• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಜಯ ಟೈಮ್ಸ್‌

ಸೇಬು ನೀರಿನಲ್ಲಿ ಮುಳುಗುವುದಿಲ್ಲ, ಬದಲು ತೇಲುತ್ತದೆ ಯಾಕೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ!

Mohan Shetty by Mohan Shetty
in ವಿಜಯ ಟೈಮ್ಸ್‌
apple
0
SHARES
0
VIEWS
Share on FacebookShare on Twitter

ಬೇಸಿಗೆ(Summer) ಕಾಲದಲ್ಲಿ ಎಲ್ಲಾ ಕಡೆ ಕಂಡುಬರುವ ಸೇಬುಹಣ್ಣು(Apple Fruit) ಆರೋಗ್ಯಕ್ಕೆ ಬಲು ಪ್ರಯೋಜನಕಾರಿ. ಮುಖ್ಯವಾಗಿ ಹೃದಯಕ್ಕೆ(Heart) ಸಂಬಂಧಪಟ್ಟ ಖಾಯಿಲೆಗಳು ಬರಬಾರದು ಎನ್ನುವ ಕಾರಣಕ್ಕೆ ಪ್ರತಿಯೊಬ್ಬರೂ ದಿನ ಒಂದೊಂದು ಸೇಬು ಹಣ್ಣು ತಿನ್ನೋದು ಮುಖ್ಯ. ಆದರೆ ನಿಸರ್ಗ ನಮಗೆ ವರವಾಗಿ ನೀಡಿರುವ ಸೇಬು ಹಣ್ಣನ್ನು ನಾವು ಮಾನವರು ಏನು ಮಾಡ್ತೀವಿ ಅಂದ್ರೆ, ಯಾವುದೇ ಕೀಟಗಳು ಹಾವಳಿ ಮಾಡಬಾರದು ಎನ್ನುವ ಕಾರಣಕ್ಕೆ ಸಿಪ್ಪೆಯ ಮೇಲ್ಬಾಗಕ್ಕೆ ಮೇಣದ ಲೇಪನ ಮಾಡಿರುತ್ತಾರೆ.

facts

ಹಾಗಾಗಿ ಇದು ಆರೋಗ್ಯಕ್ಕೆ ಕೆಟ್ಟದ್ದು ಎಂಬ ಕಾರಣದಿಂದ ಸೇಬಿನ ಹಣ್ಣಿನ ಸಿಪ್ಪೆಯನ್ನು ತೆಗೆದು ಹಾಕಿ ಕೇವಲ ಒಳಗಿನ ತಿರುಳನ್ನು ತಿನ್ನುತ್ತೇವೆ. ಆದರೆ ಸರಿಯಾಗಿ ಸ್ವಚ್ಛ ಮಾಡಿಕೊಂಡು ಸಿಪ್ಪೆಸಹಿತ ಸೇಬುಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳು ಎರಡು ಪಟ್ಟು ಆಗುತ್ತವೆ. ಸೇಬು ಹಣ್ಣಿನ ಸಿಪ್ಪೆಯಲ್ಲಿ ಮಹತ್ತರ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ, ಕ್ಯಾನ್ಸರ್ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ : https://vijayatimes.com/covidspike-in-newdelhi/


ಜರ್ನಲ್ ನ್ಯೂಟ್ರಿಷನ್ ಮತ್ತು ಕ್ಯಾನ್ಸರ್ ಎಂಬ ಒಂದು ಅಧ್ಯಯನ ವರದಿ ಹೇಳುವಂತೆ ಸೇಬು ಹಣ್ಣಿನ ಸಿಪ್ಪೆಯಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ ಅಂಶಗಳು ಗೆಡ್ಡೆಯ ಬೆಳವಣಿಗೆಯನ್ನ ನಿಯಂತ್ರಣ ಮಾಡಿ ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ಮತ್ತು ಪುರುಷರಲ್ಲಿ ಕಂಡುಬರುವ ಪ್ರೋಸ್ಟೇಟ್ ಕ್ಯಾನ್ಸರ್ ಸಮಸ್ಯೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸೇಬು ಹಣ್ಣಿನ ಸಿಪ್ಪೆ ಯಲ್ಲಿ ಮಾಸ್ಪಿನ(Maspin) ಎಂಬ ಪ್ರೋಟಿನ್ ಅಂಶ ಅಧಿಕವಾಗಿದ್ದು, ಕ್ಯಾನ್ಸರ್ ಸಮಸ್ಯೆ ದೇಹದಲ್ಲಿ ಹರಡುವ ಪ್ರಕ್ರಿಯೆಗೆ ಇದು ಕಡಿವಾಣ ಹಾಕುತ್ತದೆ.
ಇಂತಹ ಔಷದೀಯ ಗುಣವುಳ್ಳ ಸೇಬು ನೀರಿನಲ್ಲಿ ಮುಳುಗುವುದಿಲ್ಲ. ಇದು ನೀರಿನಲ್ಲಿ ತೇಲಲು ಕಾರಣ ಗೊತ್ತೇ?

