Bengaluru: ಕಾರ್ಮಿಕರು ಮತ್ತು ಸಲಕರಣೆಗಳ ಕೊರತೆಯಿಂದಾಗಿ ಕಾವೇರಿ (Cauvery project labor shortage) 5 ನೇ ಹಂತದ ಯೋಜನೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ ಈ ತಿಂಗಳಿನಲ್ಲಿ ಪೂರ್ಣಗೊಳ್ಳಬೇಕಿದ್ದ
ಯೋಜನೆ ತಡವಾಗುತ್ತಿದೆ. ನಗರದ ಹೊರವಲಯದ ಮಹದೇವಪುರ, ದಾಸರಹಳ್ಳಿ, ಬ್ಯಾಟರಾಯನಪುರ (Byatarayanapura) ಮತ್ತು ಬೊಮ್ಮನಹಳ್ಳಿ (Bommanalli) ವ್ಯಾಪ್ತಿಯ I10 ಗ್ರಾಮಗಳಿಗೆ ಯೋಜನೆ
ಪೂರ್ಣವಾದ ಬಳಿಕ ಕಾವೇರಿ ನೀರು ಪೂರೈಕೆ ಆಗಲಿದೆ. ಆದರೆ ಸದ್ಯ ಕಾರ್ಮಿಕರ ಕೊರತೆಯು ಯೋಜನೆ ಪೂರ್ಣಗೊಳ್ಳಲು ಎದುರಾಗಿದೆ.
ಉಪಕರಣಗಳನ್ನು ಯುರೋಪ್ನಿಂದ (Europe) ಆಮದು ಮಾಡಿಕೊಳ್ಳಲಾಗುತ್ತಿದ್ದು ನಗರಕ್ಕೆ ಅದೂ ತಡವಾಗಿ ತಲುಪುತ್ತಿರುವ ಕಾರಣ ಯೋಜನೆ ಕುಂಟುತ್ತಾ ಸಾಗುತ್ತಿದೆ. ಯೋಜನೆ ಕಾಮಗಾರಿಗೆ
ಕುಶಲ ಕಾರ್ಮಿಕರ ಅಗತ್ಯವಿದ್ದು, ಕಾರ್ಮಿಕರನ್ನು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದಿಂದ ರಾಜ್ಯಕ್ಕೆ ಕರೆತರಬೇಕಾಗಿದೆ. ಹೀಗಾಗಿ ಸಮಸ್ಯೆಗಳು ಎದುರಾಗುತ್ತಿವೆ. ಕಾರ್ಮಿಕರ ಸಮಸ್ಯೆ ಕೊರೊನಾ
(Corona) ಬಳಿಕ ಎದುರಾಗಿದೆ. ಬೆಂಗಳೂರು ನೀರು ಸರಬರಾಜು (Bangalore water supply) ಮತ್ತು ಒಳಚರಂಡಿ ಮಂಡಳಿ (Drainage Board) ಅಧಿಕಾರಿಗಳು, ಕಾಮಗಾರಿ ಕಾರ್ಯಗಳ ನಿರ್ವಹಿಸುವ
ಗುತ್ತಿಗೆದಾರರು ಶೀಘ್ರದಲ್ಲಿ ಕಾರ್ಮಿಕರನ್ನು ಕರೆತರಲು ಪ್ರಯತ್ನ ನಡೆಸುತ್ತಿದ್ದಾರೆಂದು (Cauvery project labor shortage)ತಿಳಿಸಿದ್ದಾರೆ.

ಹಲವು ಕಾರಣಗಳಿಂದ ವಿದೇಶಗಳಲ್ಲಿ ತಯಾರಾಗಿರುವ ಬಿಡಿಭಾಗಗಳು ರಾಜ್ಯಕ್ಕೆ ತಲುಪುವುದು ವಿಳಂಬವಾಗುತ್ತಿದೆ.
