- ಪ್ರೀತಿಸಿ ಮದುವೆಯಾಗುವವರಿಗೀಗ (Cabinet green signal for Eva Namava bill) ಕಾನೂನು ಕವಚ: ‘ಇವ ನಮ್ಮವ ಇವ ನಮ್ಮವ’ ಮಸೂದೆಗೆ ಒಪ್ಪಿಗೆ
- ಜಾತಿ ಹೆಸರಿನ ದೌರ್ಜನ್ಯಕ್ಕೆ ಬ್ರೇಕ್: ಮರ್ಯಾದಾ ಹತ್ಯೆ ತಡೆ ಮಸೂದೆಗೆ ಅಸ್ತು
- ವಯಸ್ಕರ ವಿವಾಹ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ಹೊಸ ಕಾನೂನು ತರಲು ಸಜ್ಜು
Bengaluru: ಜಾತಿ ಆಧಾರಿತ ಭೇದಭಾವ ಮತ್ತು ಅಂತರ್ಜಾತಿ ವಿವಾಹಗಳಿಗೆ ವಿರೋಧವಾಗಿ (Cabinet green signal for Eva Namava bill) ನಡೆಯುತ್ತಿರುವ ಮರ್ಯಾದಾ ಹತ್ಯೆಗಳಂತಹ ಅಮಾನವೀಯ ಘಟನೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
‘ಇವ ನಮ್ಮವ ಇವ ನಮ್ಮವ ಮಸೂದೆ 2026’ಕ್ಕೆ ರಾಜ್ಯ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಈ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ.

ಯುವಕರಿಗೆ ತಮ್ಮ ಜೀವನ ಸಂಗಾತಿಯನ್ನು ಸ್ವತಂತ್ರವಾಗಿ ಆಯ್ಕೆ ಮಾಡುವ ಹಕ್ಕು ಸಂವಿಧಾನ ನೀಡಿರುವುದರಿಂದ, ಅದಕ್ಕೆ ಅಡ್ಡಿಯಾಗುವ ಯಾವುದೇ ಕೃತ್ಯಗಳನ್ನು ಕಟ್ಟುನಿಟ್ಟಾಗಿ ತಡೆಯಲು ಈ ಕಾನೂನು ರೂಪಿಸಲಾಗಿದೆ.
ಸಮಾಜದಲ್ಲಿ ಇನ್ನೂ ಜಾತಿ ಆಧಾರಿತ ಒತ್ತಡಗಳು, ಕುಟುಂಬದ ಗೌರವ ಎಂಬ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ನಿಯಂತ್ರಿಸಲು ಈ ಮಸೂದೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಈ ಮಸೂದೆಯ ಮುಖ್ಯ ಉದ್ದೇಶ ಅಂತರ್ಜಾತಿ ವಿವಾಹಗಳನ್ನು (Cabinet green signal for Eva Namava bill) ಗೌರವಿಸುವುದು ಮತ್ತು ವ್ಯಕ್ತಿಯ ವೈಯಕ್ತಿಕ ಆಯ್ಕೆಗಳಿಗೆ ರಕ್ಷಣೆಯನ್ನು ಒದಗಿಸುವುದು.
ಹಲವೆಡೆ ಯುವಕರು ತಮ್ಮ ಇಚ್ಛೆಯ ವ್ಯಕ್ತಿಯೊಂದಿಗೆ ಮದುವೆಯಾಗಲು ಪ್ರಯತ್ನಿಸಿದಾಗ ಕುಟುಂಬಸ್ಥರು ಅಥವಾ ಸಮುದಾಯದ ಒತ್ತಡಕ್ಕೆ ಒಳಗಾಗಿ ಹಲ್ಲೆ, ಬೆದರಿಕೆ ಅಥವಾ ಕೊಲೆಗಳಿಗೂ ಗುರಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಇಂತಹ ಪ್ರಕರಣಗಳಲ್ಲಿ ಸಮರ್ಪಕ ಕಾನೂನು ರಕ್ಷಣೆ ಇಲ್ಲದ ಕಾರಣ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದಿದೆ.
ಈ ಹಿನ್ನೆಲೆದಲ್ಲಿ ಸರ್ಕಾರ ವಿಶೇಷ ಕಾನೂನು ತರಲು ಮುಂದಾಗಿದೆ. ಮಸೂದೆ ಪ್ರಕಾರ ಪ್ರತಿ ವಯಸ್ಕ ವ್ಯಕ್ತಿಗೂ ತನ್ನ ಇಚ್ಛೆಯ ವ್ಯಕ್ತಿಯನ್ನು ವಿವಾಹವಾಗುವ ಸಂಪೂರ್ಣ ಸ್ವಾತಂತ್ರ್ಯ ಇರಲಿದೆ ಮತ್ತು ಅದಕ್ಕೆ ಕುಟುಂಬ ಸದಸ್ಯರ ಅನುಮತಿ ಅಗತ್ಯವಿಲ್ಲ.
