ಹೊಸದಿಲ್ಲಿ, ಏ. 26: ಕೋವಿಡ್ ಪೀಡಿತರ ನೆರವಿಗೆ ನಿಂತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಕಾರ್ಯವನ್ನು ಸಂಸದ ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ʻಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಒದಗಿ ಬರುವ ಪ್ರತಿ ಸಹಾಯವೂ ಭರವಸೆ ಮೂಡಿಸುತ್ತವೆ. ಆಹಾರ, ಔಷಧ, ಆಮ್ಲಜನಕ ಪೂರೈಕೆಗಾಗಿ ಜಿಜಿಎಫ್ಗೆ ನಟ ಅಕ್ಷಯ್ ಕುಮಾರ್ 1 ಕೋಟಿ ರೂ. ದಾನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿʼ ಎಂದು ಆಶಿಸಿದ್ದಾರೆ.
ಗೌತಮ್ ಗಂಭೀರ್ ಅವರ ಫೌಂಡೇಷನ್ಗೆ ನಟ ಅಕ್ಷಯ್ ಒಂದು ಕೋಟಿ ರೂ. ಹಣವನ್ನು ನೀಡಿದ್ದಾರೆ. ಈ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವಂತೆ ಅಕ್ಷಯ್ ಕೋರಿದ್ದಾರೆ.