ಇದು ಬೀದರ್ನ ಔರಾದ್ನ ಪ್ರವಾಹ ಪರಿಸ್ಥಿತಿ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಕಟ್ಟೆ, ಹಳ್ಳ, ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ.
ಪ್ರವಾಹದಿಂದಾಗಿ ಹೊಲ ಗದ್ದೆಗಳೆಲ್ಲಾ ನೀರಿನಿಂದ ಆವೃತವಾಗಿವೆ. ಬೆಳೆದ ಬೆಳೆಗಳೆಲ್ಲಾ ನೀರಿನಲ್ಲಿ ಮುಳುಗಿವೆ. ಬೆಳೆ ನಷ್ಟವಾಗಿವೆ ಇದರಿಂದ ರೈತರು ಆತಂಕಿತರಾಗಿದ್ದಾರೆ. ಮೊದಲೇ ಕೊರೋನಾ ಸಂಕಷ್ಟದಿಂದ ರೈತರು ಜರ್ಜರಿತರಾಗಿದ್ದಾರೆ. ಈಗ ಪ್ರವಾಹಕ್ಕೆ ಬೆಳೆಯೂ ಹಾಳಾಗಿದೆ.
ಸತತವಾಗಿ ಸುರಿಯಿತ್ತಿರುವ ಭಾರಿ ಮಳೆಗೆ ಔರಾದ – ಬೀದರ್ ಮುಖ್ಯರಸ್ತೆಯ ಖಾಶಂಪೂರ್ ಸೇತುವೆ ಮುಳಗಡೆ, ಜೋತೆಗೆ ವಡಗಾಂವ ಬಳಿಯ ಸೇತುವ ಸಂಪರ್ಕ ಕಡಿತಗೊಂಡಿದೆ. ಔರಾದನ ಬೋರ್ಗಿ ಗ್ರಾಮದ ಹಲವಾರು ಮನೆಗಳಿಗೆ ಮಳೆನೀರು ನುಗ್ಗಿದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ಮಳೆ ನುಗ್ಗಿದ ಕಾರಣ, ಮನೆಯಲ್ಲಿಟ್ಟಿರುವ ರೇಷನ್, ಬಟ್ಟೆ ಬರೆಯೆಲ್ಲಾ ನೀರಲ್ಲಿ ಕೊಚ್ಚಿ ಹೋಗಿದೆ.
ನೆರೆಯಿಂದ ಜನ ತತ್ತರಿಸಿ ಹೋಗಿದ್ರೂ ಸಹ ಜಿಲ್ಲಾಡಳಿತ ಮಾತ್ರ ಇವರ ನೆರವಿಗೆ ಧಾವಿಸಿಲ್ಲ. ಯಾವುದೇ ಪರಿಹಾರವನ್ನೂ ಘೋಷಿಸಿಲ್ಲ. ನೆರೆಯಿಂದ ನೂರಾರು ಎಕರೆ ಕೃಷಿ ಭೂಮಿ ಹಾಳಾಗಿದ್ದು, ರೈತರು ಭಾರೀ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಂಡು ಇಲ್ಲಿನ ಗ್ರಾಮಸ್ಥರ ನೆರವಿಗೆ ಧಾವಿಸಬೇಕಾಗಿ ಮನವಿ ಮಾಡುತ್ತಿದ್ದಾರೆ.
ಔರಾದ್ನಿಂದ ಪವನ್, ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್