- ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ
- 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಮಳಿಗೆ
- ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ (BMRCL deal with Amul)
Bengaluru: ಬೆಂಗಳೂರಿಗರ ಪ್ರಮುಖ ಸಂಚಾರ ನಾಡಿಯೆಂದರೆ ಅದು ನಮ್ಮ ಮೆಟ್ರೋ(Namma metro).
ನಮ್ಮ ಮೆಟ್ರೋದಲ್ಲಿ ಪ್ರತಿನಿತ್ಯ 6-7 ಲಕ್ಷ(Lakh) ಮೆಟ್ರೋ ಪ್ರಯಾಣಿಕರು(Metro passenger) ಸಂಚರಿಸಿ, ಬಿಎಂಆರ್ಸಿಎಲ್(BMRCL) ಅನ್ನು ಬೆಂಗಳೂರಿಗರು ಬೆಳೆಸುತ್ತಿದ್ದಾರೆ.
ಬಿಎಂಆರ್ಸಿಎಲ್ (Bangalore Metro Rail Corporation Limited) ಮತ್ತೊಮ್ಮೆ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಕನ್ನಡದ ಅಸ್ಮಿತೆ ನಂದಿನಿ ಮತ್ತೊಮ್ಮೆ ಬೆಂಗಳೂರಲ್ಲಿ ನಿರ್ಲಕ್ಷ್ಯಕ್ಕೆ(Negligence) ಒಳಗಾಯ್ತಾ ಎಂಬ ಪ್ರಶ್ನೆ ಎದ್ದಿದೆ.
ಆದರೆ ಕನ್ನಡಿಗರಿಗೆ, ಕರ್ನಾಟಕದ ಬ್ರ್ಯಾಂಡ್ ನಂದಿನಿಗೆ(Karnataka’s brand Nandini) ಬೆಂಗಳೂರು ಮೆಟ್ರೋ ನಿಗಮ(Bangalore Metro Corporation) ಮನ್ನಣೆ ಕೊಡದೇ,
ಗುಜರಾತ್ನ(Gujarat) ಅಮುಲ್ಗೆ ಆದ್ಯತೆ ಕೊಟ್ಟು ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು(Amul Kiosk) ತೆರೆಯಲು ಅವಕಾಶ ನೀಡಿದೆ.
ಇತ್ತೀಚಿಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಅಥವಾ ಅಮುಲ್ ಜೊತೆ ಬೆಂಗಳೂರಿನ 10 ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳನ್ನು ಸ್ಥಾಪಿಸಲು ಪರವಾನಗಿ ಒಪ್ಪಂದಕ್ಕೆ ಬಿಎಂಆರ್ಸಿಎಲ್ ಸಹಿ ಹಾಕಿದೆ.

ಈ ಬಗ್ಗೆ ಜೂನ್ 16ರಂದು ಬಿಎಂಆರ್ಸಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ(publication) ತಿಳಿಸಲಾಗಿದೆ.
ನಗರದ ಪಟ್ಟಂದೂರು ಅಗ್ರಹಾರ(Pattandur Agrahara), ಇಂದಿರಾನಗರ(Indiranagar), ಬೆನ್ನಿಗಾನಹಳ್ಳಿ(Benniganahalli), ಬೈಯಪ್ಪನಹಳ್ಳಿ(Baiyappanahalli), ಟ್ರಿನಿಟಿ(Trinity), ಸರ್ ಎಂ ವಿಶ್ವೇಶ್ವರಯ್ಯ(Sir M Visvesvaraya), ನಾಡಪ್ರಭು ಕೆಂಪೇಗೌಡ ನಿಲ್ದಾಣ(Nadaprabhu Kempegowda Station) ,
ನ್ಯಾಷನಲ್ ಕಾಲೇಜು(National College), ಜಯನಗರ (Jayanagar)ಮತ್ತು ಬನಶಂಕರಿಗಳಲ್ಲಿ(Banashankari) ಕಿಯೋಸ್ಕ್ಗಳು ಆರಂಭವಾಗಲಿವೆ.
