• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೀಡಿಯೊ ಸಿಟಿಜನ್ ಜರ್ನಲಿಸ್ಟ್

ಕುಸಿಯುತ್ತಿದೆ ಕೆ.ಆರ್‌ ಆಸ್ಪತ್ರೆ ಛಾವಣಿ !! ಅರಮನೆ ನಗರಿಯ ಆಸ್ಪತ್ರೆ ದುಸ್ಥಿತಿ ನೋಡಿ!! ಗೋಡೆಗಳು ಶಿಥಿಲಗೊಂಡಿವೆ, ಕುಡಿಯುವ ನೀರಿಲ್ಲ. ಜನಪ್ರತಿನಿಧಿಗಳಿಗೆ ಕಣ್ಣಿಗೆ ಕಾಣಿಸುತ್ತಿಲ್ವಾ ಕೊಳಕು.

Preetham Kumar P by Preetham Kumar P
in ಸಿಟಿಜನ್ ಜರ್ನಲಿಸ್ಟ್
Featured Video Play Icon
0
SHARES
0
VIEWS
Share on FacebookShare on Twitter

K.R Hospital in Mysore is in the stage of collapse. Officers can’t maintain one and only government hospital of palace city.

ಕುಸಿಯುತ್ತಿದೆ ಅರಮನೆ ನಗರಿಯ ಆಸ್ಪತ್ರೆ ಛಾವಣಿ! ಕೆ.ಆರ್‌ ಆಸ್ಪತ್ರೆಯ ದುಸ್ಥಿತಿಯನ್ನೊಮ್ಮೆ ನೋಡಿ

ಗೋಡೆಗಳು ಶಿಥಿಲಗೊಂಡಿವೆ, ಕುಡಿಯುವ ನೀರಿಲ್ಲ ಜನಪ್ರತಿನಿಧಿಗಳಿಗೆ ಕಣ್ಣಿಗೆ ಕಾಣಿಸುತ್ತಿಲ್ವಾ ಕೊಳಕು.

ಸಾಂಸ್ಕೃತಿಕ ನಗರಿ, ಮೈಸೂರಿನ ಹೃದಯ ಭಾಗದಲ್ಲಿರುವ ಏಕೈಕ ಸರ್ಕಾರಿ ಆಸ್ಪತ್ರೆಯೇ ಕೆಆರ್‌ ಆಸ್ಪತ್ರೆ. ಇದು ಬಡವರ ಆಸ್ಪತ್ರೆಯೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಮೈಸೂರು, ಮಂಡ್ಯ, ಮಡಿಕೇರಿ, ಚಾಮರಾಜನಗರ ಭಾಗದ ನೂರಾರು ಮಂದಿ ಬಂದು ಚಿಕಿತ್ಸೆ ಪಡೆಯುತ್ತಾರೆ. ಬಡವರ, ಮಧ್ಯಮದ ವರ್ಗದ ರೋಗಿಗಳಿಗೆ ಕೆ.ಆರ್‌ ಆಸ್ಪತ್ರೆ ಆಶಾಕಿರಣವಾಗಿದೆ. ಆದ್ರೆ ದುರಂತ ಏನು ಗೊತ್ತಾ? ಬಡವರ ರೋಗಗಳಿಗೆ ಔಷಧಿ ಕೊಟ್ಟು ಅವರ ಪ್ರಾಣ ಉಳಿಸೋ ಈ ಆಸ್ಪತ್ರೆಯೇ ಅವಸಾನದ ಅಂಚಿಗೆ ತಲುಪಿದೆ.

ಕುಸಿಯುತ್ತಿದೆ ಕೆ.ಆರ್‌ ಆಸ್ಪತ್ರೆ ಛಾವಣಿ: ಮಹಾರಾಜರ ಕಾಲದಲ್ಲಿ ನಿರ್ಮಿಸಲಾಗಿರುವ ಕೆ.ಆರ್‌ ಆಸ್ಲತ್ರೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಛಾವಣಿ ಮೇಲೆಲ್ಲಾ ಗಿಡಮರಗಂಟಿಗಳು ಬೆಳೆದು ಗೋಡೆಗಳೆಲ್ಲಾ ಬಿರುಕು ಬಿದ್ದಿವೆ. ಇದರಿಂದ ಕಟ್ಟಡ ಛಾವಣಿ ಸೋರುತ್ತಿದೆ. ಗೋಡೆಗಳೆಲ್ಲಾ ಶಿಥಿಲಗೊಂಡು ಕಟ್ಟಡವೇ ಕುಸಿದು ಬೀಳುವ ಆತಂಕ ಎದುರಾಗಿದೆ.

ಕುಡಿಯಲು ನೀರೂ ಇಲ್ಲ ! : ಇಷ್ಟು ದೊಡ್ಡ  ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ. ಕುಡಿಯುವ ನೀರಿನ ಫಿಲ್ಟರ್‌ ಎಲ್ಲಾ ಕಿತ್ತು ಹೋಗಿದೆ. ಅದರ ನಿರ್ವಹಣೆ ಮಾಡದೆ ಕಾಲಗಳೇ ಕಳೆದಿರಬೇಕು. ಆದ್ರೆ ನಿರ್ವಹಣೆಗೆ, ಕುಡಿಯುವ ನೀರಿನ ಫಿಲ್ಟರ್‌ ಖರೀದಿಗೆ ಬಿಲ್‌ಗಳು ಮಾತ್ರ ವರ್ಷ ವರ್ಷ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಲೇ ಇವೆ.

