- ಇತ್ತೀಚಿನ ಕೆಲವು ಸಿನಿಮಾಗಳ ಟೈಟಲ್ (censor board new rules on movie name) ಬದಲಾವಣೆ ಸಿನಿ ವಲಯದಲ್ಲಿ ಚರ್ಚೆಗೆ ಕಾರಣ
- ಎಸ್ ಸರಸ್ವತಿ’, ‘ಹೇ ಭಗವಂತ್’ ಉದಾಹರಣೆಗಳಿಂದ ಮತ್ತೆ ಸೆನ್ಸಾರ್ ನಿಯಮಗಳ ಬಗ್ಗೆ ಚರ್ಚೆ
- ಧರ್ಮ ಸಂಬಂಧಿತ ವಿಷಯಗಳಲ್ಲಿ ಹೆಚ್ಚಿದ ಸೂಕ್ಷ್ಮತೆ; ಸಿನಿ ವಲಯದಲ್ಲಿ ಹೊಸ ನಿಯಮ ಕ್ಕೆ ಮೆಚ್ಚುಗೆ
Bengaluru: ಭಾರತದಲ್ಲಿ ದೇವರುಗಳ ಹೆಸರುಗಳಿಗೆ ವಿಶೇಷ ಮಹತ್ವವಿದೆ. ಮನುಷ್ಯರಿಗೆ ಮಾತ್ರವಲ್ಲದೆ (censor board new rules on movie name) ಮನೆಗಳು, ವ್ಯಾಪಾರ ಸಂಸ್ಥೆಗಳು, ವಾಹನಗಳು ಹಾಗೂ ಹಲವು ವಸ್ತುಗಳಿಗೆ ಸಹ ದೇವರುಗಳ ಹೆಸರಿಡುವ ಪರಂಪರೆ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿದೆ.
ದೇವರ ಹೆಸರನ್ನು ಇಡುವುದರಿಂದ ಶುಭವಾಗುತ್ತದೆ ಮತ್ತು ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿ ಗಟ್ಟಿಯಾಗಿ ನೆಲೆಗೊಂಡಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ದೇವರುಗಳ ಹೆಸರುಗಳನ್ನು ಬಳಸುವ (censor board new rules on movie name) ವಿಚಾರದಲ್ಲಿ ಸೆನ್ಸಾರ್ (Censor) ಮಂಡಳಿ ಹೆಚ್ಚು ಎಚ್ಚರಿಕೆಯ ನಿಲುವು ತಾಳುತ್ತಿರುವಂತೆ ಕಾಣುತ್ತಿದೆ.
ಕೆಲ ಸಿನಿಮಾಗಳ ಶೀರ್ಷಿಕೆಗಳಲ್ಲಿ ದೇವರ ಹೆಸರು ಇದ್ದ ಕಾರಣದಿಂದ ಅವುಗಳನ್ನು ಬದಲಾಯಿಸಲು ಸೂಚಿಸಿರುವ ಘಟನೆಗಳು ಇದೀಗ ಚರ್ಚೆಗೆ ಕಾರಣವಾಗಿವೆ.
ಇತ್ತೀಚೆಗೆ ನಟಿ ವರಲಕ್ಷ್ಮಿ ಶರತ್ಕುಮಾರ್ (Varalakshmi Sarathkumar) ಅಭಿನಯದ ‘ಸರಸ್ವತಿ’ (Saraswati) ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗಿತ್ತು. ಆದರೆ ಸೆನ್ಸಾರ್
ಮಂಡಳಿ ಈ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸಲು ಸೂಚಿಸಿತು. ಅಂತಿಮವಾಗಿ ಚಿತ್ರದ ಹೆಸರು ‘ಎಸ್. ಸರಸ್ವತಿ’ ಎಂದು ಬದಲಾಯಿಸಿ ಪ್ರಮಾಣ ಪತ್ರ ನೀಡಲಾಗಿದೆ.
ಚಿತ್ರದಲ್ಲಿನ ಕಥೆ ಸಾಮಾನ್ಯ ಮಹಿಳೆಯೊಬ್ಬಳ ಜೀವನದ ಕುರಿತಾದದ್ದಾಗಿದ್ದರೂ, ದೇವಿಯ ಹೆಸರಿನೊಂದಿಗೆ ನೇರ ಸಂಬಂಧವಿರುವ ಶೀರ್ಷಿಕೆ ಬಳಸಿರುವ ಕಾರಣದಿಂದ ಸೆನ್ಸಾರ್ ಮಂಡಳಿ ಸೂಕ್ಷ್ಮತೆ ತೋರಿಸಿದೆ ಎಂಬ ಮಾತು ಕೇಳಿಬರುತ್ತಿದೆ.
ಈ ಘಟನೆ ಸಿನಿ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇದೇ ಮೊದಲ ಬಾರಿ ಅಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಹೇ ಭಗವಾನ್’ ಎಂಬ ಸಿನಿಮಾದ ಶೀರ್ಷಿಕೆಯಲ್ಲಿಯೂ ಬದಲಾವಣೆ ಮಾಡಲಾಗಿದೆ.