ಹೊಸ ಕಾನೂನಿನ ಪ್ರಕಾರ ಅಂತರ್ಜಾತಿ ವಿವಾಹ ಮಾಡಲು ಬಯಸುವ ಜೋಡಿಗಳು ತಮ್ಮ ವಯಸ್ಸು ಮತ್ತು ಪರಸ್ಪರ ಒಪ್ಪಿಗೆಯ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮೌಖಿಕ ಅಥವಾ ಲಿಖಿತವಾಗಿ ಘೋಷಣೆ ನೀಡಬಹುದು. ಈ ಮಾಹಿತಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಕಳುಹಿಸಲಾಗುತ್ತದೆ.
ಆದರೆ ಈ ಘೋಷಣೆ ಕಡ್ಡಾಯ ಪೂರ್ವಶರ್ತವಾಗಿರುವುದಿಲ್ಲ. ಈ ಮೂಲಕ ಜೋಡಿಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.
ಯಾವುದೇ ವ್ಯಕ್ತಿ, ಕುಟುಂಬ ಸದಸ್ಯರು ಅಥವಾ ಸಂಘಟನೆಗಳು ಈ ಜೋಡಿಗಳ ವಿವಾಹಕ್ಕೆ ಅಡ್ಡಿಪಡಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಜಾತಿ, ಸಂಪ್ರದಾಯ ಅಥವಾ ಕುಟುಂಬ ಗೌರವ ಎಂಬ ಹೆಸರಿನಲ್ಲಿ ಬೆದರಿಕೆ, ಹಲ್ಲೆ ಅಥವಾ ಒತ್ತಡ ಹಾಕುವಂತಹ ಕೃತ್ಯಗಳನ್ನು ಕಾನೂನಿನಡಿ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಮಸೂದೆಯಲ್ಲಿ ಮರ್ಯಾದಾ ಹತ್ಯೆ ಸೇರಿದಂತೆ ಹಲವಾರು ಕೃತ್ಯಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲು ಪ್ರಾವಧಾನ್ಯ ಮಾಡಲಾಗಿದೆ.
ಜೋಡಿಗಳನ್ನು ಕೊಲೆ ಮಾಡಿದರೆ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗಂಭೀರವಾಗಿ ಹಲ್ಲೆ ಮಾಡಿದರೆ ಕನಿಷ್ಠ ಮೂರು ವರ್ಷಗಳ ಸೆರೆಮನೆ ಶಿಕ್ಷೆ ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸುವ ಸಾಧ್ಯತೆ ಇದೆ.
ಸಣ್ಣಪುಟ್ಟ ಹಲ್ಲೆ ಅಥವಾ ಕಿರುಕುಳ ನೀಡಿದರೆ ಕನಿಷ್ಠ ಎರಡು ವರ್ಷಗಳ ಕಠಿಣ ಸೆರೆಮನೆ ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಜೊತೆಗೆ ಜೋಡಿಗಳನ್ನು ಅಪಹರಿಸುವುದು, ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವುದು, ಮನೆ ಅಥವಾ ಗ್ರಾಮದಿಂದ ಹೊರಹಾಕುವುದು, ದ್ವೇಷ ಹರಡುವುದು, ಮಾನಹಾನಿ ಮಾಡುವುದು ಸೇರಿದಂತೆ ಹಲವು ಕೃತ್ಯಗಳನ್ನು ಅಪರಾಧಗಳಾಗಿ ಗುರುತಿಸಲಾಗಿದೆ.
ಇಂತಹ ಪ್ರಕರಣಗಳು ಜಾಮೀನು ರಹಿತವಾಗಿರಲಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದಕ್ಕೂ ಹೆಚ್ಚಾಗಿ, ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ಪೊಲೀಸ್ ರಕ್ಷಣೆ ಹಾಗೂ ಸುರಕ್ಷಿತ ಆಶ್ರಯ ಒದಗಿಸುವ ವ್ಯವಸ್ಥೆಯನ್ನು ಕೂಡ ಈ ಮಸೂದೆ ಒಳಗೊಂಡಿದೆ.
ಜಾತಿಯ ಹೆಸರಿನಲ್ಲಿ ವಿವಾಹವನ್ನು ನಿರಾಕರಿಸುವುದು ಅಥವಾ ಮದುವೆಯ ಭರವಸೆ ನೀಡಿ ನಂತರ ಜಾತಿ ಕಾರಣದಿಂದ ಮದುವೆ ನಿರಾಕರಿಸುವಂತಹ ಘಟನೆಗಳನ್ನು ಕಾನೂನಿನಡಿ ಗಂಭೀರ ಅಪರಾಧವಾಗಿ ಪರಿಗಣಿಸಲಾಗುತ್ತದೆ.
ಜೊತೆಗೆ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಮತ್ತು ಜಾತಿ ಆಧಾರಿತ ಒತ್ತಡಗಳನ್ನು ತಡೆಯಲು ‘ಇವ ನಮ್ಮವ ಇವ ನಮ್ಮವ ವೇದಿಕೆ’ ಸ್ಥಾಪಿಸುವುದಕ್ಕೂ ಸರ್ಕಾರ ಮುಂದಾಗಿದೆ.
ಒಟ್ಟಾರೆ, ಈ ಕಾನೂನು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಸಮಾಜದಲ್ಲಿ ಸಮಾನತೆ ಮತ್ತು ಸಹಿಷ್ಣುತೆಯನ್ನು ಬಲಪಡಿಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.