ಚಿಕ್ಕಮಗಳೂರು ಅ 2 : ಗಾಂಧಿ ಜಯಂತಿಯ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ. ಟಿ. ರವಿ ಯವರು ಶೌಚಾಲಯವನ್ನು ಸ್ವಚ್ಛಗೊಳಿಸಿದರು.
152 ನೇ ಗಾಂಧಿ ಜಯಂತಿಯ ಪ್ರಯುಕ್ತ ಜಿಲ್ಲೆಯ ರಾಮನಹಳ್ಳಿ ಬಾಲಕಿಯರ ವಿದ್ಯಾರ್ಥಿನಿಲಯದ ಶೌಚಾಲಯವನ್ನು ಸಿ, ಟಿ ರವಿ ಯವರು ಸ್ವಚ್ಛಗೊಳಿಸಿದರು.
ನಂತರ ಮಾತನಾಡಿದ ಸಿ. ಟಿ ರವಿ ಸನ್ಮಾನ್ಯ ಶ್ರೀ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಮ್ಮ ದೇಶವು ಸ್ವಚ್ಛ ಹಾಗೂ ಆರೋಗ್ಯವಂತ ಭಾರತವಾಗಲು ಎಲ್ಲಾ ಪ್ರಜೆಗಳ ಸಹಕಾರ ಅಗತ್ಯ, ಜನರು ಸ್ವಚ್ಛತೆಯನ್ನು ಕಾಪಾಡುವಲ್ಲಿ ಗಮನಹರಿಸಬೇಕು ಎಂದರು
ಮಹಾತ್ಮ ಗಾಂಧಿಜಿಯವರ ಕಾಲದಿಂದಲೂ ದೇಶದಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷವಾದ ನಿಲುವನ್ನು ಕಾಣುತ್ತಾ ಬಂದಿದೆ, ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು ಎಂದು ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು, ಜಾಗೃತಿಯನ್ನು ಮೂಡಿಸಿದರು