ಇವರೆಲ್ಲಾ ನಮ್ಮ ನಗರವನ್ನು ಸ್ವಚ್ಛಗೊಳುಸಿ, ನಮ್ಮ ಆರೋಗ್ಯ ಕಾಪಾಡೋ ಬಿಬಿಎಂಪಿಯ ಹೆಮ್ಮೆಯ ಪೌರಕಾರ್ಮಿಕರು. ಆದ್ರೆ ಪೊರಕೆ ಹಿಡಿದು ಸ್ವಚ್ಛ ಮಾಡೋ ಕೈಗಳು ಪೆನ್ನು ಪುಸ್ತಕ ಹಿಡಿದಿರುವ ದೃಶ್ಯ ಎಲ್ಲಾದರೂ ನೋಡಿದ್ದೀರಾ? ಹಾಗಾದ್ರೆ ಬಿಬಿಎಂಪಿ ಪೌರ ಕಾರ್ಮಿಕರು ಅಕ್ಷರಾಭ್ಯಾಸ ಮಾಡಿರುವ ದೃಶ್ಯ ಸಂಭವಿಸಿದೆ.

ಹೌದು, ಇದು ಬಿಬಿಎಂಪಿ ತನ್ನ ಕಾರ್ಮಿಕರಿಗೆ ಕೈಗೊಂಡಿರುವ ವಿನೂತನ ಯೋಜನೆ. ಪೌರಕಾರ್ಮಿಕರಿಗೆ ಅಕ್ಷರ ಭಾಗ್ಯ ಕೊಟ್ಟು ಅವರಲ್ಲಿ ಜ್ಞಾನ ದೀವಿಗೆ ಬೆಳಗಿಸೋ ಪ್ರಶಂಸನೀಯ ಪ್ರಯತ್ನ ನಡೆದಿದೆ. ಕಡು ಬಡತನದಿಂದ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಿದ್ದ ಪೌರಕಾರ್ಮಿಕರಿಗೆ ಅಕ್ಷರ ಕಲಿಸುವ ದಿಟ್ಟ ಹೆಜ್ಜೆಯನ್ನು ಬಿಬಿಎಂಪಿ ಇಟ್ಟಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಏನೆಲ್ಲಾ ಯೋಜನೆಗಳನ್ನು ಮಾಡಲಾಗಿದೆ ಅನ್ನೋದನ್ನು ಈ ಯೋಜನೆಯ ಮೇಲ್ವಿಚಾರಕರಾದ ಪದ್ಮಶ್ರೀ ವಿವರಿಸಿದ್ದಾರೆ ಮುಂದೆ ಓದಿ.
ಈ ಲಿಂಕ್ ಕ್ಲಿಕ್ ಮಾಡಿ : https://fb.watch/cgTKCVCO6-/
ವಯಸ್ಕರ ಶಿಕ್ಷಣ ಕಾರ್ಯಕ್ರಮದ ಅಡಿ ಸರ್ಕಾರದ ಈ ಹೊಸ ಪ್ರಯತ್ನವನ್ನ ಮಾಡ್ತಿದೆ. ಇದರಿಂದಾಗಿ ಕನಿಷ್ಠ ಅಕ್ಷರ ಜ್ಞಾನ ಇಲ್ಲದ ಪೌರಕಾರ್ಮಿಕರಿಗೆ ಅಕ್ಷರ ಜ್ಞಾನ ಪಡೆಯೋ ಸೌಭಾಗ್ಯ ಸಿಕ್ಕಂತಾಗುತ್ತೆ. ಇದರಿಂದ ತಮಗೆ ಬಹಳ ಅನುಕೂಲ ಆಗುತ್ತೆ ಅಂತಾರೆ ಪೌರ ಕಾರ್ಮಿಕರು. ಈ ರೀತಿಯ ಹೊಸ ವಿನೂತನ, ವಿಭಿನ್ನ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಪೌರ ಕಾರ್ಮಿಕರಿಗೂ ಪ್ರೋತ್ಸಾಹ, ಉತ್ತೇಜನ ನೀಡಿದಂತೆಯೇ ಸರಿ.
- ಪದ್ಮಶ್ರೀ