- ಆರಂಭದಲ್ಲೇ ಒಂದಲ್ಲ ಒಂದು ವಿಘ್ನಗಳನ್ನು (Another tragedy in Rishabh Shetty film) ಎದುರಿಸುತ್ತಲೇ ಬಂದ ಕಾಂತಾರ ಚಾಪ್ಟರ್ 1
- ಈ ಹಿಂದೆ ಶೂಟಿಂಗ್ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡಿರುವ ಆರೋಪ
- ಸಾಲು ಸಾಲು ವಿಘ್ನಗಳ ನಡುವೆ ಸೆಟ್ಟೇರಲಿರುವ ಚಿತ್ರ
Udupi: ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲ ದೇಶದ ಗಮನವನ್ನು ಸೆಳೆದ ಚಿತ್ರ ಕಾಂತಾರ ಚಾಪ್ಟರ್ 1 (Kantara Chapter 1). 2022ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿ, ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಕಾಂತಾರ ಸಿನಿಮಾದ ಪ್ರೀಕ್ವೆಲ್ (Movie prequel) ಇದಾಗಿದ್ದು, ಚಿತ್ರೀಕರಣ ಪೂರ್ಣಗೊಳ್ಳುವ ಹಂತಕ್ಕ ಬಂದಿದೆ.
ಶೂಟಿಂಗ್ ಆರಂಭದಿಂದಲೇ ಒಂದಲ್ಲ ಒಂದು ವಿಘ್ನ ಎದುರಿಸುತ್ತಲೇ (Facing obstacles) ಬಂದಿರುವ ಚಿತ್ರತಂಡಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ʼಕಾಂತಾರ ಚಾಪ್ಟರ್ 1ʼ (‘Kantara Chapter 1’) ಸಿನಿಮಾದಲ್ಲಿ ನಟಿಸುತ್ತಿದ್ದ ಜೂನಿಯರ್ ಕಲಾವಿದರೊಬ್ಬರು ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಕೊಲ್ಲೂರಿನಲ್ಲಿ (Kollur, Byndoor) ಈ ದುರಂತ ಸಂಭವಿಸಿದೆ ಎಂದು ವರದಿಯೊಂದು ತಿಳಿಸಿದೆ.
ಕೆಲವು ದಿನಗಳ ಹಿಂದಷ್ಟೇ ಕುಂದಾಪುರ, ಕೊಲ್ಲೂರು (Kundapur, Kollur) ಆಸುಪಾಸಿನಲ್ಲಿ ಬೃಹತ್ ಸೆಟ್ ಹಾಕಿ ʼಕಾಂತಾರ ಚಾಪ್ಟರ್ 1ʼ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದೆ. ಇಲ್ಲಿ ನಡೆದ ಚಿತ್ರೀಕರಣದಲ್ಲಿ (Filming) ಭಾಗಿಯಾಗಿದ್ದ ಜೂನಿಯರ್ ಕಲಾವಿದರೊಬ್ಬರು ಸೌಪರ್ಣಿಕ ನದಿಗೆ (Sauparnika River) ಈಜಲು ತೆರಳಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಕೇರಳದ ಜೂನಿಯರ್ ಆರ್ಟಿಸ್ಟ್ ಕಪಿಲ್ (Artist Kapil) ಎಂದು ಗುರುತಿಸಲಾಗಿದೆ.ಚಿತ್ರೀಕರಣದ ಬಿಡುವಿನ ವೇಳೆ ಚಿತ್ರತಂಡದ ಹಲವರು ಕೊಲ್ಲೂರಿನ ಸೌಪರ್ಣಿಕಾ ನದಿಗೆ (Kollur to Sauparnika River) ಈಜಲು ತೆರಳಿದ್ದರು. ಈ ತಂಡದಲ್ಲಿ ಮೃತ ಜೂನಿಯರ್ ಆರ್ಟಿಸ್ಟ್ ಕೂಡ ಇದ್ದರು. ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕಾಂತಾರ (Kantara) ಚಿತ್ರತಂಡಕ್ಕೆ ಎದುರಾಗುತ್ತಿರುವ ಸಂಕಷ್ಟ ಇದು ಮೊದಲ ಸಲವೇನಲ್ಲ. ಈ ಹಿಂದೆ ಚಿತ್ರತಂಡದ ಕಲಾವಿದರು ಇದ್ದ ಮಿನಿ ಬಸ್ (Mini bus) ಅಪಘಾತಕ್ಕೀಡಾಗಿತ್ತು. ಕಲಾವಿದರಿದ್ದ ಬಸ್ ಕೊಲ್ಲೂರು ವ್ಯಾಪ್ತಿಯಲ್ಲಿ ನ. 24ರಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದರು (Many were injured) . ಅದಕ್ಕೂ ಮೊದಲು ದೈವ ನರ್ತಕರು ಚಿತ್ರಕ್ಕೆ ವಿರೋಧ (Opposition to the film) ವ್ಯಕ್ತಪಡಿಸಿದ್ದರು.ಇನ್ನು ಸಿನಿಮಾತಂಡ ಈ ವರ್ಷಾರಂಭದಲ್ಲಿ ಹಾಸನದಲ್ಲಿ (Hassan) ಶೂಟಿಂಗ್ ಶುರು ಮಾಡಿತ್ತು.
