ಶೇಕಡಾ 25 ರಷ್ಟು ಬಸ್ ಟಿಕೆಟ್ ದರ ಏರಿಕೆಗೆ (bus ticket price hike) ಸರ್ಕಾರದ ಮುಂದೆ ಸಾರಿಗೆ ನಿಗಮಗಳ ಮನವಿ
ಡೀಸೆಲ್ ದರ ಏರಿಕೆಯ ಹೊರೆ: ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದ ಸಾರಿಗೆ ಇಲಾಖೆ
ಇಂಧನ ವೆಚ್ಚ, ವೇತನ ಬಾಕಿ ಹಾಗೂ ಆರ್ಥಿಕ ಸಂಕಷ್ಟದಿಂದ ಸಾರಿಗೆ ನಿಗಮಗಳು ದರ ಪರಿಷ್ಕರಣೆಗೆ ಒತ್ತಾಯ
Bengaluru: ಕರ್ನಾಟಕದ ನಾಲ್ಕು ಪ್ರಮುಖ ಸಾರಿಗೆ ನಿಗಮಗಳಾದ ಕೆಎಸ್ಆರ್ಟಿಸಿ (KSRTC) , ಬಿಎಂಟಿಸಿ, ವಾಯುವ್ಯ (bus ticket price hike) ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗಿವೆ.
ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚ ಮತ್ತು ಇಂಧನ ದರ ಏರಿಕೆಯ ಪರಿಣಾಮವಾಗಿ ಸಂಸ್ಥೆಗಳ ನಿರ್ವಹಣೆ ಕಷ್ಟಕರವಾಗಿದ್ದು, ಬಸ್ ಟಿಕೆಟ್ ದರವನ್ನು ಶೇಕಡಾ 25 ರಷ್ಟು
ಹೆಚ್ಚಿಸಲು ಸರ್ಕಾರದ ಅನುಮತಿ ಕೋರಲಾಗಿದೆ. ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳು ಸಮಗ್ರ ವರದಿಯೊಂದಿಗೆ ಮುಖ್ಯಮಂತ್ರಿಗಳಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಟಿಕೆಟ್ (Ticket) ದರವನ್ನು ಶೇಕಡಾ 15 ರಷ್ಟು ಹೆಚ್ಚಿಸಿದ (bus ticket price hike) ನಂತರ ಈಗ ಮತ್ತೊಮ್ಮೆ ದರ ಏರಿಕೆ ಪ್ರಸ್ತಾಪ ಮುಂದಿಡಲಾಗಿದೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜತಾಂತ್ರಿಕ ಉದ್ವಿಗ್ನತೆ ಮತ್ತು ಇಂಧನ ಮಾರುಕಟ್ಟೆಯ ಅಸ್ಥಿರತೆ ದೇಶದ ಡೀಸೆಲ್ ದರಗಳ ಮೇಲೆ ಪರಿಣಾಮ ಬೀರಿದೆ.
ಪ್ರತಿದಿನ ಲಕ್ಷಾಂತರ ಲೀಟರ್ ಡೀಸೆಲ್ ಬಳಸುವ ಸಾರಿಗೆ ನಿಗಮಗಳಿಗೆ ಈ ಹೆಚ್ಚುವರಿ ವೆಚ್ಚ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಆದಾಯ ಮತ್ತು
ವೆಚ್ಚಗಳ ನಡುವೆ ದೊಡ್ಡ ಅಂತರ ಉಂಟಾಗಿದ್ದು, ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾರಿಗೆ ಇಲಾಖೆಯ ಅಂದಾಜಿನ ಪ್ರಕಾರ, ಡೀಸೆಲ್ ದರ ಏರಿಕೆಯಿಂದ ನಾಲ್ಕೂ ನಿಗಮಗಳಿಗೆ ಪ್ರತಿ ತಿಂಗಳು ಸುಮಾರು 40 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಉಂಟಾಗುತ್ತಿದೆ.
