ಬೆಂಗಳೂರು, ಆ. 09: ರಾಜ್ಯ ರಾಜಧಾನಿಯಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಜೊತೆಗೆ ಡೆಲ್ಟಾ ವೈರೆಸ್ ಸೋಂಕು ಕೂಡ ಹೆಚ್ಚುತಿದ್ದು, ಇದೇ ರೀತಿ ಮುಂದುವರೆದಲ್ಲಿ ಬೆಂಗಳೂರು ಲಾಕ್ ಆಗುವುದು ಬಹುತೇಕ ಖಚಿತವಾಗಿದೆ.
ಬೆಂಗಳೂರಿನಲ್ಲಿ ಇಗಾಗಲೇ ನೈಟ್ ಕರ್ಫ್ಯೂ ಕೂಡ ಜಾರಿಯಲ್ಲಿದೆ ಆದರೂ ಕೂಡ ದಿನದಿಂದ ದಿನಕ್ಕೆ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಹೀಗೆ ಸೋಂಕಿನ ಪ್ರಮಾಣ ಹೆಚ್ಚಾದಲ್ಲಿ ಅನಿವಾರ್ಯವಾಗಿ ಲಾಕ್ ಡೌನ್ ಅಥವಾ ಕಠಿಣ ರೂಲ್ಸ್ ಜಾರಿಯಾಗುವ ಲಕ್ಷಣಗಳಿವೆ.
ಟಫ್ ರೂಲ್ಸ್ ಅಥವಾ ಲಾಕ್ ಡೌನ್ ಜಾರಿಯಾದಲ್ಲಿ ಮದುವೆ ಮತ್ತು ಸಮಾರಂಭಗಳಿಗೆ 50 ಜನರಿಗೆ ಅವಕಾಶ, ಬಸ್ ಗಳಲ್ಲಿ ಓಡಾಟಕ್ಕೆ ಶೇ50% ರಷ್ಟು ಅವಕಾಶ ಹಾಗೂ ಫ್ಯಾಕ್ಷರಿಗಳಲ್ಲಿ 50% ರಷ್ಟು ಕೆಲಸಗಾರರಿಗೆ ಅವಕಾಶ ನೀಡುವಂತಹ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆಗಳಿವೆ.
ಇವತ್ತೇ ಅಂತಿಮ ನಿರ್ಧಾರ ಪ್ರಕಟ ?
ರಾಜಧಾನಿಯಲ್ಲಿ ಕಳೆದ ಜುಲೈನಲ್ಲಿ ಕೊರೊನ ಸಂಖ್ಯೆ ಕೊಂಚ ಕಡಿಮೆಯಿದ್ದು, ಆಗಸ್ಟ್ ನ ಮೊದಲ ವಾರದಿಂದಲೇ ಪುನಃ ಏರುಗತಿಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು ಈ ಸಂಬಂಧ ಇಂದು ಮಧ್ಯಾಹ್ನ 12 ಗಂಟೆಗೆ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಆರ್ ಅಶೋಕ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಅದರಲ್ಲೂಕೂಡ ಮುಖ್ಯವಾಗಿ ರಾಜ್ಯದ್ಯಾಂತ ಈ ತಿಂಗಳಿನಿಂದ ಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದಿನ ಸಭೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.