Karnataka: 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ(BJP) ಕೆಲವು ಕ್ಷೇತ್ರಗಳನ್ನು ಸುಲಭವಾಗಿ (BJP 7 major mistakes) ಗೆಲ್ಲಬಹುದಿತ್ತು.
ಆದರೆ ಪಕ್ಷದ ಕೆಲವು ನೀತಿಗಳಿಂದ 8 ರಿಂದ 10 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು.
ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತಹ ತಪ್ಪುಗಳು ಮರಳಿ ಆಗದಂತೆ ಎಚ್ಚರವಹಿಸಲು ಕೇಂದ್ರ ಬಿಜೆಪಿ ನಾಯಕರು ಹೆಚ್ಚಿನ ನಿಗಾ ವಹಿಸಿದ್ಧಾರೆ.
ಕೇಂದ್ರ ಬಿಜೆಪಿ ನಾಯಕರ ಪ್ರಕಾರ 2018ರ ವಿಧಾನಸಭಾ ಚುನಾವಣೆಯಲ್ಲಿ(Election) ಬಿಜೆಪಿ ಮಾಡಿದ 7 ಪ್ರಮುಖ ತಪ್ಪುಗಳೆಂದರೆ,

- ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಚಾರ ನಡೆಸದೇ ಇದ್ದದ್ದು, ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಬೀದರ(Bidar) ಜಿಲ್ಲೆಯಲ್ಲಿ ಬಿಜೆಪಿ ಕಳೆದ ಬಾರಿ ಹೆಚ್ಚು ಪ್ರಚಾರ ನಡೆಸಲಿಲ್ಲ.
- ವಿಜಯಪುರ, ಬೀದರ, ಬಳ್ಳಾರಿ, ಬೆಳಗಾವಿ, ಕಲಬುರಗಿ ಜಿಲ್ಲೆಗಳ ಕೆಲವು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಸ್ಥಳೀಯ ನಾಯಕರು ತಮ್ಮ ಬೆಂಬಲಿಗರಿಗೆ(BJP 7 major mistakes) ಟಿಕೆಟ್ ಕೊಡಿಸಿದ್ದರು. ಆದರೆ ಅಲ್ಲಿ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದರೆ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು.
- ಉದಾಹರಣೆಗೆ ವಿಜಯಪುರ ನಾಗಠಾಣ ಕ್ಷೇತ್ರದಲ್ಲಿ ಗೋವಿಂದ ಕಾರಜೋಳ(Govinda Karajola) ಮಗ ಗೋಪಾಲ ಕಾರಜೋಳಗೆ ಟಿಕೆಟ್ ನೀಡಿದ್ದರಿಂದ ಬಿಜೆಪಿಯಲ್ಲಿದ್ದ ವಿಠಲ್ ಕಟಕಧೋಂಡ ಪಕ್ಷ ತೊರೆದು ಕಾಂಗ್ರೆಸ್ನಿಂದ(Congress) ಸ್ಪರ್ಧಿಸಿ 54 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು.
ಇದನ್ನೂ ಓದಿ: ಟರ್ಕಿ , ಸಿರಿಯಾದಲ್ಲಿ ಭಾರೀ ಭೂಕಂಪಕ್ಕೆ 4,300ಕ್ಕೂ ಅಧಿಕ ಬಲಿ ! ಭಾರತದಿಂದ ಸಹಾಯ ಹಸ್ತ
- ಅನೇಕ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಖರ್ಚಿಗಾಗಿ ನೀಡಿರುವ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬ ಆರೋಪವು ಕೇಳಿಬಂದಿತ್ತು. ಕೇಂದ್ರ ಬಿಜೆಪಿಯಿಂದ ನೀಡಿರುವ ಹಣವನ್ನು ಕಾರ್ಯಕರ್ತರ ಮಟ್ಟದಲ್ಲಿ ಸರಿಯಾಗಿ ಹಂಚಿಕೆಯಾಗಿಲ್ಲ. ಹೀಗಾಗಿ ಪ್ರಚಾರದಲ್ಲಿ ಕೊರತೆ ಉಂಟಾಯಿತು.
- ಕೆಲವು ಕ್ಷೇತ್ರಗಳಿಗೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದರಿಂದ ಪ್ರಚಾರ ಕಾರ್ಯದಲ್ಲಿ ಹಿಂದುಳಿಯಬೇಕಾಯಿತು.

- ಬೆಂಗಳೂರು ನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್ನೊಂದಿಗೆ(JDS) ತೆರೆಮರೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು, ಪಕ್ಷಕ್ಕೆ ಮುಳುವಾಯಿತು. ಹೊಂದಾಣಿಕೆ ರಾಜಕೀಯದಿಂದ ಹಲವು ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ದುರ್ಬಲವಾಯಿತು.
- ಚುನಾವಣಾ ಪ್ರಚಾರ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಮಾಜಿ ಪ್ರಧಾನಿ ದೇವೇಗೌಡರನ್ನು(HD Devegowda) ಹೊಗಳಿದ್ದು, ಬಿಜೆಪಿ ಕಾರ್ಯಕರ್ತರ ಉತ್ಸಾಹಕ್ಕೆ ಕಡಿವಾಣ ಹಾಕಿತು.
- ಸಂಸದ ಅನಂತ್ಕುಮಾರ ಹೆಗಡೆ(Ananth Kumar Hegade) ಅವರು ಸಂವಿಧಾನದ ಕುರಿತು ನೀಡಿದ್ದ ಹೇಳಿಕೆ ಎಸ್ಸಿ/ಎಸ್ಟಿ ಸಮುದಾಯದ ಮೇಲೆ ಋಣಾತ್ಮಕ ಪರಿಣಾಮ ಬೀರಿತು.