ಬೆಂಗಳೂರು ಆ 24 : ಖಾತೆ ಹಂಚಿಕೆ ವಿಚಾರದಲ್ಲಿ ಅಸಮಧಾನಗೋಡಿದ್ದ (anand sing-basavaraj bommai-karnataka politics) ಹೊಸಪೇಟೆ ಶಾಸಕ ಆನಂದ್ ಸಿಂಗ್ ಅಸಮಧಾನ ಶಮನಗೊಂಡಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಜೊತೆಗಿನ ಮಾತುಕತೆ ಯಶ್ವಿಯಾಗಿದೆ.
ಸಿಎಂ ಭೇಟಿಗೂ ಮೊದಲು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೊಂದಿಗೂ ಆನಂದ್ ಸಿಂಗ್ ಮಾತುಕತೆ ನಡೆಸಿದ್ದರು, ಈ ಇಬ್ಬರ ಮಾತುಕತೆ ಬಳಿಕ ರಾಜೀನಾಮೆ ನಿರ್ಧಾರದಿಂದ ಆನಂದ್ ಸಿಂಗ್ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ
ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ (anand sing-basavaraj bommai-karnataka politics) ಪ್ರವಾಸೋದ್ಯಮ ಖಾತೆ ಸಿಕ್ಕಿದ್ದಕ್ಕೆ ಅಸಮಧಾನಗೊಂಡಿದ್ದ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆವೊಡ್ಡಿದ್ದರು,
ಅಲ್ಲದೆ ಸಚಿವ ಸ್ಥಾನ ಸ್ವೀಕಾರ ಮಾಡದೆ ಮುನಿಸಿಕೊಂಡಿದ್ದರು, ಆದರೆ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಆನಂದ್ ಸಿಂಗ್ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
https://vijayatimes.com/bjp-targets-siddaramaiah-2/
ಸಿಎಂ ಭರವಸೆ ಮೆರೆಗೆ ಸಚಿವ ಸ್ಥಾನ ಸ್ವೀಕಾರ ಮಾಡಲು ಆನಂದ್ ಸಿಂಗ್ ಮುಂದಾಗಿದ್ದಾರೆ ಎನ್ನಲಾಗಿದೆ.