• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಬೆಂಗಳೂರಿಗೆ ಅಮಿತ್ ಷಾ ಭೇಟಿ, ಮಂತ್ರಿಗಳ ಪರೀಕ್ಷೆಗೆ ಸಿದ್ದರಾದ ಬಿಜೆಪಿ ಚಾಣಕ್ಯ

Preetham Kumar P by Preetham Kumar P
in Vijaya Time
ಬೆಂಗಳೂರಿಗೆ ಅಮಿತ್ ಷಾ ಭೇಟಿ, ಮಂತ್ರಿಗಳ ಪರೀಕ್ಷೆಗೆ ಸಿದ್ದರಾದ ಬಿಜೆಪಿ ಚಾಣಕ್ಯ
0
SHARES
0
VIEWS
Share on FacebookShare on Twitter

ಬೆಂಗಳೂರು ಡಿ 29 : ಕೇಂದ್ರ ಗೃಹ ಸಚಿವ ಬಿಜೆಪಿ ವರಿಷ್ಠ  ಅಮಿತ್ ಷಾ ಸರ್ಕಾರಿ ಕಾರ್ಯಕ್ರಮದ ಹಿನ್ನಲೆಯಲ್ಲಿ 2 ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ  16 ತಿಂಗಳ ನಂತರ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸುವ  ನಿಟ್ಟಿನಲ್ಲಿ ಬಿಜೆಪಿ ವರಿ‍ಷ್ಠ ಅಮಿತ್ ಷಾ ಸಚಿವರ  ಕಾರ್ಯದಕ್ಷತೆಯ ಪರಿಶೀಲನೆಗೆ ತಾವೇ  ಮುಂದಾಗಿರುವುದು ಬಿಜೆಪಿಯಲ್ಲಿ ವಲಯದಲ್ಲಿ ತಳಮಳ ಸೃಷ್ಟಿಸಿದೆ.  ಇವರು ಆಗಮಿಸಿದ ವೇಳೆಯಲ್ಲಿ ಸರ್ಕಾರ ನಡೆಸುವ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿದೆ.  ಈಗಾಗಲೇ ಅಮಿತ್ ಶಾ ಅವರಿಗೆ ಸರ್ಕಾರದ ಬಗ್ಗೆ ಇಂಚಿಂಚು ಮಾಹಿತಿಯನ್ನು ಎರಡು ಖಾಸಗಿ ಸಂಸ್ಥೆಗಳು ವಾರಕ್ಕೊಮ್ಮೆ ನೀಡುತ್ತಿದ್ದು, ಅಮಿತ್ ಷಾ ಅವರಿಗೆ ಪ್ರತಿಯೊಬ್ಬ ಸಚಿವರ ಕಾರ್ಯವೈಖರಿ ಬಗ್ಗೆ ಸ್ಪಷ್ಟವಾಗಿ ತಿಳಿದಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತವನ್ನು ಪಡೆದು ಅಧಿಕಾರಕ್ಕೆ ಬರಬೇಕು ಎಂಬುದು ಕೂಡ ಅಮಿತ್ ಷಾ ಗುರಿಯಾಗಿದೆ.

