• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ವಿಮಾನ ಪ್ರಯಾಣಿಕನಿಗೆ 2 ಬಾರಿ ಹಾರ್ಟ್‌ ಆಟ್ಯಾಕ್‌: ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ!

Rashmitha Anish by Rashmitha Anish
in ಪ್ರಮುಖ ಸುದ್ದಿ
ವಿಮಾನ ಪ್ರಯಾಣಿಕನಿಗೆ 2 ಬಾರಿ ಹಾರ್ಟ್‌ ಆಟ್ಯಾಕ್‌: ಜೀವ ಉಳಿಸಿದ ಭಾರತೀಯ ಮೂಲದ ವೈದ್ಯ!
0
SHARES
43
VIEWS
Share on FacebookShare on Twitter

India : ಭಾರತೀಯ ಮೂಲದ ವೈದ್ಯರಾದ ಡಾ. ವಿಶ್ವರಾಜ್ ವೇಮಲಾ(Dr Vishwaraj Vemala) ಅವರು ವಿಮಾನದಲ್ಲಿ 2 ಬಾರಿ ಹೃದಯ ಸ್ತಂಭನಕ್ಕೆ(Air passenger heart attacks) ಒಳಗಾದ ಸಹ-ಪ್ರಯಾಣಿಕರೊಬ್ಬರ ಜೀವವನ್ನು 5 ಗಂಟೆಗಳ ಕಾಲ ನಿರಂತರ ಚಿಕಿತ್ಸೆ ನೀಡುವ ಮೂಲಕ ಜೀವ ಉಳಿಸಿದ್ದಾರೆ.

ಭಾರತಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಮ್ಮ ಸಹ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದ ಭಾರತೀಯ ಮೂಲದ ವೈದ್ಯರಿಗೆ ನೆಟ್ಟಿಗರು ಶ್ಲಾಘನೆ, ಮೆಚ್ಚುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ(Birmingham) ಕನ್ಸಲ್ಟೆಂಟ್ ಹೆಪಟಾಲಜಿಸ್ಟ್(Hepatologist) ಆಗಿರುವ ಡಾ.ವಿಶ್ವರಾಜ್ ವೇಮಲಾ

ಅವರು 10 ಗಂಟೆಗಳ ವಿಮಾನ ಪ್ರಯಾಣದಲ್ಲಿದ್ದಾಗ 43 ವರ್ಷದ ವ್ಯಕ್ತಿಯೊಬ್ಬರು ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದುಬಿದ್ದಿದ್ದಾರೆ.

ವಿಮಾನದಲ್ಲಿ ವೈದ್ಯಕೀಯ ವಸ್ತುಗಳು ಮತ್ತು ಪ್ರಯಾಣಿಕರಿಂದ ಬಂದ ವಸ್ತುಗಳ ನೆರವಿನಿಂದ, ಡಾ. ವೇಮಲಾ ಅವರು ತಮ್ಮ ಸಹ ಪ್ರಯಾಣಿಕರಿಗೆ ಸೂಕ್ತ ಹಾಗೂ ಶೀಘ್ರ ಚಿಕಿತ್ಸೆ ನೀಡುವ ಮೂಲಕ ಅವರ ಜೀವವನ್ನು ಉಳಿಸಿ,

ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಈ ಘಟನೆಯನ್ನು ನೆನೆದ ಅವರ ಸಂಸ್ಥೆ ವೈದ್ಯರ ಅನುಭವವನ್ನು ತಮ್ಮ ಪುಟದಲ್ಲಿ ಈ ರೀತಿ ಹಂಚಿಕೊಂಡಿದೆ.

Air passenger heart attacks

ನಮ್ಮ ಕನ್ಸಲ್ಟೆಂಟ್ ಹೆಪಟಾಲಜಿಸ್ಟ್‌ಗಳಲ್ಲಿ ಒಬ್ಬರಾದ ಡಾ. ವಿಶ್ವರಾಜ್ ವೇಮಲಾ ಅವರು ವಿಮಾನದಲ್ಲಿ ಪ್ರಯಾಣಿಸುವ ವೇಳೆ ಹೃದಯ ಸ್ತಂಭನಕ್ಕೆ ಒಳಗಾದ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿದರು.

ಸ್ಥಳದಲ್ಲಿ ದೊರೆತ ಚಿಕಿತ್ಸಾ ವಸ್ತುಗಳನ್ನು ಬಳಸಿಕೊಂಡು ಡಾ. ವೇಮಲಾ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದ ಪ್ರಯಾಣಿಕರನ್ನು ತುರ್ತು

ಸಿಬ್ಬಂದಿಗೆ ಹಸ್ತಾಂತರಿಸುವ ಮೊದಲೇ ಸೂಕ್ತ ಚಿಕಿತ್ಸೆ ನೀಡಿ ಅವರಿಗೆ ಮರು ಜೀವ ನೀಡಿದ್ದಾರೆ ಎಂದು ಹೇಳಿಕೊಂಡಿದೆ.

