ಶಂಕರಾಚಾರ್ಯರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಅದ್ವೈತ ಸಿದ್ಧಾಂತವನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹರಡಿರುವ ಮಹಾಪುರುಷನಾಗಿ ನೆನಪಿಸಲಾಗುತ್ತದೆ. ಅಂಥ ವ್ಯಕ್ತಿಯ ಕುರಿತಾದ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗುತ್ತಿದೆ.
ಆಚಾರ್ಯ ಶಂಕರ' ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಕನ್ನಡದ ಜೊತೆಯಲ್ಲಿಯೇ ಸಂಸ್ಕೃತ ಭಾಷೆಯಲ್ಲಿಯೂ ತೆರೆಗೆ ತರಲಾಗುತ್ತಿರುವುದು ವಿಶೇಷ. ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ವೈ ಎನ್ ಶರ್ಮ ಮತ್ತು ವಿಜಯಲಕ್ಷ್ಮಿಯವರು ಯಮ್ಮನೂರು ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಿಸಿದ್ದಾರೆ. ಆಚಾರ್ಯ ಶ್ರೀ ಶಂಕರ ಚಿತ್ರವು ಕೇಂದ್ರ ಸೆನ್ಸಾರ್ ಮಂಡಳಿಯಿಂದ ಈಗಾಗಲೇ ಮೆಚ್ಚುಗೆಗೊಳಗಾಗಿದ್ದು, ಅವರು ಚಿತ್ರಕ್ಕೆ
ಯು’ ಸರ್ಟಿಫಿಕೇಟ್ ನೀಡಿದ್ದಾರೆ. ಅಷ್ಟಾವಕ್ರ',
ಭಗವದ್ ಶ್ರೀರಾಮಾನುಜಾಚಾರ್ಯ’ ಸೇರಿದಂತೆ ರಿಯಲ್ ಸ್ಟಾರ್ ಉಪೇಂದ್ರ ಅವರ ನಟನೆಯ ಶ್ರೀಮತಿ' ಚಿತ್ರಗಳನ್ನು ನಿರ್ದೇಶಿಸಿದ್ದ ರಾಜಾ ರವಿಶಂಕರ್ ಅವರು
ಆಚಾರ್ಯ ಶ್ರೀ ಶಂಕರ’ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಶಂಕರಾಚಾರ್ಯರ ಪಾತ್ರದಲ್ಲಿ ರವೀಂದ್ರ ಭಾಗವತ್ ನಟಿಸಿದ್ದು ಉಳಿದಂತೆ ರಾಮಕೃಷ್ಣ, ಪ್ರಥಮಾ ಪ್ರಸಾದ್, ವಿನಯ ಪ್ರಸಾದ್, ಸಾಯಿ ಪ್ರಕಾಶ್, ಭರತ್ ಕಲ್ಯಾಣ್, ಮೂಗು ಸುರೇಶ್, ಮೈಕೋ ಮಂಜು, ತೇಜಸ್ವಿನಿ, ಸುರೇಖಾ, ಮಾಸ್ಟರ್ ಲಿಖಿತ್ ಶರ್ಮ, ಮಾಸ್ಟರ್ ರೋಹಿತ್ ಶರ್ಮ ಮೊದಲಾದವರ ತಾರಾಬಳಗವಿದೆ.
ಚಿತ್ರದ ತಾಂತ್ರಿಕ ವಿಭಾಗದಲ್ಲಿ ಛಾಯಾಗ್ರಾಹಕರಾಗಿ ಸಿ.ನಾರಾಯಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಆರ್ ದೊರೈ ರಾಜ್ ಸಂಕಲನ, ನೊಣವಿನಕೆರೆ ಕುಮಾರ್ ಪ್ರಸಾದನ, ಕೆ. ಚಂದ್ರಾಚಾರಿ ವಸ್ತ್ರಾಲಂಕಾರ, ಕುಮಾರ್ ಕಲಾನಿರ್ದೇಶನ ಮತ್ತು ಸಹ ನಿರ್ದೇಶಕರಾಗಿ ಎಂ.ಜಿ ಜಗದೀಶ್ ಇದ್ದಾರೆ. ಆರೂಢ ಸ್ವಾಮಿಯವರು ಚಿತ್ರದ ಸಂಸ್ಕೃತ ಸಂಭಾಷಣೆಗಳನ್ನು ರಚಿಸುವುದರ ಜೊತೆಗೆ ವ್ಯಾಸ ಮಹರ್ಷಿಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.