ವಾರ್ಷಿಕವಾಗಿ ಈ ನಷ್ಟವು 480 ಕೋಟಿ ರೂಪಾಯಿಗಳನ್ನು ಮೀರಬಹುದೆಂಬ ಆತಂಕ ವ್ಯಕ್ತವಾಗಿದೆ. ಇದಲ್ಲದೆ, ಬಸ್ಗಳ ನಿರ್ವಹಣೆ, ಬಿಡಿಭಾಗಗಳ ಖರೀದಿ, ಟೈರ್ ಬದಲಾವಣೆ ಹಾಗೂ ಗ್ಯಾರೇಜ್ (Guarantee) ವೆಚ್ಚಗಳೂ ಗಣನೀಯವಾಗಿ ಹೆಚ್ಚಿವೆ.
ಈ ಎಲ್ಲ ವೆಚ್ಚಗಳನ್ನು ನಿಭಾಯಿಸಲು ಪ್ರಸ್ತುತ ಇರುವ ಟಿಕೆಟ್ ದರಗಳು ಸಾಕಾಗುತ್ತಿಲ್ಲ ಎಂದು ನಿಗಮಗಳು ಸರ್ಕಾರದ ಗಮನಕ್ಕೆ ತಂದಿವೆ.
ಇನ್ನೊಂದೆಡೆ, ಸಾರಿಗೆ ನೌಕರರ ವೇತನ ಪರಿಷ್ಕರಣೆ ಕೂಡ ಹೊಸ ಆರ್ಥಿಕ ಒತ್ತಡವನ್ನು ಸೃಷ್ಟಿಸಿದೆ. ಜುಲೈ ತಿಂಗಳಿನಿಂದ ಶೇಕಡಾ 12.5 ರಷ್ಟು ವೇತನ ಹೆಚ್ಚಳ ಜಾರಿಗೆ
ಬರಬೇಕಿದ್ದು, ಇದರಿಂದ ಮಾಸಿಕ ವೆಚ್ಚ ಮತ್ತಷ್ಟು ಹೆಚ್ಚಲಿದೆ. ಇದರ ಜೊತೆಗೆ ನೌಕರರಿಗೆ ಪಾವತಿಸಬೇಕಿರುವ ಸಾವಿರಾರು ಕೋಟಿ ರೂಪಾಯಿಗಳ ಬಾಕಿ ಹಣವೂ ಉಳಿದಿದೆ.
ನೌಕರರ ಸಂಘಟನೆಗಳು ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸುತ್ತಿರುವುದರಿಂದ ಆಡಳಿತ ಮಂಡಳಿಗೆ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ.
ಹೆಚ್ಚುವರಿ ಆದಾಯ ಸೃಷ್ಟಿಸಲು ಟಿಕೆಟ್ ದರ ಏರಿಕೆಯೇ ಸೂಕ್ತ ಮಾರ್ಗ ಎಂದು ಅಧಿಕಾರಿಗಳು ಪರಿಗಣಿಸಿದ್ದಾರೆ.
ಈ ನಡುವೆ ಶಕ್ತಿ ಯೋಜನೆಯ ಅನುದಾನ ವಿಳಂಬವೂ ನಿಗಮಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ.
ಮಹಿಳೆಯರ ಉಚಿತ ಪ್ರಯಾಣ ಯೋಜನೆಯಡಿ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ಬಾಕಿಯಿರುವುದರಿಂದ ನಗದು ಹರಿವಿನಲ್ಲಿ ಸಮಸ್ಯೆ ಉಂಟಾಗಿದೆ.
ಆದರೆ ಟಿಕೆಟ್ ದರ ಏರಿಕೆಯ ಸುದ್ದಿ ಹೊರಬಿದ್ದ ತಕ್ಷಣ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾನ್ಯ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರು
ಮತ್ತೊಂದು ದರ ಏರಿಕೆ ತಮ್ಮ ಕುಟುಂಬದ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಹೊರೆ ಉಂಟುಮಾಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಜನರ ಅಭಿಪ್ರಾಯ ಮತ್ತು ಸಾರಿಗೆ ನಿಗಮಗಳ ಆರ್ಥಿಕ ಅಗತ್ಯಗಳ ನಡುವೆ ಸಮತೋಲನ ಸಾಧಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಇದನ್ನು ಓದಿ : https://vijayatimes.com/24x7-helpline-for-government-hospitals/