ರಾಮಯಾಣ ಧಾರಾವಾಹಿ ಮೂಲಕ ಭಗವಾನ್ ರಾಮನ ಅವತಾರವನ್ನು ದೇಶದ ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಅರುಣ್ ಗೋವಿಲ್ ನಿನ್ನೆ ಬಿಜೆಪಿ ಸೇರಿದ್ದಾರೆ. 80ರ ದಶಕದಲ್ಲಿ ಮನೆ ಮಾತಾಗಿದ್ದ ರಾಮಾಯಣ ಧಾರಾವಾಹಿ ಕಳೆದ ವರ್ಷ ಕೋವಿಡ್ ಲಾಕ್ಡೌನ್ ಅವಧಿಯಲ್ಲಿ ಮರು ಪ್ರಸಾರಗೊಂಡು ದೇಶದ ಜನರ ಮನಸೊರೆಗೊಂಡಿತ್ತು. ಅಷ್ಟೇ ಅಲ್ಲದೇ ಹಿಂದಿನ ದಾಖಲೆಗಳನ್ನು ಮುರಿದು ಈ ಧಾರಾವಾಹಿ ಅತಿ ಹೆಚ್ಚು ಜನರನ್ನು ತಲುಪಿತು. ಈ ಮೂಲಕ ಮತ್ತೆ ದೇಶವಾಸಿಗಳಿಗೆ ರಾಮನ ಪಾತ್ರಧಾರಿ ಮತ್ತಷ್ಟು ಆಪ್ತವಾಗಿತ್ತು. ಗೋವಿಲ್ ಬಿಜೆಪಿ ಸೇರ್ಪಡನೆಯಿಂದ ಮತ್ತಷ್ಟು ಜನರಿಗೆ ಪಕ್ಷ ಸೇರಲು ಉತ್ತೇಜನ ಸಿಗಲಿದೆ.
ಬಿಜೆಪಿ ನಾಯಕರಾದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ಪ್ರತಿ ಭಾಷಣವನ್ನು ಜೈ ಶ್ರೀರಾಮ್ ಘೋಷಣೆ ಮೂಲಕ ಆರಂಭಿಸುತ್ತಾರೆ. ರಾಮಾಯಣದಲ್ಲಿ ಉಲ್ಲೇಖಿತವಾಗಿರುವ ಈ ಘೋಷಣೆ ಧಾರ್ಮಿಕತೆಗಿನ್ನ ಹೆಚ್ಚಾಗಿ ರಾಜಕೀಯವಾಗಿ ಬಳಕೆಯಾಗುತ್ತಿದೆ.
ರಾಜಕೀಯವಾಗಿ ಶಕ್ತಿಹೊಂದಿರುವ ಈ ಜೈ ಶ್ರೀರಾಮ್ ಘೋಷಣೆ ಯಾವಾಗ ರಾಜಕೀಯ ಪ್ರವೇಶಿಸಿತು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, 1990-92ರ ವೇಳೆ ರಾಮ ಮಂದಿರ ನಿರ್ಮಾಣದ ವೇಳೆ ಆರ್ಎಸ್ಎಸ್ ಮತ್ತು ವಿಎಸ್ಪಿ ಬಳಕೆ ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.