ನವದೆಹಲಿ ಅ 14 : ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.
ಮುಂದಿನ ದಿನಗಳಲ್ಲಿ ಪೂರೈಕೆಯನ್ನು ದಿನಕ್ಕೆ ಎರಡು ಮಿಲಿಯನ್ ಟನ್ಗಳಿಗೆ ಹೆಚ್ಚಿಸಲಾಗುವುದು. ಇದಲ್ಲದೆ, ವಿದ್ಯುತ್ ಸ್ಥಾವರಗಳಿಗೆ ಇಂಧನವನ್ನು ಪೂರೈಸಲು ಹೆಚ್ಚಿನ ರೇಕ್ಗಳನ್ನು ಒದಗಿಸಲು ರೈಲ್ವೇಗೆ ನಿರ್ದೇಶಿಸಲಾಗಿದೆ ಎಂದಿದೆ.
ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯಗಳ ಕಾರ್ಯದರ್ಶಿಗಳು ಪಿಎಂಒಗೆ ಪ್ರಸ್ತುತಿಗಳನ್ನು ನೀಡಿದ್ದು, ಯಾವುದೇ ವಿದ್ಯುತ್ ವ್ಯತ್ಯಯ ಉಂಟಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ಮತ್ತೊಂದೆಡೆ, ವಿನಿಮಯ ಕೇಂದ್ರಗಳಲ್ಲಿ ವಿದ್ಯುತ್ ಅನ್ನು ಪ್ರೀಮಿಯಂನಲ್ಲಿ ಮಾರಾಟ ಮಾಡುವ ಮೂಲಕ ಮತ್ತು ನಂತರ ತಮ್ಮ ರಾಜ್ಯಗಳಲ್ಲಿ ವಿದ್ಯುತ್ ಕಡಿತ ಮಾಡುವ ಮೂಲಕ ಲಾಭ ಮಾಡಲು ನೋಡಬೇಡಿ ಎಂದು ರಾಜ್ಯ ಸರ್ಕಾರಗಳಿಗೆ ತಿಳಿಸಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಸ್ಟಾಕ್ಗಳು ಏರುತ್ತಿದೆ. ವರ್ಧಿತ ಪೂರೈಕೆಯೊಂದಿಗೆ, ಒಂದು ತಿಂಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ, ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಲ್ ಇಂಡಿಯಾ ತನ್ನ ಪೂರೈಕೆಯನ್ನು ಈಗ 1.9 ದಶಲಕ್ಷ ಟನ್ಗಳಿಗೆ ಹೆಚ್ಚಿಸಿದೆ ಮತ್ತು ಮುಂದಿನ ವಾರದಿಂದ ಇದನ್ನು ಪ್ರತಿದಿನ 2 ಮಿಲಿಯನ್ ಟನ್ಗಳಿಗೆ ಹೆಚ್ಚಿಸಲಿದೆ ಎನ್ನಲಾಗಿದೆ