ರೋಗಿಗಳ ಸಂಬಂಧಿಕರಿಗೆ ಬೀದಿಯೇ ಗತಿ: ಕೆ.ಆರ್‌ ಆಸ್ಪತ್ರೆಗೆ ಸುತ್ತಮುತ್ತಲಿನ ನಾಲ್ಕು ಜಿಲ್ಲೆಗಳ ರೋಗಿಗಳಿ ಆಗಮಿಸುತ್ತಾರೆ. ಆದ್ರೆ ಈ ರೋಗಿಗಳ ಜೊತೆ ಬರೋ ಸಂಬಂಧಿಕರಿಗೆ ಉಳಿದುಕೊಳ್ಳಲು ಇಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ. ರೋಗಿಗಳ ಸಂಬಂಧಿಕರು ಆಸ್ಪತ್ರೆ  ಆವರಣ ಅಥವಾ ಬೀದಿ ಬದಿಯಲ್ಲೇ ಮಲಗಬೇಕು. ಮಳೆಗಾಲದಲ್ಲಂತು ಇವರ ಪಾಡು ಹೇಳ ತೀರದು.

ಕೆಟ್ಟು ನಿಂತಿದೆ ಆಂಬುಲೆನ್ಸ್‌ !: ಇನ್ನು ಈ ಆಸ್ಪತ್ರೆಗೆ ರೋಗಿಗಳು ನಿರಂತರವಾಗಿ ಬರುತ್ತಲೇ ಇರುತ್ತಾರೆ. ಇವರನ್ನು ಕರೆತರಲು ಅಥವಾ ಕರೆದೊಯ್ಯಲು ಬೇಕಾಗಿರುವ ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯವಹಿಸಿ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದ್ದಾರೆ.

ಕೋಟಿ ಕೋಟಿ ಅನುದಾನ ಎಲ್ಲಿಗೆ ಹೋಯ್ತು?: ಕೆ.ಆರ್‌ ಆಸ್ಪತ್ರೆಯ ಮಹತ್ವವನ್ನ ಅರಿತಿರುವ ರಾಜ್ಯ ಸರ್ಕಾರಗಳು ಆಸ್ಪತ್ರೆಯ ದುರಸ್ಥಿತಿಗೆ ಸಿದ್ದರಾಮಯ್ಯ ಅವರ ಸರ್ಕಾರ ಹಾಗೂ ಕುಮಾರ ಸ್ವಾಮಿ ಅವರ ಆಳ್ವಿಕೆ ಕಾಲದಲ್ಲಿ ಕೊಟ್ಟಿಗಟ್ಟಲೆ ಹಣ ಬಿಡುಗಡೆ ಮಾಡಲಾಗಿತ್ತು. ಆದ್ರೆ ಆ ಹಣ ಎಲ್ಲಿಗೆ ಹೋಯಿತು ಅನ್ನೋ ಪ್ರಶ್ನೆ ಸಾರ್ವಜನಿಕರದ್ದು. ಕೋಟಿ ಹಣದಲ್ಲಿ ಪುನರುಜ್ಜೀವನಗೊಳ್ಳಬೇಕಾದ ಆಸ್ಪತ್ರೆ ಛಾವಣಿ, ಗೋಡೆಗಳ ಸ್ಥಿತಿ ಹದಗೆಡುತ್ತಲೇ ಇದೆ. ಇಡೀ ಆಸ್ಪತ್ರೆ ನಿರ್ವಹಣೆ ಇಲ್ಲದೆ ಇವತ್ತೋ, ನಾಳೆಯೋ ಕುಸಿಯುವ ಆತಂಕದಲ್ಲಿದೆ.

ಇಷ್ಟೊಂದು ಅವ್ಯವಸ್ಥೆ ಇರೋ ಕೆ.ಆರ್‌ ಆಸ್ಪತ್ರೆಯ ಬಗ್ಗೆ ಆರೋಗ್ಯ ಇಲಾಖೆಗೆ ಯಾಕೆ ನಿರ್ಲಕ್ಷ್ಯ?  ಸರ್ಕಾರ ಕೋಟಿ ಕೋಟಿ ಅನುದಾನ ಕೊಟ್ರೂ ಆಸ್ಪತ್ರೆ ಪರಿಸ್ಥಿತಿ ಯಾಕೆ ಸುಧಾರಣೆಯಾಗ್ತಿಲ್ಲ? ಬಡವರ ಆಸ್ಪತ್ರೆ ಅಂತ ಹೆಸರು ಪಡೆದಿರೋ ಕೆ.ಆರ್‌ ಆಸ್ಪತ್ರೆ  ಅವ್ಯವಸ್ಥೆ ಆರೋಗ್ಯ ಸಚಿವರಿಗೆ ಕಾಣಿಸುತ್ತಿಲ್ವಾ? ಈ ಸರ್ಕಾರಿ ಆಸ್ಪತ್ರೆಯನ್ನೂ ಮುಚ್ಚಿ ಖಾಸಗಿಯವರಿಗೆ ಅನುಕೂಲ ಮಾಡಿ ಕೊಡುವ ಹುನ್ನಾರವೇನಾದ್ರು ಇದೆಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲೇ ಬೇಕು.

Related News

basket story
ಸಿಟಿಜನ್ ಜರ್ನಲಿಸ್ಟ್

ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!

March 23, 2022
krushi ilakhe
ಸಿಟಿಜನ್ ಜರ್ನಲಿಸ್ಟ್

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

January 20, 2022
Featured Video Play Icon
ಸಿಟಿಜನ್ ಜರ್ನಲಿಸ್ಟ್

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

October 10, 2022
ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು
ಸಿಟಿಜನ್ ಜರ್ನಲಿಸ್ಟ್

ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

January 4, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.