ರಾಜ್ಯದಲ್ಲಿ ಕೊರೊನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕುರಿತಾಗಿ ಕಾಂಗ್ರೆಸ್ ಮೇಕೆದಾಟು ಪ್ರತಿಭಟನೆಯ ಅಂಗವಾಗಿ ರಸ್ತೆಯಲ್ಲಿ ತಮ್ಮ ಬೃಹತ್ ಪಕ್ಷದೊಂದಿಗೆ ಕಾಲ್ನಡಿಗೆಯ ಮೂಲಕ ಪಾದಯಾತ್ರೆ ಹೊರಟ್ಟಿತ್ತು. ಇದನ್ನು ತೀವ್ರವಾಗಿ ಖಂಡಿಸಿದ ಸರ್ಕಾರ ಕೊರೊನಾ ಹೆಚ್ಚುವಲ್ಲಿ ನಿಮ್ಮ ಪಾದಯಾತ್ರೆ ಪ್ರಮುಖ ಕಾರಣವಾಗಲಿದೆ ಎಂದು ತಿಳಿಸಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಮೇಕೆದಾಟು ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಕುರಿತು ಕಾಂಗ್ರೆಸ್ ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದು, ಕೊರೊನ ಸೋಂಕು ಇಳಿಕೆ ಕಂಡ ನಂತರವೇ ಮೇಕೆದಾಟು ಪಾದಯಾತ್ರೆಯನ್ನು ಹೇಗೆ ಮುಂದುವರಿಸಬೇಕು, ಈ ಪಾದಯಾತ್ರೆಯ ಪ್ರಭಾವ ಹೇಗೆ ಹೆಚ್ಚು ಮಾಡಬೇಕು ಎಂಬುದನ್ನು ನಾವು ನಿರ್ಧರಿಸದ್ದೇವೆ ಎಂದು ಪ್ರಸಾವನೆಯಲ್ಲಿ ತಿಳಿಸಿದೆ. ಜನರನ್ನು ರಾಜ್ಯದ ನಾನಾ ಭಾಗಗಳಿಂದ ಕಾಲ್ನಡಿಗೆಯಲ್ಲಿ ಹೇಗೆ ಕರೆತರಬೇಕು ಎಂಬುದು ಕೂಡ ಚರ್ಚೆಯಾಗಿದೆ ಎಂದು ತಿಳಿಸಿದೆ.
ಮೇಕೆದಾಟು ಪಾದಯಾತ್ರೆ ಮುಗಿಸಿದ ನಂತರವೇ ಮಹದಾಯಿ ಹೋರಾಟಕ್ಕೆ ಅಗ್ರಹಿಸಿ ಮತ್ತೊಂದು ಪಾದಯಾತ್ರೆಯನ್ನು ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ತಮ್ಮ ಪಕ್ಷದ ಕಾರ್ಯಾಧ್ಯಕ್ಷರುಗಳಾದ ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಈಶ್ವರ್ ಖಂಡ್ರೆ, ಆರ್ ಧ್ರುವನಾರಾಯಣ ಇವರನ್ನೆಲ್ಲ ಒಟ್ಟಿಗೆ ಸೇರಿಸಿ, ಪಕ್ಷದ ಕಚೇರಿಯಲ್ಲಿ ಸಮಾಲೋಚನೆ ನಡೆಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಜನರನ್ನು ಮೇಕೆದಾಟು ಪಾದಯಾತ್ರೆಗೆ ಕಾಲ್ನಡಿಗೆಯಲ್ಲೇ ಬರುವಂತೆ ಮಾಡುವುದರ ಬಗ್ಗೆ ಮತ್ತು ಪಾದಯಾತ್ರೆಯ ಪ್ರಭಾವ ಹೆಚ್ಚಾಗುವಂತೆ ಮಾಡಬೇಕು ಎಂಬ ಸಲಹೆಗಳು ಬಂದಿವೆ. ಇದರ ಬಗ್ಗೆ ಸುದೀರ್ಘ ಚರ್ಚೆ ಕೂಡ ನಡೆಸಲಾಯಿತು. ನಮ್ಮ ಮಹದಾಯಿ ಹೋರಾಟ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರಮುಖ ಹಾಗೂ ಹೆಚ್ಚು ಪರಿಣಾಮ ಬೀರಲಿವೆ. ಇದರಿಂದ ನಮ್ಮ ಪಕ್ಷಕ್ಕೆ ಹೆಚ್ಚು ಅನುಕೂಲವೇ. ಜನರ ಪರ ನಮ್ಮ ವಿಶ್ವಾಸ ಹಾಗೂ ಕೆಲಸ ಕಾರ್ಯಗಳು ಮತ್ತಷ್ಟು, ಮಗದಷ್ಟು ಹೆಚ್ಚಾಗಲಿವೆ. ಅಭಿಪ್ರಾಯಗಳು ಅನಾವರಣಗೊಳ್ಳಲಿದೆ. ಈ ಕುರಿತಾಗಿ ಆ ಭಾಗದಲ್ಲಿ ಹೋರಾಟಕ್ಕೆ ಯಾರು ಅಧ್ಯಕ್ಷತೆ ವಹಿಸಬೇಕು, ಎಲ್ಲಿಂದ ಆರಂಭಿಸಬೇಕು ಎಂದು ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುವುದರ ಬಗ್ಗೆ ದೀರ್ಘ ಸಮಾಲೋಚನೆ ನಡೆಸಲಾಗಿದೆ ಎಂದು ಡಿಕೆಶಿ ಹೇಳಿದರು