• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ರೌಡಿಸಂ ತೋರಿಸಿ ಏನ್ ಸಾಧಿಸ್ತೀರಿ, ಅದು ಕನ್ನಡದ ಹೆಮ್ಮೆಯಲ್ಲ : ಭಾಸ್ಕರ್ ರಾವ್ !

Mohan Shetty by Mohan Shetty
in ಮನರಂಜನೆ, ರಾಜ್ಯ
yash
0
SHARES
5
VIEWS
Share on FacebookShare on Twitter

‘ರೌಡಿಸಂ’ ಆಧಾರಿತ ಸಿನಿಮಾಗಳನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಕೆಲ ರಾಜಕಾರಣಿಗಳು ರೌಡಿಸಂ ಕಥಾಹಂದರವಿರುವ ಸಿನಿಮಾಗಳನ್ನು ಚೆನ್ನಾಗಿವೆ ಎಂದು ಹೊಗಳುತ್ತಾರೆ. ನಾನೆಂದಿಗೂ ರೌಡಿಸಂ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದರಿಂದ ಏನೂ ಪ್ರಯೋಜನವಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ(IPS Officer) ಮತ್ತು ಎಎಪಿ ನಾಯಕ(AAP Leader) ಭಾಸ್ಕರ್‍ರಾವ್(Bhaskar Rao) ಪರೋಕ್ಷವಾಗಿ ಕೆ.ಜಿ.ಎಫ್(KGF 2) ಚಿತ್ರಕ್ಕೆ ಟಾಂಗ್ ನೀಡಿದ್ದಾರೆ.

yash

ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರೌಡಿಸಂ ಆಧಾರಿತ ಸಿನಿಮಾಗಳಿಂದ ಏನು ಸಾಧಿಸಲು ಸಾಧ್ಯ? ವಿಚಿತ್ರವಾಗಿ ಗಡ್ಡ ಬಿಟ್ಟು, ಕ್ರೂರವಾಗಿ ವರ್ತಿಸುವ, ದೇಹವನ್ನು ತೋರಿಸುವ ಸಿನಿಮಾಗಳು ಕನ್ನಡದ ಹೆಮ್ಮೆಯಲ್ಲ. ಉತ್ತಮ ಸಾಧಕರ ಕತೆಗಳನ್ನು ಸಿನಿಮಾ ಮಾಡಬೇಕು. ಕರ್ನಾಟಕದಲ್ಲಿ ಅಸಂಖ್ಯಾತ ಸಾಧಕರಿದ್ದಾರೆ. ಅನೇಕ ಬಡಮಕ್ಕಳು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಅನೇಕರು ಅದ್ಭುತವಾದ ಸಾಧನೆಗಳನ್ನು ಮಾಡಿದ್ದಾರೆ. ವಿದೇಶಗಳಲ್ಲೂ ಕನ್ನಡಿಗರು ಜಗತ್ತು ಮೆಚ್ಚುವಂತ ಸಾಧನೆಗಳನ್ನು ಮಾಡಿದ್ದಾರೆ. ಅವರ ಸಾಧನೆಗಳನ್ನು ಸಿನಿಮಾ ಮಾಡಬೇಕು.

ಇದನ್ನೂ ಓದಿ : https://vijayatimes.com/basavanagowda-patil-yatnal/

ಅದೆಲ್ಲವನ್ನೂ ಬಿಟ್ಟು, ರೌಡಿಸಂ ಆಧಾರಿತ ಕತೆಗಳನ್ನು ಸಿನಿಮಾ ಮಾಡಲಾಗುತ್ತಿದೆ. ಅದರಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಹೀರೋಯಿಸಂ ಮತ್ತು ರೌಡಿಸಂನಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ನೋಡುಗರಿಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವುದು ಮುಖ್ಯವಾಗುತ್ತದೆ ಎಂದರು. ಇನ್ನು ಇತ್ತೀಚೆಗೆ ಮಲೆಯಾಳಿ ಮತ್ತು ತಮಿಳು ಸಿನಿಮಾಗಳಲ್ಲಿ ಸಾಮಾಜಿಕ ಘಟನೆಯಾಧಾರಿತ ಕಥೆಗಳನ್ನೇ ಸಿನಿಮಾ ಮಾಡಲಾಗುತ್ತಿದೆ. ಇದರಿಂದ ಯುವಜನತೆಗೆ ಒಂದೊಳ್ಳೆ ಸಂದೇಶ ಸಿಗುತ್ತದೆ. ಯುವಜನತೆಗೆ ಏನನ್ನಾದರೂ ಸಾಧಿಸಲು ಪ್ರೇರಣೆ ಸಿಗುತ್ತದೆ.

