• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ನೀರಿನ ದರ ಏರಿಕೆಗೆ ಜನಸಾಮಾನ್ಯರಿಂದ , ಕೈಗಾರಿಕೆಗಳಿಂದ ಆಕ್ರೋಶ; ಸರಕಾರಕ್ಕೆ ಹಿಡಿಶಾಪ!

Shameena Mulla by Shameena Mulla
in ರಾಜ್ಯ
ನೀರಿನ ದರ ಏರಿಕೆಗೆ ಜನಸಾಮಾನ್ಯರಿಂದ , ಕೈಗಾರಿಕೆಗಳಿಂದ ಆಕ್ರೋಶ; ಸರಕಾರಕ್ಕೆ ಹಿಡಿಶಾಪ!
0
SHARES
31
VIEWS
Share on FacebookShare on Twitter
  • ಜಲಮಂಡಳಿ ಸಮರ್ಥನೆ, ಬಳಕೆದಾರರಿಂದ ಖಂಡನೆ
  • ನೀರಿನ ದರ ಏರಿಕೆಗೆ ಸಾರ್ವಜನಿಕರು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಘಟನೆಗಳಿಂದ ವ್ಯಾಪಕ ವಿರೋಧ
  • ದಿನನಿತ್ಯ ಬಳಕೆಯ ಸರಕು, ಸೇವೆಗಳ ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ನಾಗರಿಕರಿಗೆ ನೀರಿನ ದರ ಪರಿಷ್ಕರಣೆ ಬರೆ

Bengaluru: ನೀರಿನ ದರ ಏರಿಕೆಯು ಜನಸಾಮಾನ್ಯರು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಅಘಾತವನ್ನು ಉಂಟು ಮಾಡಿದ್ದು, ಬೆಂಗಳೂರು (Bengaluru water price hike) ಜಲಮಂಡಳಿಯ ಈ ನಿರ್ಧಾರಕ್ಕೆ ಸಾರ್ವಜನಿಕರು ಮತ್ತು ಕೈಗಾರಿಕೋದ್ಯಮಿಗಳಿಂದ ವಿರೋಧ ವ್ಯಕ್ತವಾಗಿದೆ.

Bengaluru water price hike

ಕೆಲವು ದಿನಗಳಿಂದ ದಿನನಿತ್ಯ ಬಳಕೆಯ ಸರಕು, ಸೇವೆಗಳ ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ನಾಗರಿಕರಿಗೆ ನೀರಿನ ದರ ಪರಿಷ್ಕರಣೆ ಮಾಡುವ ಮೂಲಕ ಬೆಂಗಳೂರು ಜಲಮಂಡಳಿ (Bangalore Water Board) ಮತ್ತೊಂದು ಬರೆ ಎಳೆದಿದೆ. ಬೆಲೆ ಏರಿಕೆಯಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ರಾಜ್ಯ ಸರಕಾರ ಜನಸಾಮಾನ್ಯರ ಜಾಗದಲ್ಲಿ ನಿಂತು ಒಮ್ಮೆ ಯೋಚಿಸಿ, ತೀರ್ಮಾನ ಕೈಗೊಳ್ಳುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ ತಿಂಗಳ ಬಿಲ್‌ನಲ್ಲಿಯೇ ದರ ಏರಿಕೆ ಅನ್ವಯವಾಗಲಿದ್ದು, ಈ ಹಿಂದೆ ಪಾವತಿಸುತ್ತಿದ್ದ ಶುಲ್ಕವು ಏರಿಕೆಯಾದ ಬಳಿಕ ಎಷ್ಟು ಬರಬಹುದು ಎಂಬ ಗೊಂದಲ ಜನಸಾಮಾನ್ಯರಲ್ಲಿ ಉಂಟಾಗಿದ್ದು, ಈ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಜಲಮಂಡಳಿ ಸಮಗ್ರ ಮಾಹಿತಿಯನ್ನೂ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹ ಬಳಕೆದಾರರಿಗೆ 8 ಸಾವಿರ ಲೀ.ವರೆಗೆ ಪ್ರತಿ ಲೀ.ನೀರಿಗೆ 0.15 ಪೈಸೆ ಏರಿಕೆಯಾಗಿದೆ. ಈ ಸ್ಲಾಬ್‌ ಬಳಕೆದಾರರಿಗೆ ತಿಂಗಳಿಗೆ ನೀರಿನ ಶುಲ್ಕ 100 ರೂ. ಬರುತ್ತಿದ್ದರೆ, ದರ ಏರಿಕೆಯಿಂದ 32 ರೂ. ಹೆಚ್ಚಾಗುವ ಮೂಲಕ 132 ರೂ. ಬರಬಹುದು.

