ಬಿಹಾರ, ಆ. 04: 2021ರಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಯನ್ನು ಲೆಕ್ಕಾಚಾರವನ್ನು ಸೇರಿಸುವುದು ಬೇಡ ಎಂದು ಕೇಂದ್ರ ಸರಕಾರ ಹೇಳಿದ್ದರೂ, ಕೇಂದ್ರದ ಎನ್ ಡಿ ಎ ಮೈತ್ರಿಕೂಟದ ಸದಸ್ಯವಾಗಿರುವ ಜೆಡಿಯು ಪಕ್ಷದ ನಾಯಕ, ಬಿಹಾರ ಸಿಎಂ ನಿತೀಶ್ ಕುಮಾರ್ ಮಾತ್ರ ಜಾತಿ ಜನಗಣತಿಯ ಸಮರ್ಥನೆಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ಯಾವುದೇ ಜಾತಿಗೂ ಓಲೈಕೆಯಾಗದಂತೆ, ಅಥವಾ ಬೇಸರವಾಗದಂತೆ ಜಾತಿ ಗಣತಿ ನಡೆಸುವುದು, ಜನಪರ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವಿಶಷಯದ ಬಗ್ಗೆ ಅವರು ಬಿಹಾರದ ವಿಪಕ್ಷ ನಾಯಕ, ಆರ್ ಜೆ ಡಿಯ ತೇಜಸ್ವಿ ಯಾದವ್ ಅವರೊಂದಿಗೂ ಚರ್ಚಿಸಿದ್ದು, ಅವರು ಕೂಡ ಇದನ್ನು ಸಮರ್ಥಿಸಿದ್ದಾರೆ.