police

ಅದನ್ನೆಲ್ಲಾ ಬಿಟ್ಟು ರೌಡಿಸಂ ಆಧಾರಿತ ಸಿನಿಮಾಗಳನ್ನು ಮಾಡಿದರೆ ಸಮಾಜದಲ್ಲಿ ಕ್ರೈಮ್‍ರೇಟ್ ಹೆಚ್ಚಾಗುತ್ತದೆ. ಯುವಜನರು ದಾರಿ ತಪ್ಪುತ್ತಾರೆ. ದಂಡುಪಾಳ್ಯ ಸಿನಿಮಾ ನೋಡಿ ಕೆಲ ಹಂತಕರು ಕತ್ತು ಕೊಯ್ಯುವುದನ್ನು ಅನೇಕರ ಮೇಲೆ ಪ್ರಯೋಗ ಮಾಡಿದ್ದನ್ನು ನಾನು ಕಂಡಿದ್ದೇನೆ. ಆ ರೀತಿಯ ಸಿನಿಮಾಗಳನ್ನು ಜನರು ಒಪ್ಪಿಕೊಳ್ಳಬಾರದು. ಪೋಲಿಸ್ ಅಧಿಕಾರಿಯಾಗಿದ್ದ ಅವಧಿಯಲ್ಲಿ ನಾನು ಗಮನಿಸಿರುವ ಪ್ರಮುಖ ಸಂಗತಿಯೆಂದರೆ, ರೌಡಿಸಂ ಆಧಾರಿತ ಸಿನಿಮಾಗಳಿಂದ ಯುವಜನತೆ ದಾರಿ ತಪ್ಪುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ ಎಂದರು.

Tags: bhaskarraoIPSKGFpoliceYASH

Related News

ಆ ಎರಡು ಪದಗಳು ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ – ಸಿದ್ದುಗೆ ಬಿಜೆಪಿ ಟಾಂಗ್
ಪ್ರಮುಖ ಸುದ್ದಿ

ಆ ಎರಡು ಪದಗಳು ಅಂಬೇಡ್ಕರ್ ಅವರು ರಚಿಸಿದ್ದ ಮೂಲ ಸಂವಿಧಾನದಲ್ಲಿ ಇರಲೇ ಇಲ್ಲ – ಸಿದ್ದುಗೆ ಬಿಜೆಪಿ ಟಾಂಗ್

September 22, 2023
ಕಾವೇರಿ ಕ್ಲೈಮ್ಯಾಕ್ಸ್: ಕರ್ನಾಟಕಕ್ಕೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ
ಪ್ರಮುಖ ಸುದ್ದಿ

ಕಾವೇರಿ ಕ್ಲೈಮ್ಯಾಕ್ಸ್: ಕರ್ನಾಟಕಕ್ಕೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ 5000 ಕ್ಯೂಸೆಕ್ ನೀರು ಬಿಡಲು ಸುಪ್ರೀಂ ಆದೇಶ

September 22, 2023
ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್..!
ಪ್ರಮುಖ ಸುದ್ದಿ

ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್..!

September 22, 2023
ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌
ದೇಶ-ವಿದೇಶ

ಯಾತ್ರಾರ್ಥಿಗಳಿಗೆ ಬಂಪರ್ ಕೊಡುಗೆ: ದೇವರ ದರ್ಶನದ ಬುಕಿಂಗ್‌ ಜೊತೆ ಪಾರ್ಕಿಂಗ್ ಜಾಗವು ಬುಕ್‌

September 21, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.