8001-25000 ಲೀ. ವರೆಗೆ 0.30 ಪೈಸೆ ಏರಿಕೆಯಾಗಿದ್ದು, ಈ ಸ್ಲಾಬ್‌ ಬಳಕೆದಾರರಿಗೆ 350 ರೂ. ಮಾಸಿಕ ಶುಲ್ಕ ಬರುತ್ತಿದ್ದರೆ, ದರ ಏರಿಕೆಯಿಂದ 509 ರೂ. ಮತ್ತು 5 ಮನೆಗಳಿರುವ ವಸತಿ ಸಮುಚ್ಚಯಗಳು 50,000 ಲೀ. ಬಳಕೆದಾರರಾಗಿದ್ದರೆ, 1,191 ರೂ. ಬಿಲ್‌ ಬರುತ್ತಿದ್ದರೆ, ಇನ್ನು 1,809 ರೂ. ಹಾಗೂ 10,000 ಲೀ. ಬಳಕೆ ಮಾಡುತ್ತಿದ್ದ ಗೃಹೇತರ ಬಳಕೆದಾರರಿಗೆ ಇದುವರೆಗೂ 675 ರೂ. ಬರುತ್ತಿದ್ದರೆ ದರ ಏರಿಕೆಯಿಂದ 950 ರೂ. ಬರುವ ಸಾಧ್ಯತೆ ಇದೆ ಎನ್ನುತ್ತವೆ ಮಂಡಳಿಯ ಮೂಲಗಳು.

ಇದನ್ನು ಓದಿ : ಬೆಂಗಳೂರಿನ ಅಪಾರ್ಟ್ಮೆಂಟ್ ನಿವಾಸಿಗಳ ಆಕ್ರೋಶಕ್ಕೆ ಕಾರಣವಾದ ಕಸ ತೆರಿಗೆ

ನೀರಿನ ದರದಿಂದ ಜನಸಾಮಾನ್ಯರ ಜೀವನ ನಿರ್ವಹಣೆಗೆ ಹೊರೆಯಾಗಿದೆ. ಜನಪ್ರತಿನಿಧಿಗಳು ತಮ್ಮ ವೇತನ, ಭತ್ಯೆಗಳನ್ನುಹೆಚ್ಚಳ (Bengaluru water price hike) ಮಾಡಿಕೊಂಡಾಗ ಸರಕಾರಕ್ಕೆ ನಷ್ಟವಾಗುವುದಿಲ್ಲ. ಆದರೆ, ಸಾರ್ವಜನಿಕರು ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಕೆ ಮಾಡಲಿಲ್ಲ ಎಂದರೆ ಸರಕಾರಕ್ಕೆ ನಷ್ಟವಾಗುತ್ತದೆ.

