• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಯಡಿಯೂರಪ್ಪ ಅವರ ಬಜೆಟ್ ಸಂವಾದಕ್ಕೆ ಮಾಧ್ಯಮಗಳಿಗೆ ಕೊಟ್ಟಿದ್ದು 38.97 ಲಕ್ಷ !

Preetham Kumar P by Preetham Kumar P
in ಪ್ರಮುಖ ಸುದ್ದಿ
ಯಡಿಯೂರಪ್ಪ ಅವರ ಬಜೆಟ್ ಸಂವಾದಕ್ಕೆ ಮಾಧ್ಯಮಗಳಿಗೆ ಕೊಟ್ಟಿದ್ದು 38.97 ಲಕ್ಷ !
0
SHARES
0
VIEWS
Share on FacebookShare on Twitter

ಬಿ.ಎಸ್. ಯಡಿಯೂರಪ್ಪ ಅವರು ಕಳೆದ ಮಾರ್ಚ್‌ನಲ್ಲಿ ಘೋಷಿಸಿರುವ ಬಜೆಟ್‌ ಮೇಲಿನ ಸಂವಾದಕ್ಕೆ ಮಾಧ್ಯಮಗಳಿಗೆ ಬರೋಬ್ಬರಿ 38.97 ಲಕ್ಷಗಳನ್ನು ನೀಡಿರುವುದು `ದಿಫೈಲ್‌’ ವೆಬ್‌ ಪೋರ್ಟಲ್‌ಗೆ ಲಭ್ಯವಾದ ಆರ್‌ಟಿಐ ವರದಿಯಿಂದ ಬಹಿರಂಗವಾಗಿದೆ.

ಸಾಮಾನ್ಯವಾಗಿ ಎಲ್ಲಾ ಸರ್ಕಾರಗಳು ಬಜೆಟ್‌ ಘೋಷಣೆಯಾದ ನಂತರ ಸುದ್ದಿಗೋಷ್ಟಿಯಲ್ಲಿ ಸಂವಾದ ನಡೆಸುವುದು ಸರ್ವೇ ಸಾಮಾನ್ಯ. ಆದರೆ ಈ ಸಂವಾದಕ್ಕೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುದ್ದಿವಾಹಿನಿಗಳಿಗೆ ಯಾವ ಉದ್ದೇಶಕ್ಕಾಗಿ ಲಕ್ಷಗಟ್ಟಲೆ ಹಣವನ್ನು ನೀಡಿದೆ ಎಂದು ಸ್ವತ: ಸರ್ಕಾರವೇ ತಿಳಿಸಬೇಕಿದೆ.

ಈ ಬಾರಿ ಮಾತ್ರವಲ್ಲದೆ ಕಳೆದ ಬಾರಿ 2020-21 ರ ಬಜೆಟ್‌ ಘೋಷಿಸಿದಾಗಲೂ ಕೂಡ ಸುದ್ದಿವಾಹಿನಿಗಳೊಂದಿಗೆ ನಡೆಸಿದ ಸಂವಾದಕ್ಕೂ ಕೂಡ ಸುಮಾರು 14,86,800 ರೂಗಳನ್ನು ಸರ್ಕಾರ ಮಾಧ್ಯಮದವರಿಗೆ ನೀಡಿರುವುದರ ಬಗ್ಗೆ ಆರ್‌ಟಿಐ ವರದಿಯಿಂದ ತಿಳಿದುಬಂದಿದೆ. ಯಡಿಯೂರಪ್ಪ ಮಂಡಿಸಿದ 2 ಬಜೆಟ್‌ಗೆ ಸುಮಾರು  52ಲಕ್ಷಕ್ಕೂ ಅಧಿಕ ಹಣವನ್ನು ಸುದ್ದಿವಾಹಿನಿಗಳಿಗೆ ವೆಚ್ಚಮಾಡಿದೆ