ಪತ್ರಿಕಾ ವರದಿಯ ಪ್ರಕಾರ, ಡಾ. ವಿಶ್ವರಾಜ್ ವೇಮಲಾ ಅವರು ಯುನೈಟೆಡ್ ಕಿಂಗ್‌ಡಮ್‌ನಿಂದ(United kingdom) ಭಾರತಕ್ಕೆ ತಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಏರ್ ಇಂಡಿಯಾ ವಿಮಾನದಲ್ಲಿ(Air passenger heart attacks) ಸಹ ಪಯಾಣಿಕರೊಬ್ಬರು ಹೃದಯಾಘಾತಕ್ಕೆ ಒಳಗಾದಾಗ

ಸಿಬ್ಬಂದಿಗಳು ವೈದ್ಯರನ್ನು ಕರೆಯಲು ಪ್ರಾರಂಭಿಸಿದ ಬೆನ್ನಲ್ಲೇ ವೈದ್ಯಕೀಯ ಜ್ಞಾನವನ್ನು ಹೊಂದಿದ್ದ ಡಾ. ವಿಶ್ವರಾಜ್ ವೇಮಲಾ ಅವರು ಕೂಡಲೇ ವ್ಯಕ್ತಿಯ ಬಳಿ ಧಾವಿಸಿ,

ಅವರಿಗೆ ತುರ್ತು ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದಾರೆ ಎಂದು ವರದಿ ಮಾಡಿದೆ.

ಪ್ರಯಾಣಿಕನ ಜೀವ ಉಳಿಸಲು ಡಾ. ವಿಶ್ವರಾಜ್ ವೇಮಲಾ ಅವರು, ಸತತ ಐದು ಗಂಟೆಗಳ ಕಾಲ ನಿರಂತರವಾಗಿ ಶ್ರಮಿಸಿದ್ದಾರೆ.

ಪ್ರಯಾಣಿಕನ ನಾಡಿ ಮಿಡಿತ ಹಿಡಿದು ಅಗತ್ಯ ಚಿಕಿತ್ಸೆ ನೀಡುವ ಮೂಲಕ ಹೆಚ್ಚು ಜಾಗರೂಕತೆ ವಹಿಸಿದ್ದಾರೆ.

ವೈದ್ಯ ವಿಶ್ವರಾಜ್ ವೇಮಲಾ ಅವರ ಸಮಯಪ್ರಜ್ಞೆ, ನಿಸ್ವಾರ್ಥ ಸಹಾಯಕ್ಕೆ ವಿಮಾನದಲ್ಲಿದ್ದ ಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಮತ್ತು ಜೀವ ಉಳಿಸಿಕೊಂಡ ವ್ಯಕ್ತಿ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ(Social media) ಹರಿದಾಡುತ್ತಿದ್ದಂತೆ ನೆಟ್ಟಿಗರು ವೈದ್ಯರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ವೈದ್ಯರ ಕರ್ತವ್ಯವನ್ನು ಮೆಚ್ಚಿ ಮಾತನಾಡಿದ್ದಾರೆ.

Tags: Doctorflightheartattack

Related News

ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ
ಆರೋಗ್ಯ

ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಹಾಗಾದರೆ ಈ 5 ಆಹಾರಗಳನ್ನು ಸೇವಿಸಿ

September 30, 2023
ಕಾಣಿಸಿದನ್ನೆಲ್ಲ ಲೈವ್‌ ಮಾಡುವ, ಫೋಟೋ ತೆಗೆಯುವ ಹೊಸ ಕನ್ನಡಕ ಬಿಡುಗಡೆ ಮಾಡಿದ ಮೆಟಾ
ದೇಶ-ವಿದೇಶ

ಕಾಣಿಸಿದನ್ನೆಲ್ಲ ಲೈವ್‌ ಮಾಡುವ, ಫೋಟೋ ತೆಗೆಯುವ ಹೊಸ ಕನ್ನಡಕ ಬಿಡುಗಡೆ ಮಾಡಿದ ಮೆಟಾ

September 30, 2023
ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ
ಪ್ರಮುಖ ಸುದ್ದಿ

ಗಾಂಧಿ ಜಯಂತಿಗೆ ಕೆ.ಆರ್‌ ಪುರ ಹಾಗೂ ಬೈಯಪ್ಪನಹಳ್ಳಿ ನಡುವೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ

September 30, 2023
ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ ; ನಮ್ಮ ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗಿಲ್ಲ – ಸಿದ್ದು ವಿರುದ್ದ ಎಚ್ಡಿಕೆ ಕಿಡಿ
ಪ್ರಮುಖ ಸುದ್ದಿ

ನಿಮಗೆ ಜಾತ್ಯತೀತತೆ ಕೇವಲ ಭಾಷಣದ ಸರಕಷ್ಟೇ ; ನಮ್ಮ ಜಾತ್ಯತೀತತೆಯನ್ನು ಪ್ರಶ್ನಿಸುವ ಯೋಗ್ಯತೆ ನಿಮಗಿಲ್ಲ – ಸಿದ್ದು ವಿರುದ್ದ ಎಚ್ಡಿಕೆ ಕಿಡಿ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.