ನವದೆಹಲಿ ಜ 21 : ಸತತ ಐವತ್ತು ವರ್ಷಗಳಿಂದ 1971ರಲ್ಲಿ ಭಾರತ-ಪಾಕ್ ಯುದ್ದದಲ್ಲಿ ಹುತಾತ್ಮರಾದ ಯೋಧರ ನೆನಪಿಗೆ ಇಂಡಿಯಾ ಗೇಟ್ ಬಳಿ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿ ಆರಲಿದೆ ಎಂಬ ಶಂಕೆ ಹಲವರಿಗೆ ಕಾಡಿದ್ದಂತು ನಿಜ.! ಈ ಕುರಿತು ಸ್ಪಷ್ಟನೆ ನೀಡಿದ ಪ್ರಧಾನಿ, ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯೊಂದಿಗೆ ಲೀನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಅಮರ್ ಜವಾನ್ ಜ್ಯೋತಿಯನ್ನು ಯಾವುದೇ ಕಾರಣಕ್ಕೂ ಆರಿಸುತ್ತಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ
50 ವರ್ಷಗಳಿಂದ ಬಿಸಿಲು, ಗಾಳಿ, ಮಳೆ ಯಾವುದಕ್ಕೂ ಅಳುಕದೆ ನಿರಂತರವಾಗಿ ಉರಿಯುತ್ತಿದ್ದ ಬೆಳಕು, ಅಜರಾಮರವಾಗಿರುವ ನಮ್ಮ ದೇಶದ ಹೆಮ್ಮೆಯ ಸೈನಿಕರ ಪ್ರತೀಕವಾಗಿರುವ ಅಮರ್ ಜವಾನ್ ಜ್ಯೋತಿ ಇನ್ಮುಂದೆ ನವೆದೆಹಲಿಯ ಇಂಡಿಯಾ ಗೇಟ್(India Gate) ಹುಲ್ಲುಹಾಸಿನ ಬಳಿ ಕಾಣಸಿಗುವುದಿಲ್ಲ, ಬದಲಾಗಿ ಅಮರ್ ಜವಾನ್ ಜ್ಯೋತಿಯ ಸಮೀಪದಲ್ಲಿಯೇ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial Flame) ಜ್ಯೋತಿಯಲ್ಲಿ ಇದನ್ನು ಲೀನ ಮಾಡಲಾಗುತ್ತದೆ. ಈ ನಡುವೆ ಕೇಂದ್ರ ಸರ್ಕಾರದ ವಿರುದ್ದ ಜನಸಾಮಾನ್ಯರು ಅಮರ ಜವಾನ್ ಜ್ಯೋತಿಯ ಮುಂದೆ ಬೆಳಗುತ್ತಿದೆ ಬೆಳಕನ್ನು ಆರಿಸಿ ಹಾಕಲಿದೆ ಎಂಬ ಸುಳ್ಳು ವದಂತಿಗಳನ್ನು ನಂಬಿ ಗಾಬರಿಯಾಗಿದ್ದರು. ಈ ಕುರಿತು ಸ್ಪಷನೆ ನೀಡಿದ ಕೇಂದ್ರ ಸರ್ಕಾರ, ನಾವು ಜ್ಯೋತಿಯನ್ನು ಆರಿಸುತ್ತಿಲ್ಲ. ಇದನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನ(Merge) ಮಾಡುತ್ತಿದ್ದೇವೆ. ಇನ್ನು ಮುಂದೆ ಅಮರರಾದ ಸೈನಿಕರ ಜ್ಯೋತಿ ಯುದ್ಧ ಸ್ಮಾರಕದಲ್ಲಿ ಬೆಳಗಲಿದೆ ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ನೀಡಿದ್ದು, ಒಂದೇ ಸಮಯದಲ್ಲಿ ಎರಡು ಜ್ವಾಲೆಗಳನ್ನು ನಿರಂತರವಾಗಿ ಉರಿಸುವುದು ಬಹಳ ಕಷ್ಟಕರವಾಗುತ್ತಿತ್ತು. ಆ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿಗಳು ತಿಳಿಸಿವೆ.
ಸೇನಾ ಸಂಬಂಧಿತ ಕಾರ್ಯಕ್ರಮಗಳ ವೇಳೆ ಗಣ್ಯಾತಿ ಗಣ್ಯರು ಯುದ್ಧಸ್ಮಾರಕಕ್ಕೆ ಭೇಟಿ ನೀಡದೆ ಹಿಂದಿರುಗುವುದಿಲ್ಲ. ಅದರೊಂದಿಗೆ 1947-48ರ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯವರೆಗೆ ವಿವಿಧ ಕಾರ್ಯಾಚರಣೆಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಕ್ಷಣಾ ಸಿಬ್ಬಂದಿಯ ಹೆಸರು, ಭಯೋತ್ಪಾದಕ ವಿರುದ್ದ ಕಾರ್ಯಚರಣೆಯಲ್ಲಿ ಹುತಾತ್ಮರಾದ ಸೈನಿಕರ ಹೆಸರನ್ನೂ ಯುದ್ಧ ಸ್ಮಾರಕದಲ್ಲಿ ಕೆತ್ತಿದ್ದು, ಅದನ್ನು ಇಲ್ಲಿ ಪ್ರದರ್ಶಿಸಲಾಗಿದೆ.