2021-22 ರ ಬಜೆಟ್‌  ಸಂವಾದಕ್ಕೆ ಸುದ್ದಿವಾಹಿನಿಗಳಿಗೆ ವಾರ್ತಾ ಇಲಾಖೆಯಿಂದ ನೀಡಿರುವ ಮೊತ್ತದ ವಿವರ :

ಟಿವಿ 5 ಕನ್ನಡ – 2,70,000

ಬಿ ಟಿವಿ    – 3,60,000

ಪಬ್ಲಿಕ್‌ ಟಿವಿ – 5,85,000

ನ್ಯೂಸ್ 18 ಕನ್ನಡ – 4,14,000

ಟಿವಿ 9 – 7,92,000

ಸುವರ್ಣ ನ್ಯೂಸ್ – 3,78,000

ರಾಜ್‌ ನ್ಯೂಸ್ – 2,70,000

ಪ್ರಜಾ ಟಿವಿ – 2,88,000

ದಿಗ್ವಿಜಯ ನ್ಯೂಸ್ – 3,60,000

ಅಷ್ಟು ಮಾತ್ರವಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಜಾಹೀರಾತು ಪ್ರಕಟಣೆಗೆ ರಾಜ್ಯ ಸರ್ಕಾರ 44 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ದೇಶ ಇಂಥಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಸರ್ಕಾರಕ್ಕೆ ಇಷ್ಟೊಂದು ಪ್ರಚಾರದ ಹುಚ್ಚು ಬೇಕಾ ಅನ್ನೋದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Related News

ಏಷ್ಯನ್ ಗೇಮ್ಸ್ – 2023 : ಚಿನ್ನಕ್ಕೆ ಮುತ್ತಿಟ್ಟ ಭಾರತೀಯ ಮಹಿಳಾ ಕ್ರಿಕೆಟ್ ಟೀಮ್
ದೇಶ-ವಿದೇಶ

ಏಷ್ಯನ್ ಗೇಮ್ಸ್ – 2023 : ಚಿನ್ನಕ್ಕೆ ಮುತ್ತಿಟ್ಟ ಭಾರತೀಯ ಮಹಿಳಾ ಕ್ರಿಕೆಟ್ ಟೀಮ್

September 26, 2023
ಕೇಂದ್ರ ಸರ್ಕಾರ ECIL ನಲ್ಲಿ 484 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶ-ವಿದೇಶ

ಕೇಂದ್ರ ಸರ್ಕಾರ ECIL ನಲ್ಲಿ 484 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಲ್ಲಿದೆ ಸಂಪೂರ್ಣ ಮಾಹಿತಿ

September 26, 2023
ನಿಮ್ಮ ಶ್ವಾಸಕೋಶದಲ್ಲಿನ ಸಮಸ್ಯೆ ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಒಂದಿಷ್ಟು ಟಿಪ್ಸ್‌
ಆರೋಗ್ಯ

ನಿಮ್ಮ ಶ್ವಾಸಕೋಶದಲ್ಲಿನ ಸಮಸ್ಯೆ ಕಂಡುಹಿಡಿಯುವುದು ಹೇಗೆ? ಇಲ್ಲಿದೆ ಒಂದಿಷ್ಟು ಟಿಪ್ಸ್‌

September 26, 2023
ಬ್ಯಾಂಕ್‌ಗಳಿಗೆ ದಂಡ: ಎಸ್‌ಬಿಐ ಸೇರಿ ನಾಲ್ಕು ಬ್ಯಾಂಕ್‌ಗಳಿಗೆ ಭಾರೀ ದಂಡ ವಿಧಿಸಿದ ಆರ್‌ಬಿಐ ಬ್ಯಾಂಕ್
ದೇಶ-ವಿದೇಶ

ಬ್ಯಾಂಕ್‌ಗಳಿಗೆ ದಂಡ: ಎಸ್‌ಬಿಐ ಸೇರಿ ನಾಲ್ಕು ಬ್ಯಾಂಕ್‌ಗಳಿಗೆ ಭಾರೀ ದಂಡ ವಿಧಿಸಿದ ಆರ್‌ಬಿಐ ಬ್ಯಾಂಕ್

September 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.