ಸರಕಾರ ಇಂತಹ ಜನವಿರೋಧಿ ಧೋರಣೆಗಳನ್ನು ಮೊದಲು ಬಿಡಬೇಕು ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೀರಿನ ದರ ಪರಿಷ್ಕರಣೆಯಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಚಟುವಟಿಕೆಗೆ ಹೊಡೆತ ಬಿದ್ದಿದೆ. ದರ ಹೆಚ್ಚಳಕ್ಕೂ ಮುಂಚೆ ಜಲಮಂಡಳಿಯ ಸೇವೆಯಲ್ಲಿ ಸುಧಾರಣೆ ಆಗಬೇಕು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸರಿಯಾಗಿ ಸಮರ್ಪಕ ನೀರು ಪೂರೈಸುವುದಿಲ್ಲ. ಅಲ್ಲದೆ, ಅನ್ಯ ಬಳಕೆಗೆ ಸಂಸ್ಕರಿಸಿದ ನೀರು ನೀಡುತ್ತೇವೆ ಎನ್ನುವ ಜಲಮಂಡಳಿ ಮಾತು ಹೇಳಿಕೆಗಷ್ಟೇ ಸೀಮಿತವಾಗಿದೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಕುಮಾರ್‌ ದೂರಿದ್ದಾರೆ.

Tags: bwssbKarnatakaSiddaramaiahwater bill hike

Related News

ಬಿಡದಿ ಟೌನ್‌ಶಿಪ್‌ ಯೋಜನೆಗೆ ಎರಡು ತಿಂಗಳ ವಿರಾಮ: ಸಮಿತಿ ರಚನೆಗೆ ಸಿಎಂ ಘೋಷಣೆ
ಪ್ರಮುಖ ಸುದ್ದಿ

ಬಿಡದಿ ಟೌನ್‌ಶಿಪ್‌ ಯೋಜನೆಗೆ ಎರಡು ತಿಂಗಳ ವಿರಾಮ: ಸಮಿತಿ ರಚನೆಗೆ ಸಿಎಂ ಘೋಷಣೆ

July 15, 2026
ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳಿಗೆ ಕಾನೂನು ರಕ್ಷಣೆ: ಎಲ್ಲರ ಅಭಿಪ್ರಾಯ ಪಡೆದು ಸಮಗ್ರ ಮಸೂದೆ ಜಾರಿ ಎಂದ ಸಿಎಂ ಡಿ.ಕೆ. ಶಿವಕುಮಾರ್
ಪ್ರಮುಖ ಸುದ್ದಿ

ಅಪಾರ್ಟ್‌ಮೆಂಟ್ ಮಾಲೀಕರ ಹಕ್ಕುಗಳಿಗೆ ಕಾನೂನು ರಕ್ಷಣೆ: ಎಲ್ಲರ ಅಭಿಪ್ರಾಯ ಪಡೆದು ಸಮಗ್ರ ಮಸೂದೆ ಜಾರಿ ಎಂದ ಸಿಎಂ ಡಿ.ಕೆ. ಶಿವಕುಮಾರ್

July 15, 2026
ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿ ಹಾಕಿದರೆ ಭಾರೀ ದಂಡ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ
ಪ್ರಮುಖ ಸುದ್ದಿ

ಮತ್ತೆ ಫುಟ್‌ಪಾತ್‌ ಮೇಲೆ ಅಂಗಡಿ ಹಾಕಿದರೆ ಭಾರೀ ದಂಡ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ

July 15, 2026
ನಾಡಗೀತೆಯಲ್ಲಿ ಬದಲಾವಣೆಗೆ ಚಿಂತನೆ: ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಬೌದ್ಧ ಧರ್ಮದ ಉಲ್ಲೇಖ ಸೇರಿಸಲು ಸಮಿತಿ ಶಿಫಾರಸು
ಪ್ರಮುಖ ಸುದ್ದಿ

ನಾಡಗೀತೆಯಲ್ಲಿ ಬದಲಾವಣೆಗೆ ಚಿಂತನೆ: ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಬೌದ್ಧ ಧರ್ಮದ ಉಲ್ಲೇಖ ಸೇರಿಸಲು ಸಮಿತಿ ಶಿಫಾರಸು

July 15, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.