ಐಪಿಎಲ್ಗೆ ಬಿಸಿಸಿಐ (BCCI new strict rules) ಕಠಿಣ ಎಚ್ಚರಿಕೆ
ಆಟಗಾರರು ಮತ್ತು ಫ್ರಾಂಚೈಸಿಗಳ ಅಶಿಸ್ತಿಗೆ ಹೊಸ ನಿಯಮಗಳ ಮೂಲಕ ಕಡಿವಾಣ
ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಅಮಾನತು ಕ್ರಮ
ಐಪಿಎಲ್ 2026 ಟೂರ್ನಿಯ ವೇಳೆ ಆಟಗಾರರು ಮತ್ತು ಫ್ರಾಂಚೈಸಿಗಳ (Franchises) ವರ್ತನೆ ಕುರಿತಾಗಿ ಹಲವು (BCCI new strict rules) ವಿವಾದಗಳು ಎದುರಾಗುತ್ತಿದ್ದಂತೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಟೂರ್ನಿಯ ಭದ್ರತೆ, ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ಇನ್ನು ಮುಂದೆ ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ.

ಸುರಕ್ಷಿತ ವಲಯಗಳಿಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ, ಡ್ರೆಸ್ಸಿಂಗ್ (Dressing) ರೂಮ್ಗಳಲ್ಲಿ ಅಶಿಸ್ತಿನ ಘಟನೆಗಳು (BCCI new strict rules) ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಹಸ್ತಕ್ಷೇಪ ಮಂಡಳಿಯ ಕಳವಳಕ್ಕೆ ಕಾರಣವಾಗಿದೆ.
ಈ ಬಾರಿಯ ಐಪಿಎಲ್ನಲ್ಲಿ ಕೆಲವು ಆಟಗಾರರು ಹಾಗೂ ಫ್ರಾಂಚೈಸಿಗಳ ನಡೆ ಮಂಡಳಿಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ. ಆಟಗಾರರ ಹೋಟೆಲ್ ಕೊಠಡಿಗಳು,
ತಂಡದ ಬಸ್ಗಳು ಮತ್ತು ಡಗೌಟ್ಗಳಂತಹ ಸುರಕ್ಷಿತ ಪ್ರದೇಶಗಳಿಗೆ ಅಪರಿಚಿತರು ಸುಲಭವಾಗಿ ಪ್ರವೇಶಿಸುತ್ತಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ.
ಸಾಮಾಜಿಕ ಜಾಲತಾಣ ಇನ್ಫ್ಲುವೆನ್ಸರ್ಗಳು (Influencer) ಮತ್ತು ಕಂಟೆಂಟ್ ಕ್ರಿಯೇಟರ್ಗಳು (Content Creator) ಆಟಗಾರರ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ರೀಲ್ಸ್ ಮಾಡುತ್ತಿರುವುದು ಭದ್ರತಾ ಆತಂಕಕ್ಕೆ ಕಾರಣವಾಗಿದೆ.
ಇದರಿಂದ ಭ್ರಷ್ಟಾಚಾರ ವಿರೋಧಿ ದಳ (ACU) ಕೂಡ ಎಚ್ಚರಿಕೆ ನೀಡಿದ್ದು, ಆಟಗಾರರ ಸುರಕ್ಷತೆ ಮತ್ತು ಲೀಗ್ನ ವಿಶ್ವಾಸಾರ್ಹತೆಯನ್ನು ಕಾಪಾಡಲು ಮಂಡಳಿ ಕಠಿಣ ನಿಯಮ ಜಾರಿಗೆ ನಿರ್ಧರಿಸಿದೆ.
ಹೊಸ ನಿಯಮಗಳ ಪ್ರಕಾರ, ಟೀಮ್ ಮ್ಯಾನೇಜರ್ ಅನುಮತಿಯಿಲ್ಲದೆ ಯಾರೂ ಆಟಗಾರರ ಕೊಠಡಿಗಳಿಗೆ ಪ್ರವೇಶಿಸಲು ಅವಕಾಶ ಇರುವುದಿಲ್ಲ.
ಸ್ನೇಹಿತರು, ಕುಟುಂಬ ಸದಸ್ಯರು ಅಥವಾ ಅತಿಥಿಗಳನ್ನು ಹೋಟೆಲ್ನ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಭೇಟಿಯಾಗಬೇಕು. ಪಂದ್ಯ ನಡೆಯುವ ವೇಳೆ ಫ್ರಾಂಚೈಸಿ ಮಾಲೀಕರು ಡಗೌಟ್ ಅಥವಾ ಡ್ರೆಸ್ಸಿಂಗ್ ರೂಮ್ ಪ್ರವೇಶಿಸುವುದಕ್ಕೂ ನಿರ್ಬಂಧ ಹೇರಲಾಗಿದೆ.
ಜೊತೆಗೆ ಮೈದಾನದಲ್ಲಿರುವ ಪ್ರತಿಯೊಬ್ಬರೂ ಮಾನ್ಯತೆ ಪಡೆದ ಗುರುತಿನ ಚೀಟಿ ಧರಿಸುವುದು ಕಡ್ಡಾಯವಾಗಿದೆ. ಸಾಮಾಜಿಕ ಜಾಲತಾಣಗಳಿಗಾಗಿ ವಿಡಿಯೋ
ಚಿತ್ರೀಕರಣಕ್ಕೂ ಕಡಿವಾಣ ಹಾಕಲಾಗಿದ್ದು, ತರಬೇತಿ ಅವಧಿ ಅಥವಾ ಆಟಗಾರರ ಖಾಸಗಿ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಇನ್ನು ಮುಂದೆ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಬಿಸಿಸಿಐ ಮೃದು ಧೋರಣೆ ತಾಳುವುದಿಲ್ಲ ಎಂದು ಮಂಡಳಿ ಎಚ್ಚರಿಕೆ ನೀಡಿದೆ.
ಎಸ್ಒಪಿ ನಿಯಮಗಳನ್ನು ಉಲ್ಲಂಘಿಸಿದರೆ ಫ್ರಾಂಚೈಸಿಗಳಿಗೆ ನೋಟಿಸ್ (Notice) ನೀಡಲಾಗುವುದು. ಭದ್ರತಾ ನಿಯಮಗಳನ್ನು ಮೀರುವವರ ಮೇಲೆ ಭಾರೀ ದಂಡ
ವಿಧಿಸುವುದರ ಜೊತೆಗೆ, ಗಂಭೀರ ಪ್ರಕರಣಗಳಲ್ಲಿ ಆಟಗಾರರು ಅಥವಾ ಅಧಿಕಾರಿಗಳನ್ನು ಟೂರ್ನಿಯಿಂದ ಅಮಾನತುಗೊಳಿಸುವ ಕ್ರಮಕ್ಕೂ ಮುಂದಾಗಬಹುದು.
ಒಟ್ಟಾರೆ, ಐಪಿಎಲ್ನಲ್ಲಿ ಆಟದ ಗೌರವ ಮತ್ತು ಶಿಸ್ತನ್ನು ಉಳಿಸಿಕೊಳ್ಳಲು ಬಿಸಿಸಿಐ (BCCI) ಈ ನಿರ್ಧಾರ ಕೈಗೊಂಡಿದ್ದು, ಹಣ ಮತ್ತು ಪ್ರಚಾರಕ್ಕಿಂತ ಕ್ರೀಡೆಯ ನಿಯಮಗಳೇ ಮುಖ್ಯ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ.
ಇದನ್ನು ಓದಿ : https://vijayatimes.com/rahul-gandhi-questions-cbi/