ಇತ್ತೀಚೆಗೆ ಜಪಾನ್ನಿಂದ(Japan) ಮೋಟಾರ್ಗಳು, ಹೆಚ್ಚಿನ ಸಾಮರ್ಥ್ಯದ ಪಂಪ್ಗಳು ಮತ್ತು ಟರ್ಕಿಯಿಂದ (Turkey) ಸ್ಪೂಸ್ ವಾಲ್ಸ್ಗಳು ಬಂದಿವೆ. ಮತ್ತು ಪಂಪ್ ಮಾನಿಟರಿಂಗ್ ಸಿಸ್ಟಮ್ಗಳೂ ಆಸ್ಟ್ರೇಲಿಯಾದಿಂದ
(Australlia) ಬಂದಿವೆ. ನೀರು ಶುದ್ದೀಕರಣ ಮತ್ತು ಸೆನ್ಸಾರ್ಗಳು ಐರೋಪ್ಯ ದೇಶಗಳಾದ ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಟರ್ಲ್ಯಾಂಡ್ನಿಂದ ಬರುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. 70 ಕಿ.ಮೀ ದೂರ 3000 ಎಂಎಂ
ಗಾತ್ರದ ಪೈಪ್ಗಳನ್ನು ತೊರೆಕಾಡನಹಳ್ಳಿಯಿಂದ ವಾಜರಹಳ್ಳಿಯವರೆಗೆ ಅಳವಡಿಸಲಾಗುತ್ತಿದೆ. ಈ ಕೆಲಸಗಳು ಶೇ.85ರಷ್ಟು ಪೂರ್ಣಗೊಂಡಿವೆ. ಗ್ರಾಮಗಳಿಗೆ ನೀರು ಹರಿಸಲು ಈಗಿರುವ ಟಿ.ಕೆ.ಹಳ್ಳಿ, ಹಾರೋಹಳ್ಳಿ,
ತಾತಗುಣಿಯಲ್ಲಿ ಹೊಸ ಪಂಪಿಂಗ್ ಸ್ಟೇಷನ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದಿದ್ದಾರೆ.
ಕಾವೇರಿ 5ನೇ ಹಂತಕ್ಕೆ ಪೈಪ್ ಲೈನ್ಗಳ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಎಲ್ಲಾ ವಿತರಣಾ ಪೈಪ್ಲೈನ್ ಹಾಕುವ ಕಾರ್ಯ ಪೂರ್ಣಗೊಂಡಿದೆ. 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ದೀಕರಣ
ಘಟಕ ನಿರ್ಮಾಣ ಕಾರ್ಯ ಟಿ.ಕೆ.ಹಳ್ಳಿಯಲ್ಲಿ(T.K Halli) ಪ್ರಗತಿಯಲ್ಲಿದೆ. ಡಿಸೆಂಬರ್ (December)ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್
ಜಯರಾಮ್ (N Jayaram) ಹೇಳಿದ್ದಾರೆ.

110 ಹಳ್ಳಿಗಳಿಗೆ ಕುಡಿವ ನೀರು ಅಧಿಕಾರಿಗಳಿಗೆ ಸೂಚನೆ
ಕುಡಿಯುವ ನೀರಿನ ಸಮಸ್ಯೆಯನ್ನು ಮಹದೇವಪುರ(Mahadevapura) ವಲಯ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಬೇಕು. ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ (Dakshayini)
ಅವರು ಅಗತ್ಯ ಇರುವ ಕಡೆಗಳಲ್ಲಿ ಕೊಳವೆಬಾವಿ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹದೇವಪುರ ವಲಯದ ಹಗದೂರು ವಾರ್ಡ್ ಹಾಗೂ ಹೂಡಿ ಉಪ ವಿಭಾಗ ವ್ಯಾಪ್ತಿಯ
ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿದರು. ಹಗದೂರು ವಾರ್ಡ್ ವ್ಯಾಪ್ತಿಯ ನಲ್ಲೂರಹಳ್ಳಿ, ಪಟ್ಟಂದೂರು ಅಗ್ರಹಾರ, ರಾಮಗೊಂಡನಹಳ್ಳಿ, ಗಾಂಧಿಪುರ ಗ್ರಾಮಗಳಿಗೆ ಭೇಟಿ ನೀಡಿ,
ರಾಮಗೊಂಡನಹಳ್ಳಿ, ಗಾಂಧಿಪುರದಲ್ಲಿ ತಲಾ 2 ಕೊಳವೆಬಾವಿ ಕೊರೆಸಲು ತಿಳಿಸಿದರು.
ಇದನ್ನೂ ಓದಿ :ಶಾಲಾ- ಕಾಲೇಜು ವಾಹನಗಳ ಟ್ಯಾಕ್ಸ್ ಏರಿಕೆ: ಕ್ಯಾಬ್ಗಳಿಗೆ ಜೀವಿತಾವಧಿ ಮೋಟಾರು ವಾಹನ ತೆರಿಗೆ
110 ಹಳ್ಳಿಗಳಿಗೆ ಕಾವೇರಿ ನೀರನ್ನು ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಂಡ ನಂತರ ಪೂರೈಸಲಾಗುತ್ತದೆ. ನಿಗದಿಯಂತೆ ಕೊಳವೆಬಾವಿ ಮೂಲಕ ನೀರನ್ನು ಅಲ್ಲಿಯವರೆಗೆ ಈ ಭಾಗದ ಎಲ್ಲ ಪ್ರದೇಶಗಳಿಗೂ
ಪೂರೈಕೆ ಮಾಡಬೇಕು. ಟ್ಯಾಂಕರ್ಗಳ ಮೂಲಕವೂ ಅಗತ್ಯ ಬಿದ್ದರೆ ನೀರನ್ನು ಪೂರೈಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಶ್ಮಿತಾ ಅನೀಶ್