ಈ ಮೂಲಕ ನಮ್ಮ ರಾಜ್ಯದ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ನ ಅಮುಲ್ ಬ್ರ್ಯಾಂಡ್ ಅನ್ನು ಪ್ರಮೋಷನ್(Promotion) ಮಾಡಲಾಗುತ್ತಿದೆ.
ಈಗಾಗಲೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಕಿಯೋಸ್ಕ್ ಸ್ಥಾಪನೆಯಾಗಿದ್ದು, ಈಗಾಗಲೇ ಅಮುಲ್ ಮಳಿಗೆಯಲ್ಲಿ ಐಸ್ಕ್ರೀಮ್(Ice cream), ಚಾಕಲೇಟ್(Chocolate), ಸ್ಯಾಂಡ್ ವಿಚ್(Sandwich), ಟೀ(tea), ಪಿಜ್ಜಾ (Pizza)ಸೇರಿದಂತೆ ಹಲವು ಇನ್ಸ್ಟೆಂಟ್ ತಿಂಡಿಗಳನ್ನು(Instant snacks) ಮಾರಲಾಗುತ್ತಿದೆ.
ಇನ್ನೂ ಈಗೀನ ಕಾಂಗ್ರೆಸ್ ಸರ್ಕಾರ(Congress Govt) 2023ರ ಕರ್ನಾಟಕ ಚುನಾವಣೆಗೆ(Karnataka election) ಮುನ್ನ ಅಮುಲ್ ಅನ್ನು ಬೆಂಗಳೂರು ಮಾರುಕಟ್ಟೆಗೆ (Bangalore market) ಪ್ರವೇಶಿಸುವುದನ್ನು ವಿರೋಧಿಸಿತ್ತು.
ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್, ಬಿಜೆಪಿ ಸರ್ಕಾರವು(BJP Govt) ಅಮುಲ್ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಬ್ರ್ಯಾಂಡ್(Nandini Brand) ಮತ್ತು ಡೈರಿ ರೈತರ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಆರೋಪಿಸಿತ್ತು.
ಸೇವ್ ನಂದಿನಿ ಅಭಿಯಾನವನ್ನು(Save Nandini Campaign) ಆರಂಭಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(KPCC President DK Shivakumar) ಅಭಿಯಾನ ನಡೆಸಿದ್ದರು.
ರಾಹುಲ್ ಗಾಂಧಿ(Rahul Gandhi) ಸಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ರಾಜಕೀಯ ಗುದ್ದಾಟ ಮರೆತು, ಈಗ ತನ್ನ ಮಾತಿಗೆ ಫುಲ್ ಉಲ್ಟಾ ಎನ್ನುವಂತೆ ಕಾಂಗ್ರೆಸ್ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಅಮುಲ್ ಮಳಿಗೆಗಳು ಸ್ಥಾಪಿಸಲು ಅವಕಾಶ ನೀಡಿದೆ.
ಇನ್ನೂ ದೆಹಲಿ (Delhi) ಸೇರಿದಂತೆ ವಿವಿಧ ರಾಜ್ಯಗಳಲ್ಲಿ, ದೇಶ ವಿದೇಶದಲ್ಲಿ (Foreign country) ಹೆಸರಾದ ನಮ್ಮ ಕನ್ನಡಿಗರ, ಕರ್ನಾಟಕದಲ್ಲಿ(Karnataka) ನಂದಿನಿ ಬ್ರಾಂಡ್ ಹೆಸರಾಗಿದೆ.
ಇದನ್ನು ಓದಿ : ಕ್ಯಾನ್ಸರ್ ಪೀಡಿತರಿಗೆ ಬಡವರಿಗೆ ಇಲ್ಲಿದೆ ಗುಡ್ ನ್ಯೂಸ್, ಮನೆ ಬಾಗಿಲಿಗೆ ಬರಲಿದೆ ಒಪಿಡಿ ಸೌಲಭ್ಯ!
ಆದರೆ ನಮ್ಮೂರ ನಂದಿನಿಗೆ ಬಿಎಂಆರ್ಸಿಎಲ್ ಅವಕಾಶ (BMRCL deal with Amul) ಕೊಡದೇ ಇರೋದಕ್ಕೆ ಕನ್ನಡಿಗರು ಕೆಂಡವಾಗಿದ್ದಾರೆ.