- ಶಾಲಾ ಮಕ್ಕಳಿಗೆ ಹೃದಯ ತಪಾಸಣೆ
- ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ (Conduct heart check-up)
- ಹಠಾತ್ ಮರಣಹೊಂದಿದವರಿಗೆ ಮರಣೋತ್ತರ ಪರೀಕ್ಷೆ ಕಡ್ಡಾಯ
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತದಿಂದ(Heart attack) ಸಾ*ನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಹಿನ್ನೆಲೆ ಶಾಲಾ ಮಕ್ಕಳ(school children) ಹಿತದೃಷ್ಟಿಯಿಂದ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ ನಡೆಸಲು ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ಸಚಿವ ಕೆ ಎನ್ ರಾಜಣ್ಣ(Minister KN Rajanna) ತಿಳಿಸಿದ್ದಾರೆ.
ಪ್ರತಿ ವರ್ಷ ರಾಜ್ಯಾದ್ಯಂತ ಶಾಲಾ ಹಂತದಲ್ಲೇ ಮಕ್ಕಳ ಹೃದಯದ ಆರೋಗ್ಯ ತಪಾಸಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕಾಲೇಜು(College) ಹಂತಕ್ಕೂ ವಿಸ್ತರಿಸಲಾಗುವುದು ಇದರಲ್ಲಿ ECG, ಎಕೋ ಕಾರ್ಡಿಯೋಗ್ರಾಫಿ(Echocardiography) ಮತ್ತು ಇತರೆ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುವುದು,

ಮುಂದಿನ ದಿನಗಳಲ್ಲಿ ಪ್ರಿ- ಯೂನಿವರ್ಸಿಟಿ(Pre-university) ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ(Minister of Health and Family Welfare) ಕೆ.ಎನ್.ರಾಜಣ್ಣ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚರುತ್ತಿದ್ದು, ಇದಕ್ಕೆ ಆಹಾರ ಪದ್ದತಿಯ ಬದಲಾವಣೆ(Change in diet),
ಬದಲಾದ ಜೀವನ ಶೈಲಿ(Changed lifestyle) ಹಾಗು ವಂಶ ಪಾರ್ಯ೦ಪಾರ್ಯ(Lineage) ಸೇರಿ ಹಲವು ಕಾರಣಗಳಿವೆ.
ಹೃದಯಾಘಾತ ಪ್ರಕರಣಗಳನ್ನು ರಾಜ್ಯ ಸರ್ಕಾರ(State Govt) ಗಂಭೀರವಾಗಿ ಪರಿಗಣಿಸಿದ್ದು.
ಆಸ್ಪತ್ರೆಗಳಲ್ಲಿ ಹೃದಯಾಘಾತಕ್ಕೆ ಕಾರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕ್ರಮಗಳನ್ನು ಕೈಗೊಂಡು ಜಾಗೃತಿ ಮೂಡಿಸಲು
ಜಿಲ್ಲಾಡಳಿತಕ್ಕೆ(district administration) ಸೂಚನೆ ನೀಡಲಾಗಿದೆ ಎಂದು ಹೇಳಿದರು.ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಖಚಿತ ಮಾಹಿತಿ ಪಡೆದು,
ಸಾವು ನಡೆದ ಪ್ರಕರಣಗಳಲ್ಲಿ ನಿಖರವಾದ ಕಾರಣಗಳನ್ನು ಗುರುತಿಸಲು ಮರಣೋತ್ತರ ಪರೀಕ್ಷೆಯನ್ನು(Postmortem examination) ಕಡ್ಡಾಯ ಮಾಡಲಾಗುವುದು,
ಹಾಗು ಸಾ*ನ ನಿಖರವಾದ ಕಾರಣಗಳನ್ನು ವೈದ್ಯಕೀಯವಾಗಿ ದಾಖಲಿಸಿ ಭವಿಷ್ಯದಲ್ಲಿ ಇಂತಹ ಸಾ*ಗಳು ನಡೆಯದಂತೆ ತಡೆಯಬಹುದು ಮತ್ತು
ಹಾಸನ(Hassan) ಜಿಲ್ಲೆಯಲ್ಲಿ ನಡೆದ ಹೃದಯಾಘಾತ ಪ್ರಕರಣಗಳ ಬಗ್ಗೆ ತನಿಖೆ ಹಾಗೂ ಮಾಹಿತಿ ಪಡೆಯಲು ಈಗಾಗಲೇ ಹೃದ್ರೋಗ ತಜ್ಞರ ತಂಡ(team of cardiologists) ರಚಿಸಿದ್ದು
ಇದನ್ನು ಓದಿ : ಇಂದಿನಿಂದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಎಚ್ಚರಿಕೆ: ಯೆಲ್ಲೋ ಅಲರ್ಟ್ ಘೋಷಣೆ
ವರದಿ ಬಳಿಕ ಮುಂದಿನ ಕ್ರಮದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೃದಯಾಘಾತ (Conduct heart check-up) ಮರಣಗಳ ವಾಸ್ತವಾಂಶ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.