸರ ಸಮತೋಲನ ಉಂಟುಮಾಡುತ್ತವೆ. ಹುಲ್ಲಿನಲ್ಲಿ ಅನೇಕ ಪಕ್ಷಿಗಳು,ಓತಿಗಳು, ಹಲ್ಲಿಗಳು, ಕೀಟಗಳು ಇಟ್ಟಿರುವ ಮೊಟ್ಟೆಗಳು, ಜೀವರಾಶಿಗಳು ಬೆಂಕಿಗೆ ಆಹುತಿಯಾಗಿ ನಾಶವಾಗುತ್ತವೆ. ಮೊಲ,ಇಲಿ, ಓತಿ, ಅಳಿಲು, ಜಿಂಕೆಯ ಮರಿಗಳು ಬೆಂಕಿಯಲ್ಲಿ ಬೆಂದು ಹೋಗುತ್ತವೆ.

grass

ಉಳಿದ ಕೀಟಗಳು ಆಹಾರ ಸಿಗದೆ ಬೆಳೆಗಳಿಗೆ ದಾಳಿ ಇಡುತ್ತವೆ. ಪಕ್ಷಿಗಳು ತಂದು ಹಾಕಿದ ಅನೇಕ ವೈವಿಧ್ಯ ಸಸ್ಯ ಬೀಜಗಳು ಮಳೆಗಾಲದಲ್ಲಿ ಮೊಳಕೆಯಾಗಿ ಸಸಿಗಳಾಗಿರುತ್ತವೆ ಹಾಗೂ ಇತರೆ ಗಿಡಗಳು, ಮರಗಳು ಬೆಂಕಿಯಿಂದ ಸುಟ್ಟು ಹೋಗುವ ಮುಖೇನ ನಾಶವಾಗುತ್ತದೆ.
ಮರಗಿಡಗಳು ಕಡಿಮೆಯಾದರೆ, ನೀರಿನ ಹಿಂಗುವಿಕೆ ಕಡಿಮೆಯಾಗಿ ಭೂಗರ್ಭದ ನೀರಿನ ಮಟ್ಟ ಕಡಿಮೆಯಾಗುತ್ತದೆ. ಮಳೆ ಪ್ರಮಾಣ ಕಡಿಮೆಯಾಗುತ್ತದೆ, ಗುಡ್ಡಬೋಳಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ, ಸೌಂದರ್ಯ ಹಾಳಾಗುತ್ತದೆ.

dry grass

ನಮ್ಮೂರಿನ ರಕ್ಷಾ ಕವಚದಂತಿರುವ ಬೆಟ್ಟದ ಸಾಲುಗಳಲ್ಲಿ ದಟ್ಟವಾದ ಕಾಡು ಇದ್ದಿದ್ದರೆ ನಮ್ಮೂರು ಹೇಗೆ ಕಾಣುತ್ತಿತ್ತು ಎಂದು ಊಹಿಸಿಕೊಳ್ಳಿ, ಕನಸು ಕಾಣಿರಿ. ದಯವಿಟ್ಟು ಬೆಂಕಿ ಹಚ್ಚುವ ಪ್ರವೃತ್ತಿಯನ್ನು ಇಂದೆಯೇ ತ್ಯಜಿಸಿಬಿಡಿ, ಯಾರೂ ಬೆಂಕಿ ಇಡಬೇಡಿ. ಬೆಂಕಿ ಇಡುವವರಿಗೆ ತಿಳುವಳಿಕೆ ಹೇಳಿ ಅವರಿಗೆ ಅರ್ಥೈಸಬೇಕು. “ಜೀವ ಸಂಕುಲಕ್ಕೆ ಬೆಂಕಿ ಇಟ್ಟರೆ ಮುಂದೆ ನಮ್ಮ ಬದುಕಿಗೇ ನಾವೇ ಕೊಳ್ಳಿ ಇಟ್ಟು ಕೊಂಡಂತೆ”

ಮಾಹಿತಿ ಕೃಪೆ : ಪರಿಸರ ಪರಿವಾರ

Tags: enviornamentfirehillnaturetrees

Related News

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ: ಪ್ಯಾಸಿವ್ ಆದಾಯದ ಹೊಸ ಮಾರ್ಗಗಳು
ಪ್ರಮುಖ ಸುದ್ದಿ

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ: ಪ್ಯಾಸಿವ್ ಆದಾಯದ ಹೊಸ ಮಾರ್ಗಗಳು

April 22, 2026
ಮುಂದಿನ 7 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ: ಹವಾಮಾನ ಇಲಾಖೆಯ ಮುನ್ಸೂಚನೆ
ಪ್ರಮುಖ ಸುದ್ದಿ

ಮುಂದಿನ 7 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ: ಹವಾಮಾನ ಇಲಾಖೆಯ ಮುನ್ಸೂಚನೆ

April 22, 2026
ಇರಾನ್ ವಿರುದ್ಧ ದಾಳಿಗೆ ತಾತ್ಕಾಲಿಕ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಡೊನಾಲ್ಡ್ ಟ್ರಂಪ್
ದೇಶ-ವಿದೇಶ

ಇರಾನ್ ವಿರುದ್ಧ ದಾಳಿಗೆ ತಾತ್ಕಾಲಿಕ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಡೊನಾಲ್ಡ್ ಟ್ರಂಪ್

April 22, 2026
ಹಿಂದಿ ಭಾಷೆಗೆ ಗ್ರೇಡ್ ವಿಚಾರ ಸರ್ಕಾರಕ್ಕೆ ಹಿನ್ನೆಡೆ: ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್
ದೇಶ-ವಿದೇಶ

ಹಿಂದಿ ಭಾಷೆಗೆ ಗ್ರೇಡ್ ವಿಚಾರ ಸರ್ಕಾರಕ್ಕೆ ಹಿನ್ನೆಡೆ: ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

April 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.