ಬೆಂಗಳೂರು, ಅ. 02: ಖಾಸಗಿ ಶಾಲೆಗಳ ಒಕ್ಕೂಟ(ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹತ್ಯೆ ಯತ್ನ ಪ್ರಕರಣದ ಜಾಡು ಪತ್ತೆ ಹಚ್ಚುವಲ್ಲಿ ಪೊಲೀಸ್ ವಿಶೇಷ ತಂಡ ಯಶಸ್ವಿಯಾಗಿದೆ.
ಶಶಿಕುಮಾರ್ ಹತ್ಯೆಗೆ ಆರ್ಟಿಇ ಪಾಲಕ ಹಾಗೂ ಹೋಷಕರ ಸಂಘದ ಸದಸ್ಯರೇ ಈ ದಾಳಿ ನಡೆಸಿರೋದು ಪತ್ತೆಯಾಗಿದೆ. ಕ್ಯಾಮ್ಸ್ ಸಂಘದ ಅಧ್ಯಕ್ಷರಾದ ಯೋಗನಂದ್, ಸದಸ್ಯರಾದ ಸುರೇಶ್ ಕುಮಾರ್ ಹಾಗೂ ಚಿದಾನಂದ್ ಎಂಬುವರೇ ಶಶಿಕುಮಾರ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಇತ್ತೀಚೆಗೆ ಶಾಲಾ ಶುಲ್ಕದ ವಿಚಾರವಾಗಿ ಯೋಗಾನಂದ್ ಹಾಗೂ ಶಶಿಕುಮಾರ್ ನಡುವೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ದಾರಿಗೆ ಶಶಿಕುಮಾರ್ ಅಡ್ಡವಾಗಿದ್ದಾನೆ ಎಂಬ ಕಾರಣಕ್ಕೆ ಹತ್ಯೆಯ ಸ್ಕೆಚ್ ಹಾಕಿದ್ದರು. ಇದಕ್ಕಾಗಿ ಸ್ಥಳೀಯ ರೌಡಿಗಳಿಗೆ ಶಶಿಕುಮಾರ್ ಹತ್ಯೆ ಮಾಡುವ ಕೆಲಸವನ್ನು ವಹಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.