ಆ ವೇಳೆ ಶೂಟಿಂಗ್ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡಿರುವ ಆರೋಪ ಕೇಳಿ ಬಂದಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ (Sakaleshpur Taluk) ಹೇರೂರು ಗ್ರಾಮದ ಸಮೀಪ ಇರುವ ಗವಿಗುಡ್ಡ ಪ್ರದೇಶದ ಡೀಮ್ಡ್ ಅರಣ್ಯ ಹಾಗೂ ಗೋಮಾಳ ಜಮೀನಿನಲ್ಲಿ (Cattle farm) ಚಿತ್ರೀಕರಣ ನಡೆಸಲು ಕಾಂತಾರ: ಚಾಪ್ಟರ್ 1 ತಂಡ ಅನುಮತಿ ಪಡೆದುಕೊಂಡಿತ್ತು. ಅದರಂತೆ ಇಲ್ಲಿ ಬೀಡು ಬಿಟ್ಟ (camped out) ತಂಡದವರು ಅಕ್ರಮವಾಗಿ ಮರ ಕಡಿದು, ಸ್ಫೋಟಕ ಬಳಸಿ, ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಲ ಸ್ಥಳೀಯರ ಆರೋಪಿಸಿದ್ದರು. ಇದರಿಂದ ಚಿತ್ರೀಕರಣ ಸ್ಥಗಿತಗೊಳ್ಳುವ ಭೀತಿ ಎದುರಾಗಿತ್ತು. ಆದರೆ ತನಿಖೆ ಕೈಗೊಂಡ ಅಧಿಕಾರಿಗಳು (Officers undertaken) ಬಳಿಕ ಕ್ಲೀನ್ಚಿಟ್ ನೀಡಿದ್ದರು.
ಇದನ್ನು ಓದಿ : http://ಕಾಶ್ಮೀರದ ಸೇಬಿಗೆ ಬಳಸುವ ಕೀಟನಾಶಕಗಳಿಂದ ಮೆದುಳು ಕ್ಯಾನ್ಸರ್ ಹೆಚ್ಚಳ
ಸಿನಿಮಾ ಚಿತ್ರೀಕರಣ ವೇಳೆ ನಿಯಮ ಉಲ್ಲಂಘನೆ (Violation of rules) ಆಗಿಲ್ಲ ಎಂದು ಅರಣ್ಯಾಧಿಕಾರಿಗಳು ವರದಿ ನೀಡಿದ್ದರು.ಹೀಗೆ ಒಂದಲ್ಲ ಒಂದು ವಿಘ್ನ (Another tragedy in Rishabh Shetty film) ಎದುರಿಸುತ್ತಲೇ ಬಂದ ಚಿತ್ರತಂಡ (Film crew) ಇದೀಗ ಕೊನೆಯ ಹಂತದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಬಗ್ಗೆ ಚಿತ್ರತಂಡ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.