ಈ ಹಿನ್ನಲೆಯಲ್ಲಿ  ಸರಕಾರ ನಡೆಸುವ ಕಾರ್ಯವೈಖರಿಯೂ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತ ಇರುವ ಮಾಹಿತಿಯ ಪ್ರಕಾರ ಸರ್ಕಾರವು ಇನ್ನಷ್ಟು ಬುದ್ಧಿವಂತಿಕೆಯಿಂದ  ಚುರುಕಿನಿಂದ ಕೆಲಸ ನಿರ್ವಹಿಸಬೇಕಾಗಿದೆ.  ಕೆಲವು ಸಚಿವರಂತೂ ಜನಗಳ ನೋವಿಗೆ ಸ್ಪಂದಿಸುವುದುರಲ್ಲಿ ಹಿಂದೆಯೇ ಉಳಿದಿದ್ದಾರೆ ಕೆಲವು ಸಚಿವರ ಮೇಲೆ ಹಲವು ಆರೋಪಗಳಿದ್ದು, ಆದ್ದರಿಂದ ಅಮಿತ್ ಷಾ ಅವರು ಸರ್ಕಾರದ ಕಾರ್ಯವೈಖರಿಗೆ  ಚುರುಕು ಮುಟ್ಟಿಸುವ  ಕೆಲಸವನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಅಮಿತ್ ಷಾ ತಾವು ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ನಮ್ಮ ಮುಂದಿನ ಚುನಾವಣೆಯು ಬೊಮ್ಮಾಯಿ ಅವರ ನಾಯಕತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದರು. ಆದರೆ ಅವರ ಆ ಹೇಳಿಕೆಗೆ ಸಾಕಷ್ಟು ವಿರೋಧ ಉಂಟಾಗಿತ್ತು ಆದ್ದರಿಂದಲೇ ಅದನ್ನು ಪುನಃ ಸ್ಪಷ್ಟಪಡಿಸುವ ಕಾರ್ಯವನ್ನು ಅಮಿತ್ ಷಾ ರವರು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಸರ್ಕಾರ ತರುವ ಯೋಜನೆ ಮತ್ತು ಕೆಲಸಗಳು ಜನಸಾಮಾನ್ಯರ ಕಣ್ಣಿಗೆ ಕಾಣದಿದ್ದರೆ ನಮ್ಮ ಪಕ್ಷಕ್ಕೆ ಯಾವುದೇ ರೀತಿಯ ಅನುಕೂಲವಿರುವುದಿಲ್ಲ ಇದನ್ನು ಜನಸಾಮಾನ್ಯರಿಗೆ ಹೇಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ವಿವಿಧ  ಮೂಲಗಳಿಂದ ತಿಳಿದುಬಂದಿದೆ.  ಈ ಸರ್ಕಾರದ ಸಚಿವರು ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ವಿಧಾನಸೌಧಕ್ಕು  ಬರುತಿಲ್ಲ ಜೊತೆಗೆ  ವಾರದ ಪ್ರತಿ ಗುರುವಾರ ಸಚಿವರು ವಿಧಾನ ಸೌಧದಲ್ಲಿರಬೇಕು ಎಂಬ ನಿಯಮವಿದೆ ಆದರೆ ಅದನ್ನು ಯಾರು ಪಾಲಿಸುತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ

ಜೊತೆಗೆ ಸಂಪುಟ ರಚನೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ನಾಯಕತ್ವ ಬದಲಾವಣೆ ಯ ಬಗ್ಗೆಯೂ ಸಾಕಷ್ಟು ಚರ್ಚೆ  ನಡೆದಿದೆ. ಈ ಎಲ್ಲಾ ಗೊಂದಲಗಳಿಗೂ ಅಮಿತ್ ಷಾ ಅವರ ರಾಜ್ಯ  ಭೇಟಿ ಸಂಧರ್ಭದಲ್ಲಿ ಪರಿಹಾರ ಸಿಗಬಹುದೆಂದು ಅಂದಾಜಿಸಲಾಗಿದೆ.

ಅಮಿತ್ ಷಾ ರಾಜ್ಯದಲ್ಲಿ ಕೈಗೊಳ್ಳಬಹುದಾದ ಪ್ರಮುಖ ನಿರ್ಧಾರಗಳು

  • ನಾಯಕತ್ವದ ಗೊಂದಲಗಳಿಗೆ ಸ್ಪಷ್ಟನೆ.
  • ಸರ್ಕಾರವು ಮಾಡುವ  ಅಭಿವೃದ್ದಿ ಪರ ಕೆಲಸವನ್ನು ಜನರಿಗೆ ತಲುಪುವಂತೆ ಯೋಜನೆ ಮಾಡುವುದು
  • ಕಾರ್ಯಕರ್ತರ ಕೈಗೆ ಸಚಿವರು ಸಿಗುವಂತೆ ಯೋಜನೆ ರೂಪಿಸುವುದು
  • ಎಲ್ಲಾ ಸಚಿವರು ಕೂಡ  ತಪ್ಪದೆ ಪಕ್ಷದ ನಿಯಮಗಳನ್ನು ಪಾಲಿಸುವುಂತೆ ಸೂಚಿಸುವುದು
  • ಆರೋಪಗಳಿರುವ ಸಚಿವರ ವಿರುದ್ದ ಕ್ರಮ  ಶಿಸ್ತು ಕ್ರಮ  ಕೈಗೊಳ್ಳುವುದು

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು
Vijaya Time

ಮೋದಿ ಎಂಬ ಹೆಸರಿನ ಅರ್ಥ ಭ್ರಷ್ಟಾಚಾರ ತನ್ನ ಹೇಳಿಕೆ ಸಮರ್ಥಿಸಿಕೊಂಡ ನಟಿ ಖುಷ್ಬು

March 28, 2023
ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.