ಸೆನ್ಸಾರ್ ಮಂಡಳಿಯ ಸೂಚನೆಯ ಮೇರೆಗೆ ಚಿತ್ರದ ಹೆಸರನ್ನು ‘ಹೇ ಭಗವಂತ್’ ಎಂದು ಬದಲಾಯಿಸಿ ಬಿಡುಗಡೆ ಮಾಡಲಾಯಿತು.
ದೇವರ ಹೆಸರನ್ನು ನೇರವಾಗಿ ಬಳಸುವ ಬಗ್ಗೆ ಸೆನ್ಸಾರ್ ಮಂಡಳಿ ಕಟ್ಟುನಿಟ್ಟಿನ ನಿಲುವು ತಾಳುತ್ತಿರುವುದಾಗಿ ಸಿನಿ ವಲಯದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಕೆಲವು ಸಂದರ್ಭಗಳಲ್ಲಿ ದೇವರ ಕುರಿತಾದ ಕಥೆಗಳು ಅಥವಾ ಭಕ್ತಿಯ ವಿಷಯವಿರುವ ಸಿನಿಮಾಗಳಲ್ಲಿ ದೇವರ ಹೆಸರು ಬಳಸಲು ಅನುಮತಿ ನೀಡಲಾಗುತ್ತಿರುವುದೂ ಕಂಡುಬರುತ್ತಿದೆ.
ಉದಾಹರಣೆಗೆ, ದೇವರ ಕುರಿತಾದ ಕಥಾಹಂದರ ಹೊಂದಿರುವ ‘ಹನುಮ್ಯಾನ್’ (Hanuman) ಸಿನಿಮಾ ಯಾವುದೇ ಅಡೆತಡೆಯಿಲ್ಲದೆ ಬಿಡುಗಡೆಯಾಗಿತ್ತು.
ಇದರಿಂದಾಗಿ ಸೆನ್ಸಾರ್ ಮಂಡಳಿ ಯಾವ ಸಂದರ್ಭಗಳಲ್ಲಿ ದೇವರ ಹೆಸರು ಬಳಸಲು ಅನುಮತಿ ನೀಡುತ್ತದೆ ಮತ್ತು ಯಾವ ಸಂದರ್ಭಗಳಲ್ಲಿ ವಿರೋಧ ವ್ಯಕ್ತಪಡಿಸುತ್ತದೆ ಎಂಬ
ಪ್ರಶ್ನೆ ಮೂಡಿದೆ. ಕೆಲ ಚಿತ್ರ ನಿರ್ಮಾಪಕರು ಈ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿಗಳು ಇಲ್ಲದೆ ಇರುವುದರಿಂದ ಗೊಂದಲ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿನಿಮಾ ಶೀರ್ಷಿಕೆಗಳಲ್ಲಿ ದೇವರ ಹೆಸರು ಬಳಸುವ ಬಗ್ಗೆ ಯಾವುದೇ ಅಧಿಕೃತ ನಿಯಮ ಇಲ್ಲದಿದ್ದರೂ, ಅನೌಪಚಾರಿಕವಾಗಿ ಕೆಲ ನಿರ್ಬಂಧಗಳು ಜಾರಿಯಲ್ಲಿರುವಂತೆ ಕಾಣುತ್ತಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಇದರ ಜೊತೆಗೆ ಸೆನ್ಸಾರ್ ಮಂಡಳಿ ಇತ್ತೀಚೆಗೆ ಧರ್ಮ ಸಂಬಂಧಿತ ವಿಷಯಗಳಲ್ಲಿ ಹೆಚ್ಚು ಸೂಕ್ಷ್ಮತೆ ತೋರಿಸುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕೆಲ ವಿಮರ್ಶಕರು ಹೇಳುವಂತೆ, ಧರ್ಮದ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ವರ್ತಿಸುವ ಸೆನ್ಸಾರ್ ಮಂಡಳಿ, ಕೆಲವೊಮ್ಮೆ ರಾಜಕೀಯ ಅಥವಾ ಸಾಮಾಜಿಕ ವಿಷಯಗಳನ್ನು ಪ್ರಶ್ನಿಸುವ ಸಿನಿಮಾಗಳಿಗೆ ಕಠಿಣ ನಿಲುವು ತಾಳುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ನಟ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾಗೆ ಎದುರಾದ ಸಮಸ್ಯೆಗಳು ಕೂಡ ಈ ಚರ್ಚೆಗೆ ಮತ್ತಷ್ಟು ಬಲ ನೀಡಿವೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿನಿಮಾಗಳ ಶೀರ್ಷಿಕೆಗಳ ಕುರಿತಾಗಿ ಸೆನ್ಸಾರ್ ಮಂಡಳಿಯ ನಿಲುವು ಏನು ಎಂಬುದು ಸಿನಿ ವಲಯದಲ್ಲಿ ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಇದನ್ನು ಓದಿ : https://vijayatimes.com/budget-reserved-for-gruhalakshmi-yojana/