apple


ಆರ್ಕಿಮಿಡಿಸ್‌ನ ತತ್ವದ ಪ್ರಕಾರ, ಒಂದು ದ್ರವದಲ್ಲಿ ಮುಳುಗಿರುವ ದೇಹದ ಮೇಲೆ ಉಂಟಾಗುವ ಮೇಲ್ಮುಖವಾದ ತೇಲುವ ಬಲವು ಪೂರ್ಣವಾಗಿ ಅಥವಾ ಭಾಗಶಃ ಮುಳುಗಿದ್ದರೂ, ದೇಹವು ದ್ರವ್ಯರಾಶಿಯ ಕೇಂದ್ರದಲ್ಲಿ ಮೇಲ್ಮುಖವಾಗಿ ಚಲಿಸುವ ದ್ರವದ ತೂಕಕ್ಕೆ ಸಮಾನವಾಗಿರುತ್ತದೆ. ಸ್ಥಳಾಂತರಿಸಿದ ದ್ರವ ಅಂದರೆ ಸೇಬನ್ನು ಸ್ಥಳಾಂತರಿಸಿದ ನೀರಿನ ತೂಕಕ್ಕೆ ಸಮನಾದ ಬಲದಿಂದ ಸೇಬು ತೇಲುತ್ತದೆ. ಈಗ ಆಪಲ್ ಸ್ಥಳಾಂತರಗೊಂಡ ನೀರಿನ ಮೇಲ್ಮುಖ ಬಲಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದರೆ, ಸೇಬು ಮುಳುಗುತ್ತದೆ.

apple floats

ಮತ್ತು ಸ್ಥಳಾಂತರಗೊಂಡ ನೀರಿನಿಂದ ಮೇಲ್ಮುಖವಾಗಿ ತಳ್ಳುವ ತೇಲುವ ಶಕ್ತಿಗಿಂತ ಸೇಬು ಕಡಿಮೆ ತೂಕವನ್ನು ಹೊಂದಿದ್ದರೆ, ಸೇಬು ತೇಲುತ್ತದೆ. ಮತ್ತು ಸೇಬು ಯಾವಾಗಲೂ ಸ್ಥಳಾಂತರಗೊಂಡ ನೀರಿನ ತೂಕಕ್ಕಿಂತ ಹಗುರವಾಗಿರುತ್ತದೆ, ಆದ್ದರಿಂದ ಸೇಬು ಯಾವಾಗಲೂ ತೇಲುತ್ತದೆ. ಸೇಬಿನ ಪ್ರಮಾಣದ 25% ಗಾಳಿಯಾಗಿರುತ್ತದೆ. ಯಾವುದೇ ವಸ್ತುವಿನ ದ್ರವ್ಯರಾಶಿ ನೀರಿಗಿಂತ ಹೆಚ್ಚಿದ್ದರೆ ಅದು ಮುಳುಗುತ್ತದೆ. ಆದರೆ ಸೇಬಿನ ಪ್ರಮಾಣದ 25% ಕೇವಲ ಗಾಳಿಯಾಗಿರುವ ಕಾರಣ ಸೇಬು ನೀರಿನಲ್ಲಿ ತೇಲುತ್ತದೆ, ಹೀಗಾಗಿ ಅದು ಮುಳುಗುವುದಿಲ್ಲ.

  • ಪವಿತ್ರ ಸಚಿನ್
Tags: factsinformativespecialcontentVijaytimes

Related News

ದಂತ ಮಂಡಳಿ ಚುನಾವಣೆಯಲ್ಲಿ ಅಕ್ರಮ: ಮತ ಎಣಿಕೆಗೆ ಹೈಕೋರ್ಟ್ ತಡೆ
Vijaya Time

5 ಹಾಗೂ 8ನೇ ತರಗತಿ ಬೋರ್ಡ್‌ ಪರೀಕ್ಷೆ: ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

March 11, 2023
Japan
ವಿಜಯ ಟೈಮ್ಸ್‌

ಜಪಾನಿನ ಈ ಪ್ರಸಿದ್ಧ ಚಿತ್ರದ ಬಗ್ಗೆ ನಿಮಗೆ ಗೊತ್ತಿದೆಯೇ? ಇಲ್ಲಿದೆ ಮಾಹಿತಿ!

May 23, 2022
ramayana
ವಿಜಯ ಟೈಮ್ಸ್‌

ರಾಮಾಯಣ ನಿಜವಾಗಲೂ ಸಂಭವಿಸಿದೆ ಎಂದೇಳಲು ದೊರೆತ ಸಾಕ್ಷಿಗಳು ಇವೇ ನೋಡಿ!

May 18, 2022
Su Naing
ವಿಜಯ ಟೈಮ್ಸ್‌

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಜಗತ್ತಿನ ಅತ್ಯಂತ ಸಣ್ಣ ಸೊಂಟ ಹೊಂದಿರುವ ಮಹಿಳೆ!

May 11, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.