- ಹೇಳಿಕೆ ನೀಡೋದು ಮಾತ್ರವಲ್ಲ ನುಡಿದಂತೆ ನಡೆಯಿರಿ ಎಂದ ಸಿಎಂ ಸಿದ್ಧರಾಮಯ್ಯ
- ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ (CM Siddu about Pahalgam terror attack)
- ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ ಎಂದು ಮೋದಿಗೆ ಟಾಂಗ್
Bengaluru: ಪಹಲ್ಗಾಮ್ ದಾಳಿಗೆ ಕಾರಣರಾದ ಪ್ರತಿಯೊಬ್ಬ ಉಗ್ರನನ್ನು ಹುಡುಕಿ, ಹುಡುಕಿ ಹೊಡೆಯುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಟಾಂಗ್ ನೀಡಿದ್ದಾರೆ.ಪ್ರಧಾನಿ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, 2019ರ ಪುಲ್ವಾಮಾ (Pulwama 2019) ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಬಲಿತೆಗೆದುಕೊಂಡ ಬಳಿಕ ಮೋದಿ ಇದೇ ರೀತಿಯ ಹೇಳಿಕೆ ನೀಡಿದ್ದರು ಎಂದು ಲೇವಡಿ ಮಾಡಿದರು.
2019 ರಲ್ಲಿ ಪ್ರಧಾನಿ ಮೋದಿ ಅದೇ ಹೇಳಿಕೆ ನೀಡಿದ ನಂತರವೂ ಮತ್ತೆ ಉಗ್ರರ ದಾಳಿ ನಡೆದಿದೆ. 40 ಕ್ಕು ಹೆಚ್ಚು ಸೈನಿಕರು ಈಗಾಗಲೇಸಾವನ್ನಪ್ಪಿದ್ದಾರೆ (soldiers have already died). ಆಗಿನಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆಯ ಮಾತಾಡಿ ಜನರ ಕಣ್ಣೋರಿಸುತ್ತ ಬಂದಿದ್ದಾರೆ.ಆದರೆ ಕೇವಲ ಭರವಸೆ ನೀಡಿದರೆ ಸಾಲದು.ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು.
ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅವರು ಏನು ಹೇಳಿದರು? ಆ ಹೇಳಿಕೆಯ ನಂತರ, ಪಹಲ್ಗಾಮ್ನಲ್ಲಿ ಭಯೋತ್ಪಾದಕರು (Terrorists in Pahalgam)26 ಜನರನ್ನು ಕೊಂದರು. ಅವರು ಭಯೋತ್ಪಾದನೆಯನ್ನು (Terrorism) ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು.

ಏನಾಯಿತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಗುರುವಾರ ನವದೆಹಲಿಯಲ್ಲಿ (New Delhi) ನಡೆದ ಸರ್ವಪಕ್ಷ ಸಭೆಯಲ್ಲಿ ಏನಾಯಿತು ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಉಗ್ರರ ದಾಳಿ (Terrorist attack) ಕೇಂದ್ರ ಗುಪ್ತಚರ ವೈಫಲ್ಯ ಎಂದು ಆರೋಪಿಸಿದರು.
ಏಪ್ರಿಲ್ 22 ರ ಮಧ್ಯಾಹ್ನ ಕಾಶ್ಮೀರದ ಪಹಲ್ಗಾಮ್ (Pahalgam, Kashmir) ಬಳಿಯ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಮಂದಿಯನ್ನು ಬ* ಪಡೆದಿದ್ದರು. ಪೆಹಲ್ಗಾಮ್ನ ಉಗ್ರರ ದಾಳಿ (Terrorist attack) ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ.
ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ (Center efficiently) ನಿರ್ವಹಿಸಬೇಕು ಎಂದು ಹೇಳಿದರು.ಭದ್ರತೆ (CM Siddu about Pahalgam terror attack) ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಉಗ್ರರನ್ನು ಮಟ್ಟ ಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು.