Karnataka: ತಮ್ಮ ರಾಜಕೀಯಕ್ಕಾಗಿ ಇಲ್ಲ ಸಲ್ಲದ ಡೋಂಗಿ ಗ್ಯಾರಂಟಿಗಳ ಪ್ರಚಾರದ ಗುಂಗಿನಲ್ಲಿ ಈ ದೇಶದ, ಈ ರಾಜ್ಯದ ವೀರ ಪುರುಷರಿಗೆ ಕಾಂಗ್ರೆಸ್(bjp tweets to congress) ಅಪಮಾನ ಎಸಗುತ್ತಿದೆ, ಸಮಾಜದಲ್ಲಿ ಒಡಕನ್ನು ಸೃಷ್ಟಿಸುತ್ತಿದೆ. ಇವರಿಗೆ ತಕ್ಕ ಶಾಸ್ತಿಯನ್ನು ರಾಜ್ಯದ ಜನ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ(bjp) ಟೀಕಿಸಿದೆ.
ಕಾಂಗ್ರೆಸ್ವಿರುದ್ದ ಸರಣಿ ಟ್ವೀಟ್ಗಳ(bjp tweets to congress) ಮೂಲಕ “ಪ್ರಜಾದ್ರೋಹಯಾತ್ರೆ” ಎಂಬ ಹ್ಯಾಷ್ಟ್ಯಾಗ್ಬಳಸಿ(hash tag) ವಾಗ್ದಾಳಿ ನಡೆಸಿರುವ ಬಿಜೆಪಿ,
ಅಂಬೇಡ್ಕರ್ ಅವರ ಜೀವನದ ಮೈಲುಗಲ್ಲುಗಳ ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಿದವರು ನಾವು.
ಲಂಡನ್ನಿನಲ್ಲಿ ಬಸವಣ್ಣನವರ(basavanna) ಪ್ರತಿಮೆ ಸ್ಥಾಪಿಸಿದವರು ನಾವು. ಗುಜರಾತಿನಲ್ಲಿ ಪಟೇಲರ ಪ್ರತಿಮೆ ಸ್ಥಾಪನೆ ಮಾಡಿದ್ದು ನಾವು.
ಚೆನ್ನೈನಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆ ಮಾಡಿದ್ದು ನಾವು. ಬಾಬಾ ಸಾಹೇಬರ(baba saheb)ಹೆಸರನ್ನೇ ಹೇಳಿಕೊಂಡು ಹೆಜ್ಜೆ ಹೆಜ್ಜೆಗೂ
ಸಂವಿಧಾನ ಉಲ್ಲೇಖಿಸುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ಬಾಬಾ ಸಾಹೇಬರಿಗೆ ಕೊಡಬೇಕಾದಂಥ ಗೌರವ ಕೊಡಲೇ ಇಲ್ಲ.
1954ರ ಉಪಚುನಾವಣೆಯಲ್ಲಿ ಅವರು ಸೋಲುವಂತೆ ನೋಡಿಕೊಂಡವರು ನೆಹರು(neharu) ಎಂದು ಆರೋಪಿಸಿದೆ.
ಇನೊಂದು ಟ್ವೀಟ್ನಲ್ಲಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಬಹಿಷ್ಕರಿಸುವ ನಡೆಯ ಹಿಂದಿರುವುದು ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ(siddaramaiah) ಎಂಬ ಸತ್ಯ,
ಅವರ ಬಿಟ್ಟಿ ದೌರ್ಭಾಗ್ಯಗಳನ್ನು ತಿರಸ್ಕರಿಸುತ್ತಿರುವ ಸ್ವಾಭಿಮಾನಿ ಕನ್ನಡಿಗರಿಗೆ ತಿಳಿದಿದೆ.
ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ, ಟಿಪ್ಪು ಜಯಂತಿಯನ್ನು ಸಮರ್ಥಿಸಿಕೊಳ್ಳುವ ಡಿ.ಕೆ.ಶಿವಕುಮಾರ(dk shivakumar) ಅವರಿಗೆ ದೊಡ್ಡ ನಂಜೇಗೌಡ,
ಉರಿ ಗೌಡರನ್ನು ಕಾಲ್ಪನಿಕ ಪಾತ್ರಗಳೆಂದು ಬಿಂಬಿಸುವುದು ಕಷ್ಟವಲ್ಲ. ಇಂಥವರು ಒಕ್ಕಲಿಗ ವೀರರ ಜಯಂತಿ, ಪ್ರತಿಮೆ ಸ್ಥಾಪನೆಗೆ ಒಪ್ಪಿಕೊಳ್ಳುವರೇ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: https://vijayatimes.com/tejaswi-opened-emergency-exit/
ಮತ್ತೊಂದು ಟ್ವೀಟ್ನಲ್ಲಿ, ನಮ್ಮ ದೇಶದ ಚರಿತ್ರೆಯನ್ನು ಬೇಕಾದಂತೆ ತಿರುಚಿ, ತಮ್ಮನ್ನೇ ತಾವು ವೈಭವೀಕರಿಸಿಕೊಂಡಿದ್ದ ಬ್ರಿಟಿಷರಂತೆ(british) ದೇಶವನ್ನ ಲೂಟಿ ಮಾಡಿದ ಕಾಂಗ್ರೆಸ್ಗೆ ಒಕ್ಕಲಿಗ ಸಮುದಾಯದ ವೀರರ ಕತೆಯನ್ನು ಸಮಾಜದ ಮುಂದಿಡುವುದು ಬೇಕಾಗಿಲ್ಲ.
ಮತಾಂಧ ಟಿಪ್ಪುವಿನಿಂದ ಮೈಸೂರು ಸಂಸ್ಥಾನವನ್ನು ಉಳಿಸಿದ್ದು ಒಕ್ಕಲಿಗ ವೀರರಾದ ರಾಜಮಾತೆ ಮಹಾರಾಣಿ ಲಕ್ಷ್ಮಮ್ಮ ಅಮ್ಮಣ್ಣಿಯವರ ಬಲಗೈ ಬಂಟರಾದ ದೊಡ್ಡನಂಜೇಗೌಡ ಮತ್ತು ಉರಿಗೌಡ ಎಂಬ ಸತ್ಯ ಕಾಂಗ್ರೆಸ್ಪಕ್ಷಕ್ಕೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದೆ.